ಬಾರ್ ಬೆಂಡಿಂಗ್ ಕೆಲಸ ಮಾಡುವ ಚಂದ್ರು ಎಂಬುವರು…..
1 min read
ನಾವೆಲ್ಲ ಕಳೆದು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿದ್ದೇವೆ. ಇಂತಹ ಪ್ರಕ್ರಿಯೆಯ ಎದುರು ಒಂದು ಕುತೂಹಲವಾಗಿ, ಹಲವು ಕೌತುಕವಾಗಿ ನಮಗೆ ಕಂಡಿದ್ದು ಬಾರ್ ಬೆಂಡಿಂಗ್ ಕೆಲಸ ಮಾಡುವ ಚಂದ್ರು ಎಂಬುವರು.
ಈ ಚಂದ್ರು
ಕಾಫಿ ನಾಡು ಚಿಕ್ಕಮಗಳೂರು ನಗರಕ್ಕೆ ಅಂಟಿಕೊಂಡಿರುವ ಗವನಹಳ್ಳಿ ಗ್ರಾಮದ ಓದು ಬರವಣಿಗೆ ಸಾಹಿತ್ಯದ ಹಿನ್ನೆಲೆ ಇರದ ಸಾಮಾನ್ಯ ಕುಟುಂಬವೊಂದರ ಸದಸ್ಯ ,
ಕಾಲೇಜು ಮೆಟ್ಟಿಲನ್ನು ಹತ್ತದ, 10ನೇ ತರಗತಿಯನ್ನು ಕೂಡ ಪಾಸು ಮಾಡದ ಈ ಚಂದ್ರು ಅವರ ವೃತ್ತಿ ಬಾರ್ ಬೆಂಡಿಂಗ್ ಕೆಲಸ,
ಇಂತಹ ಚಂದ್ರು ಯಾಕೆ?
ಈ ಹೊತ್ತಿಗೆ ನಮ್ಮ ಸುದ್ದಿಗೆ ಮುಖ್ಯ ಚರ್ಚೆ ಆಗುತ್ತಾರೆ ಎಂದರೆ ?
ಅದೊಂದು ಕುತೂಹಲಗಳ ಮೂಟೆ ಎನ್ನಬಹುದು!!!!
ಪುಸ್ತಕಗಳನ್ನು ಕೊಂಡು ಓದಬೇಕು ಎಂಬ ನಿಲುವು ನಮ್ಮೆಲ್ಲರ ದಾಗಬೇಕು, ಸಾಹಿತ್ಯ ಎಂಬುದು ಈ ನೆಲದ ಕಟ್ಟೆ ಕಡೆಯ ಜನರ ಮನೆ ~ಮನದ ಅಂಗಳದಲ್ಲಿ ನೆಲೆಗೊಂಡು ನಲಿದಾಡಬೇಕು ಎಂಬ ವಿಶ್ವಾಸಾತ್ಮಕವಾದ ವಿಮರ್ಶೆಯೊಂದು ನಮ್ಮೋಳಗೆ ನಮ್ಮನ್ನು ಕಡೆಯುತ್ತಿರುವಾಗ ನಮಗೆ ಎದುರಾದದ್ದು ಈ ಬಾರ್ ಬೆಂಡಿಂಗ್ ಚಂದ್ರು.
ಎಸ್ ✊.
ಈ ಬಾರ್ ಬೆಂಡಿಂಗ್ ಚಂದ್ರುವಿಗೆ *ಹೊನ್ನ ಬಿತ್ತೇವು ಹೊಲಕೆಲ್ಲ* ಗ್ರಂಥದ ಮೇಲಿರುವ ಆಸಕ್ತಿ ಮತ್ತು ಅಭಿಮಾನವನ್ನು ಕುರಿತು ಆಡಲೇಬೇಕಾದ ನಮ್ಮ ತೆರದ ಮನದ ನಾಲ್ಕು ಮಾತುಗಳು ನಿಮ್ಮೊಂದಿಗೆ….
