ಕೆ.ಪಿ.ಪೂರ್ಣ ಚಂದ್ರತೇಜಸ್ವಿ ಪ್ರತಿಷ್ಟಾನಕ್ಕೆ ತರೀಕೆರೆ ಶಾಸಕರ ಬೇಟಿ…
1 min read
ಕೆ.ಪಿ.ಪೂರ್ಣ ಚಂದ್ರತೇಜಸ್ವಿ ಪ್ರತಿಷ್ಟಾನಕ್ಕೆ ತರೀಕೆರೆ ಶಾಸಕರ ಬೇಟಿ.
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿರುವ ಕೆ.ಪಿ.ಪೂರ್ಣಚಂದ್ರತೇಜಸ್ವಿ ಪ್ರತಿಷ್ಠಾನಕ್ಕೆ ತರೀಕೆರೆ ಶಾಸಕರಾದ ಜಿ.ಹೆಚ್.ಶ್ರೀನಿವಾಸ್ ಭೇಟಿ ನೀಡಿದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ತರೀಕೆರೆ ಕ್ಷೇತ್ರದ ಶಾಸಕರಾದ ಜಿ.ಹೆಚ್. ಶ್ರೀನಿವಾಸ್ ಅವರು ಕುಟುಂಬ ಸಮೇತರಾಗಿ ಶುಕ್ರವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೂಡಿಗೆರೆ ಮಾಯಾವಿ ಎಂದೇ ಹೆಸರುವಾಸಿಯಾಗಿದ್ದ ತೇಜಸ್ವಿಯವರ ನೆನಪುಗಳನ್ನು, ಅವರ ಆಲೋಚನೆಗಳನ್ನು, ಅವರ ಪರಿಸರದ ಪ್ರೇಮವನ್ನು ಮರುಕಳಿಸುವಂತೆ ಮಾಡಿರುವ ತೇಜಸ್ವಿ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದರು.
ಪ್ರತಿಷ್ಠಾನದಲ್ಲಿ ಕಳೆದ ಕೆಲ ಸಮಯ ತೇಜಸ್ವಿಯವರ ಪುಸ್ತಕಗಳನ್ಜು ಓದಿದ ಸವಿ ನೆನಪನ್ನು ನೆನಪಿಸಿತು. ಅವರ ಬದುಕಿನ ಚಿತ್ರಣಗಳನ್ನು ಸಂಗ್ರಹಿಸಿರುವ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದರು.
ತೇಜಸ್ವಿ ಪ್ರತಿಷ್ಠಾನದ ವಸ್ತು ಸಂಗ್ರಹಾಲಯದಲ್ಲಿರುವ ಹಳೆಯ ಸಾಮಾಗ್ರಿಗಳನ್ನು ಕಂಡು ಬಾಲ್ಯದ ದಿನಗಳು ನೆನಪಾಯಿತು. ಕೀಟ ಸಂಗ್ರಹಾಲಯವೂ ಆಕರ್ಷಣೀಯವಾಗಿತ್ತು. ಮುಖ್ಯಮಂತ್ರಿಗಳು ತೇಜಸ್ವಿ ಪ್ರತಿಷ್ಠಾನಕ್ಕೆ ಈ ಮುಂಚೆ ಅನುದಾನವನ್ನು ನೀಡಿದ್ದರು. ಮುಂದಿನ ದಿನಗಳಲ್ಲಿ ಪ್ರತಿಷ್ಠಾನದ ಅಭಿವೃದ್ದಿಗೆ ಮತ್ತಷ್ಟು ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು ಎಂದರು.