लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪಿ ಹೆಚ್ ಡಿ ಪದವಿ..

ಕೂದುವಳ್ಳಿ ಮಹೇಶ್‌ಗೆ ಪಿಹೆಚ್.ಡಿ. ಪದವಿ
ಚಿಕ್ಕಮಗಳೂರು. ತಾಲ್ಲೂಕ್ ವಸ್ತಾರೆ ಹೋಬಳಿ ಕೂದುವಳ್ಳಿ ಗ್ರಾಮದ ಮಹೇಶ್ ಕೆ. ಹೆಚ್. ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಹೆಚ್.ಡಿ. ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದೆ. ಇವರು ಆಂತರಿಕ .. ಸಂಶೋಧನಾರ್ಥಿಯಾಗಿ, ಗಂಗಾವತಿಯ ಎಸ್. ಕೆ.ಎನ್.ಜಿ ಕಾಲೇಜಿನ ಬಾಹ್ಯ ಮಾರ್ಗದರ್ಶಕರಾದ ಡಾ.ವೈ.ಎಸ್.ವಗ್ಗಿ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಸಮಾಜವಿಜ್ಞಾನಗಳ ನಿಕಾಯದ ಅಭಿವೃದ್ಧಿ ಅಧ್ಯಯನ ವಿಭಾಗಕ್ಕೆ ಸಲ್ಲಿಸಿದ “ಕಾಫಿ ತೋಟದ ದುಡಿಮೆಗಾರರ ಸಮಸ್ಯೆಗಳು ಮತ್ತು ಸವಾಲುಗಳು” ಎಂಬ ಮಹಾಪ್ರಬಂಧಕ್ಕೆ ಅರ್ಥಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ (ಪಿಹೆಚ್.ಡಿ.) ಪದವಿಯನ್ನು ನೀಡಿ ಗೌರವಿಸಿದೆ.

04 2025 ಶುಕ್ರವಾರದಂದು ವಿಶ್ವವಿದ್ಯಾಲಯದ ವಿದ್ಯಾರಣ್ಯ ಆವರಣದ ನವರಂಗ ಬಯಲು ರಂಗಮಂದಿರದಲ್ಲಿ ನಡೆದ 33ನೇ ನುಡಿಹಬ್ಬ (ಘಟಿಕೋತ್ಸವ)ದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರೂ ಮತ್ತು ಕನ್ನಡ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಸನ್ಮಾನ್ಯ ಶ್ರೀ ಥಾವರ್ ಚಂದ್ ಗೆಹೋಟ್ ಅವರ ಮತ್ತು ಕರ್ನಾಟಕ ಸರ್ಕಾರದ ಗೌರವಾನ್ವಿತ ಉನ್ನತ ಶಿಕ್ಷಣ ಸಚಿವರೂ, ಸಮಕುಲಾಧಿಪತಿಗಳೂ ಆಗಿರುವ ಸನ್ಮಾನ್ಯ ಶ್ರೀ ಡಾ.ಎಂ.ಸಿ.ಸುಧಾಕರ್ ಅವರ ಮತ್ತು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ. ಪರಮಶಿವಮೂರ್ತಿ ಅವರ ಸಮ್ಮುಖದಲ್ಲಿ ಪಿಹೆಚ್.ಡಿ. ಪದವಿಯನ್ನು ನೀಡಲಾಯಿತು.

ಇವರು ಚಿಕ್ಕಮಗಳೂರಿನ ಐ.ಡಿ.ಎಸ್.ಜಿ ಕಾಲೇಜಿನಲ್ಲಿ ಎಂ.ಎ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿ, ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದಂತೆ ಕಾಫಿ ತೋಟದ ದುಡಿಮೆಗಾರರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಸಂಶೋಧನೆಯನ್ನು ಕೈಗೊಂಡು ಅಧ್ಯಯನವನ್ನು ಸಂಪೂರ್ಣಗೊಳಿಸಿ ಇದೀಗ ಪಿಹೆಚ್.ಡಿ. ಪದವಿಯನ್ನು ಪಡೆದಿದ್ದಾರೆ.

ಮಹೇಶ್ ಕೆ. ಹೆಚ್. ಇವರು ಕೂದುವಳ್ಳಿ ಗ್ರಾಮದ ದಂಪತಿಗಳಾದ ಹಿರುಗಯ್ಯ ಮತ್ತು ದೇವಮ್ಮ ಇವರ ಮಗನಾಗಿದ್ದು, ಕಾಫಿ ತೋಟದ ದುಡಿಮೆಯನ್ನೇ ಅವಲಂಬಿಸಿಕೊಂಡು ಬದುಕುತ್ತ ಬಂದಿರುವ ಬಡಕುಟುಂಬದವರಾಗಿದ್ದಾರೆ. ಇವರು ಸಹ ಶಾಲಾ, ಕಾಲೇಜ್ ಓದಿನ ದಿನಗಳಲ್ಲಿಯೇ ಕಾಫಿ ತೋಟದಲ್ಲಿ ದುಡಿಮೆ ಮಾಡುತ್ತ, ಜೊತೆಗೆ ಶಿಕ್ಷಣವನ್ನು ಮುಗಿಸಿದವರಾಗಿದ್ದಾರೆ. ಆದ್ದ-ರಿಂದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳನ್ನು ನೇರವಾಗಿ 903-ದ್ದಾರೆ. ಈ ಹಿನ್ನೆಲೆಯಲ್ಲಿ ಸಂಶೋಧನೆಗಾಗಿ ಕಾಫಿ ತೋಟದ ದುಡಿಮೆಗಾರರಿಗೆ ಸಂಬಂಧಿಸಿದಂತೆ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡು ಆಳವಾದ ಅಧ್ಯಯನ ನಡೆಸಿದ್ದಾರೆ. ಆದ್ದರಿಂದ ಇವರು ಅಂದು ಕಾಫಿ ತೋಟದ ದುಡಿಮೆಗಾರರಾಗಿದ್ದು. ಇಂದು ಕಾಫಿ ತೋಟದ ದುಡಿಮೆಗಾರರ ಮೇಲೆ ಸಂಶೋಧನೆ ನಡೆಸಿ ಪಿಹೆಚ್.ಡಿ. ಡಾಕ್ಟರೇಟ್ ಪದವಿದಾರರಾಗಿದ್ದಾರೆ.

ಇವರು ಕೂದುವಳ್ಳಿ ಗ್ರಾಮಕ್ಕೆ ಮತ್ತು ಅವರ ಕುಟುಂಬಕ್ಕೆ ಪಿಹೆಚ್.ಡಿ. ಪದವಿ ಪಡೆದವರಲ್ಲಿ ಮೊದಲಿಗರಾಗಿದ್ದು, ಇವರ ಕುಟುಂಬ ವರ್ಗದವರು ಮತ್ತು ಗೆಳೆಯರು ಹಂಪಿಯಲ್ಲಿ ನಡೆದ ನುಡಿಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಇವರನ್ನು ಅಭಿನಂದಿಸಲಾಯಿತು.

About Author

Leave a Reply

Your email address will not be published. Required fields are marked *