ಪದವಿ ಮೇಲೆ ಪದವಿ ಪಡೆದ ಅನೇಕ ಅಕ್ಷರವಂತರು ಈ ಸಮಾಜದಲ್ಲಿ ಸಾಹಿತ್ಯ ಮತ್ತು ಓದುನಿಂದ ಹೊರತಾಗಿ ಉಳಿದಿದ್ದಾರೆ, ಅದರಲ್ಲೂ ಇಂದಿನ ವಿದ್ಯಾರ್ಥಿ ಯುವ ಸಮೂಹ ಪಠ್ಯ ಪುಸ್ತಕಗಳಿಗೆ, ಪರೀಕ್ಷಾ ಅಂಕಗಳಿಗಸ್ಟೆ ಹೆಚ್ಚಾಗಿ ಅಂಟಿಕೊಂಡಿಬಿಟ್ಟಿದೆ, ಪೋಷಕರು ಮತ್ತು ಶಿಕ್ಷಕರು ಕೊಡ ಪರೀಕ್ಷಾ ಅಂಕಗಳಿಗಷ್ಟೇ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ,
ಸಾಮಾಜಿಕ ಸಂಗತಿಗಳ ಆಗುಹೋಗುಗಳ ಬಗ್ಗೆ, ಈ ಕುರಿತು ಓದು ಮತ್ತು ಬರಹಕ್ಕೆ ಬೆನ್ನು ಮಾಡಿ, ಬೆವರಿಳಿಯದ ಶ್ರಮವಿಲ್ಲದ ಉದ್ಯೋಗದತ್ತ ದಾಪುಗಾಲಿಡುತ್ತಾ ಹಣ !ಹಣ !ಹಣ ! ಎನ್ನುತ ಅ ಹಣದ ಮೂಟೆಯ ಹಿಂದೆ ಇಂದಿನ ಯುವ ಸಮೂಹ ಸಾಗುತ್ತಿದೆ. ಇದರರ್ಥ ನಮಗೆ ಉದ್ಯೋಗ ಮತ್ತು ಹಣ ಬೇಡ ಎಂದಲ್ಲ, ಬದುಕಿಗೆ ಹಣವೇ ಮುಖ್ಯವಾಗಬಾರದು, ಈ ಬದುಕೊಂದು ಸಂಪೂರ್ಣವಾಗ ಬೇಕಾದರೆ ಆ ಬದುಕಿನೊಳಗೆ ಕಲೆ ಸಾಹಿತ್ಯ ಬರವಣಿಗೆ ಓದು ಕೂಡ ನಮ್ಮದಾಗಿರಬೇಕು ಎಂಬ ಆಶಯ ಈ ಮಾತಿನ ತಾತ್ಪರ್ಯವಾಗಿದೆ.
ಇನ್ನೂ, ಈ ಬರವಣಿಗೆಯ ಮುಖ್ಯ ಚರ್ಚೆ ಆಗಬೇಕಿರುವುದು ಹತ್ತನೇ ತರಗತಿಯನ್ನು ಪಾಸ್ ಮಾಡಲಾಗದ ನಮ್ಮ ಬಾರ್ ಬೆಂಡಿಂಗ್ ಕೆಲಸದ ಚಂದ್ರು ಅವರೊಳಗಿರುವ ಓದಿನ ಆಸಕ್ತಿ ಮತ್ತು ಕುತೂಹಲವು ಅಕ್ಷರವಂತ ಸಮಾಜಕ್ಕೆ ದಿಕ್ಸೂಚಿಯಾಗಿದೆ.
ಚಿಕ್ಕಮಗಳೂರಿನಲ್ಲಿ ನಡೆದ *ಹೊನ್ನ ಬಿತ್ತೇವು ಹೊಲಕೆಲ್ಲ* ಗ್ರಂಥದ ಮೂರನೆ ಆವೃತ್ತಿಯ ಲೋಕಾರ್ಪಣೆ ಸಮಾರಂಭದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿದು. ಆ ಕಾರ್ಯಕ್ರಮಕ್ಕೆ ಬಂದು, ಇಡೀ ಕಾರ್ಯಕ್ರಮವನ್ನು ಪೂರ್ಣವಾಗಿ ವೀಕ್ಷಿಸಿ, ಗ್ರಂಥದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಬರಹವನ್ನು ನೋಡಿ, ಈ ಬರಹದಿಂದ ಆಸಕ್ತಿಗೊಂಡು,ಸಭೆಯಲ್ಲಿ ಈ ಗ್ರಂಥದ ಬಗ್ಗೆ ಆಡಿದ ಮಾತುಗಳಿಂದ ತನ್ನ ಕುತೂಹಲವನ್ನು ಹೆಚ್ಚಿಸಿಕೊಂಡು, ಕಾರ್ಯಕ್ರಮವನ್ನು ಮುಗಿಸಿಹೋಗುವಾಗ,ಒಂದಲ್ಲ, ಎರಡು ಪುಸ್ತಕಗಳನ್ನು 1000ರೂ ಹಣ ಕೊಟ್ಟು ಕೊಂಡುಕೊಂಡು, ಆ ಪುಸ್ತಕಗಳನ್ನು ಎದೆಗವಚಿಕೊಂಡು,
ನಾನು ಪುಸ್ತಕವನ್ನು ಕೊಂಡು ಓದಬೇಕು ,
ಓದ ಬಲ್ಲೆ ಎಂಬ ಹೆಮ್ಮೆಯೊಂದನ್ನು ತನ್ನದಾಗಿಸಿಕೊಳ್ಳುವ ಪರಿಯಿದೆಯೇಲ್ಲ !
