लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಪರಿಚಿತರಿಂದ ನಡೆದ ಭೀಕರ ಹಲ್ಲೆಯ ಖಂಡನೆ..ಮೂಡಿಗೆರೆ…

*ಮೂಡಿಗೆರೆ ವಕೀಲರ ಸಂಘದಿಂದ ಮೌನ ಮೆರವಣಿಗೆ ಹಾಗೂ ಮನವಿ ಸಲ್ಲಿಕೆ(ಮೂಡಿಗೆರೆ, 21 ಏಪ್ರಿಲ್ 2025)*
ಹಿರಿಯ ವಕೀಲರಾದ ಶ್ರೀ ಸದಾಶಿವ ರೆಡ್ಡಿಯವರು – ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರ ಮೇಲೆ ದಿನಾಂಕ 16/04/2025 ರಂದು ಅಪರಿಚಿತರಿಂದ ನಡೆದ ಭೀಕರ ಹಲ್ಲೆಯ ಖಂಡನೆಗೆ ಪ್ರತಿಕ್ರಿಯೆಯಾಗಿ, ಮೂಡಿಗೆರೆ ವಕೀಲರ ಸಂಘದ ವತಿಯಿಂದ ಇಂದು ಬೆಳಿಗ್ಗೆ ಮೌನ ಮೆರವಣಿಗೆ ನಡೆಸಿ, ತಹಶೀಲ್ದಾರ್ರಿಗೆ ಖಂಡನಾ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ದಿನಾಂಕ 19/04/2025 ರಂದು ತುರ್ತು ಸಭೆ ನಡೆಸಿ, ದಿನಾಂಕ 21/04/2025ರಂದು ರಾಜ್ಯದ ಎಲ್ಲಾ ವಕೀಲರು ತಮ್ಮ ಬಲಗೈ ತೋಳಿಗೆ ಕೆಂಪು ಪಟ್ಟಿಯನ್ನು ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಬೇಕೆಂದು ನಿರ್ಧಾರ ಕೈಗೊಂಡಿತು. ಈ ನಿರ್ಧಾರದಂತೆ, ಮೂಡಿಗೆರೆ ವಕೀಲರ ಸಂಘದ ವತಿಯಿಂದ ಅಧ್ಯಕ್ಷರಾದ ಎಚ್.ಕೆ. ದೇವರಾಜ್ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಎಂ. ರಾಘವೇಂದ್ರ ಅವರ ನೇತೃತ್ವದಲ್ಲಿ ಮೌನ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು, “ವಕೀಲರ ಮೇಲಿನ ಈ ಕಿರುಕುಳ ಮತ್ತು ದೌರ್ಜನ್ಯ ಕಾನೂನು ವ್ಯವಸ್ಥೆಯ ಮೇಲೆಯೇ ನೇರ ದಾಳಿ ಆಗಿದ್ದು, ಸರ್ಕಾರ ಗಂಭೀರವಾಗಿ ಪರಿಶೀಲಿಸಿ ಹಲ್ಲೆಗಾರರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಪುನರಾವೃತ್ತಿಯಾಗದಂತೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು” ಒತ್ತಾಯಿಸಿದರು.
ಈ ಮೌನ ಮೆರವಣಿಗೆಯಲ್ಲಿ ಹಿರಿಯ ಸದಸ್ಯರಾದ ಕೆ.ಎಂ. ಪ್ರಶಾಂತ್, ಡಿ.ಎಸ್. ಸುಧೀರ್, ಎಚ್.ಆರ್. ಚಂದ್ರು, ಎಂ.ಎಸ್. ಮಹೇಶ್, ಬಿ.ಟಿ. ನಟರಾಜ್, ನಿತಿನ್ ಕುವೆಲ್ಲೋ, ಮತ್ತು ಎಚ್.ಎಸ್. ರತೀಶ್ ಸೇರಿದಂತೆ ಅನೇಕ ವಕೀಲರು ಬಲಗೈ ತೋಳಿಗೆ ಕೆಂಪು ಪಟ್ಟಿಯನ್ನು ಧರಿಸಿ ಶಿಸ್ತಿನೊಂದಿಗೆ ಭಾಗವಹಿಸಿದರು.

About Author

Leave a Reply

Your email address will not be published. Required fields are marked *