ಅಪರಿಚಿತರಿಂದ ನಡೆದ ಭೀಕರ ಹಲ್ಲೆಯ ಖಂಡನೆ..ಮೂಡಿಗೆರೆ…
1 min read
ಅಪರಿಚಿತರಿಂದ ನಡೆದ ಭೀಕರ ಹಲ್ಲೆಯ ಖಂಡನೆ..ಮೂಡಿಗೆರೆ…
*ಮೂಡಿಗೆರೆ ವಕೀಲರ ಸಂಘದಿಂದ ಮೌನ ಮೆರವಣಿಗೆ ಹಾಗೂ ಮನವಿ ಸಲ್ಲಿಕೆ(ಮೂಡಿಗೆರೆ, 21 ಏಪ್ರಿಲ್ 2025)*
ಹಿರಿಯ ವಕೀಲರಾದ ಶ್ರೀ ಸದಾಶಿವ ರೆಡ್ಡಿಯವರು – ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರ ಮೇಲೆ ದಿನಾಂಕ 16/04/2025 ರಂದು ಅಪರಿಚಿತರಿಂದ ನಡೆದ ಭೀಕರ ಹಲ್ಲೆಯ ಖಂಡನೆಗೆ ಪ್ರತಿಕ್ರಿಯೆಯಾಗಿ, ಮೂಡಿಗೆರೆ ವಕೀಲರ ಸಂಘದ ವತಿಯಿಂದ ಇಂದು ಬೆಳಿಗ್ಗೆ ಮೌನ ಮೆರವಣಿಗೆ ನಡೆಸಿ, ತಹಶೀಲ್ದಾರ್ರಿಗೆ ಖಂಡನಾ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ದಿನಾಂಕ 19/04/2025 ರಂದು ತುರ್ತು ಸಭೆ ನಡೆಸಿ, ದಿನಾಂಕ 21/04/2025ರಂದು ರಾಜ್ಯದ ಎಲ್ಲಾ ವಕೀಲರು ತಮ್ಮ ಬಲಗೈ ತೋಳಿಗೆ ಕೆಂಪು ಪಟ್ಟಿಯನ್ನು ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಬೇಕೆಂದು ನಿರ್ಧಾರ ಕೈಗೊಂಡಿತು. ಈ ನಿರ್ಧಾರದಂತೆ, ಮೂಡಿಗೆರೆ ವಕೀಲರ ಸಂಘದ ವತಿಯಿಂದ ಅಧ್ಯಕ್ಷರಾದ ಎಚ್.ಕೆ. ದೇವರಾಜ್ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಎಂ. ರಾಘವೇಂದ್ರ ಅವರ ನೇತೃತ್ವದಲ್ಲಿ ಮೌನ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು, “ವಕೀಲರ ಮೇಲಿನ ಈ ಕಿರುಕುಳ ಮತ್ತು ದೌರ್ಜನ್ಯ ಕಾನೂನು ವ್ಯವಸ್ಥೆಯ ಮೇಲೆಯೇ ನೇರ ದಾಳಿ ಆಗಿದ್ದು, ಸರ್ಕಾರ ಗಂಭೀರವಾಗಿ ಪರಿಶೀಲಿಸಿ ಹಲ್ಲೆಗಾರರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಪುನರಾವೃತ್ತಿಯಾಗದಂತೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು” ಒತ್ತಾಯಿಸಿದರು.
ಈ ಮೌನ ಮೆರವಣಿಗೆಯಲ್ಲಿ ಹಿರಿಯ ಸದಸ್ಯರಾದ ಕೆ.ಎಂ. ಪ್ರಶಾಂತ್, ಡಿ.ಎಸ್. ಸುಧೀರ್, ಎಚ್.ಆರ್. ಚಂದ್ರು, ಎಂ.ಎಸ್. ಮಹೇಶ್, ಬಿ.ಟಿ. ನಟರಾಜ್, ನಿತಿನ್ ಕುವೆಲ್ಲೋ, ಮತ್ತು ಎಚ್.ಎಸ್. ರತೀಶ್ ಸೇರಿದಂತೆ ಅನೇಕ ವಕೀಲರು ಬಲಗೈ ತೋಳಿಗೆ ಕೆಂಪು ಪಟ್ಟಿಯನ್ನು ಧರಿಸಿ ಶಿಸ್ತಿನೊಂದಿಗೆ ಭಾಗವಹಿಸಿದರು.