ಅದು ಈ ಜಾನಪದ ಗ್ರಂಥದ ಲೋಕಾರ್ಪಣೆಯ ಸಾರ್ಥಕತೆ ಎನ್ನಬಹುದು !!!!
ಇತ್ತೀಚಿಗೆ ಚಿಕ್ಕಮಗಳೂರಿನ ಪ್ರವಾಸಿ ಮಂದಿರದ ಎದುರು, ಈ ಬಾರ್ ಬೆಂಡಿಂಗ್ ಚಂದ್ರು ಅನಿರೀಕ್ಷಿತವಾಗಿ ಎದುರಾಗಿ , ಸಂತಸ ಮತ್ತು ಸಂಭ್ರಮದಿಂದ *ಹೊನ್ನ ಬಿತ್ತೇವು ಹೊಲಕೆಲ್ಲ* ಗ್ರಂಥವನ್ನು ಕೊಂಡುಕೊಂಡು ಹೋಗಿ ಓದುತ್ತಿದ್ದೇನೆ ಸರ್, ಎರಡು ಪುಸ್ತಕವನ್ನು ಖರೀದಿಸಿದೆ ಎಂದರು.
ಆಶ್ಚರ್ಯದಿಂದ, ಎರಡು ಪುಸ್ತಕಗಳನ್ನು ಯಾಕೆ ಖರೀದಿಸಿದ್ದಿರಿ ?
ಒಂದು ಪುಸ್ತಕ ಓದಲು ಸಾಕಾಗುವುದಿಲ್ಲವೇ ?
ಎಂದು ಪ್ರಶ್ನಿಸಿದಾಗ ಚಂದ್ರವಿನಿಂದ ಬಂದ ಉತ್ತರ ಹೀಗಿದೆ.
ಆ ಪುಸ್ತಕಗಳನ್ನು ನೋಡಿ, ಪುಸ್ತಕದ ಬಗ್ಗೆ ಬರೆದ ಆಡಿದ ಮಾತುಗಳನ್ನು ಕೇಳಿ, ಯಾಕೋ ಏನೋ ಒಂದು ಪುಸ್ತಕವನ್ನು ಕೊಂಡುಕೊಳ್ಳುವುದರಲ್ಲಿ ತೃಪ್ತಿ ಆಗಲಿಲ್ಲ, ಹಾಗಾಗಿ ಎರಡು ಪುಸ್ತಕವನ್ನು ಕೊಂಡುಕೊಂಡೆ ಎಂದರು.
ಸಮಾರಂಭದಲ್ಲಿ ಸಾಹಿತ್ಯ ಸಂಸ್ಕೃತಿಯ ಬಗ್ಗೆ , ಈ ದೇಶದ ಹಿರಿಮೆ ಗರಿಮೆಯ ಬಗ್ಗೆ ಬಾವೋದ್ವೇಗದಿಂದ ಮೇಜನ್ನು ಕುಟ್ಟಿ ಕುಟ್ಟಿ ಭಾಷಣ ಮಾಡುವ ರಾಜಕಾರಣಿಗಳುನ್ನು ಹಲವು ವರ್ಷಗಳಿಂದ ಹೆಗಲ ಮೇಲೆ ಕೈ ಕೈಹಾಕಿ, ಕೈ ಹಾಕಿಸಿಕೊಂಡು ತೀರಾ ಅಂದರೆ ತೀರಾ ಹತ್ತಿರದಿಂದ ನೋಡಿದ್ದೇನೆ, ಕಂಡಿದ್ದೇನೆ.
ಸಭೆ ಸಮಾರಂಭಗಳಲ್ಲಿ ಪುಸ್ತಕದ ಮಾರಾಟದ ಸ್ಟಾಲ್ಗಳು ಇದ್ದರೂ ಕೂಡ ಆ ಪುಸ್ತಕದ ಮಳಿಗೆಗಳ ಕಡೆ ಮುಖ ಹಾಕದೆ ನೇರವಾಗಿ ವೇದಿಕೆಯಿಂದ ಕಾರು ಹತ್ತುತ್ತಾರೆ,
ಕೆಲವೇ ಕೆಲವು ಬೆರಳೆಣಿಕೆಯಷ್ಟು ರಾಜಕಾರಣಿಗಳನ್ನು ಹೊರತುಪಡಿಸಿದರೆ, ಉಳಿದ ಬಹುತೇಕ ರಾಜಕಾರಣಿಗಳೆಲ್ಲ ಹೆಚ್ಚಾಗಿ ಬಾರ್ ಅಂಡ್ ರೆಸ್ಟೋರೆಂಟ್, ಕ್ವಾರಿ ಅಂಡ್ ಲ್ಯಾಂಡ್ ಬಿಜಿನೆಸ್, ಗುತ್ತಿಗೆ, ರೆಸಾರ್ಟ್ ಅಂಡ್ ಹೋಂಸ್ಟೇ ಗಳ ಕಡೆ ಕಡೆ ಅವರ ಒಲವು ಮತ್ತು ಆಸಕ್ತಿ ಹೆಚ್ಚಾಗಿರುವುದನ್ನು ಕಾಣಬಹುದು.
ಪುಸ್ತಕದ ಓದಿಗೆ ಪದವಿ ಮತ್ತು ಹುದ್ದೆ ಮುಖ್ಯ ಅಲ್ಲ, ಆಸಕ್ತಿ ಹಾಗೂ ಕುತೂಹಲ ಅತೀ ಮುಖ್ಯವಾದದ್ದು, ಹಣ ಗಳಿಸಿ ಐಷಾರಾಮಿ ಬದುಕನ್ನು ಬದುಕುವುದಷ್ಟೇ ಜೀವನದ ಪರಮ ಗುರಿಯಲ್ಲ, ಕಲೆ ಸಾಹಿತ್ಯ ಸಂಸ್ಕೃತಿ ನಮ್ಮ ಬದುಕಿನ ಭಾಗವಾಗಬೇಕು ಎಂಬುದಕ್ಕೆ, 10ನೇ ತರಗತಿ ಪಾಸು ಮಾಡಲಾಗದ ಈ ಬಾರ್ ಬೆಂಡಿಂಗ್ ಚಂದ್ರು ಸಾಕ್ಷಿಯಾಗಿದ್ದಾರೆ ಎನ್ನಬಹುದು.
ಏನೇ ಇರಲಿ !
ಉತ್ತಮ ಪುಸ್ತಕಗಳು ಅತ್ಯುತ್ತಮವಾದ ಸ್ನೇಹಿತರಿದ್ದಂತೆ ಎಂಬ ಮಾತಿದೆ. ಮಾನವನ ನಾಗರೀಕತೆಯ ವಿಕಾಸಕ್ಕೆ ಪುಸ್ತಕಗಳ ಕೊಡುಗೆ ಅಪಾರವಾಗಿದೆ. ಸಾಹಿತ್ಯ ಬರವಣಿಗೆ ಎಂಬುದು ವಿಶ್ವವಿದ್ಯಾಲಯದ ಮೆಟ್ಟಿಲನ್ನು ಹತ್ತಿದವರಿಗೆ ಮಾತ್ರ ಎಂಬ ಭಾವನೆಯನ್ನು ತೊಡೆದುಹಾಕಿ, ಅದು ಜನಸಾಮಾನ್ಯರ ಮನೆಯ ಮನದ ಒಳಗೂ ಇದೆ ಎಂಬುದಕ್ಕೆ ಈ ಬಾರ್ ಬೆಂಡಿಂಗ್ ಚಂದ್ರು ಸಾಕ್ಷಿಯಾಗಿದ್ದಾರೆ.
ಪ್ರಿಯ ಚಂದ್ರು ಅವರಿಗೆ ಉತ್ತಮ ಓದುಗರೆಲ್ಲರ ಪರವಾಗಿ ಅಭಿನಂದನೆಗಳು ಮತ್ತು ಕೃತಜ್ಞತೆಗಳನ್ನು ಅವಿನ್ ಟಿವಿ
ಮೂಲಕ ಬಯಸುತ್ತಿದೆ.
•••••••••••✒️
ಡಿ. ಎಂ. ಮಂಜುನಾಥಸ್ವಾಮಿ