ಬರಹಗಾರರಿಗೆ ಏಕಾಂತ ಮತ್ತು ಲೋಕಾಂತ ಎರಡು ಮುಖ್ಯ….*
1 min read
*ಬರಹಗಾರರಿಗೆ ಏಕಾಂತ ಮತ್ತು ಲೋಕಾಂತ ಎರಡು ಮುಖ್ಯ….*
*ಇದು ಕುಂಭಕ ಸಾಹಿತ್ಯ ಸಿರಿ ~2025 ಪ್ರಶಸ್ತಿ ಪ್ರಧಾನ ಮತ್ತು ಅಭೂತ ಪೂರ್ವ ಕಾದಂಬರಿ ಜನಾರ್ಪಣೆ ಸಮಾರಂಭ*
ಪತ್ರಕರ್ತ.ಲೇಖಕ
ಕೃಷಿಕ ಚಾವಲ್ಮನೆ ಸುರೇಶ್ ನಾಯಕ್ ಅವರಿಗೆ ಕುಂಭಕ ಸಾಹಿತ್ಯ ಸಿರಿ ~2025 ಪ್ರಶಸ್ತಿ ಪ್ರಧಾನ ಮತ್ತು ಸಾಹಿತಿ ಮತ್ತು ಕಿರು ಚಿತ್ರಗಳ ನಿರ್ಮಾಪಕ ಸಿಂಗಟಗೆರೆ ಶಶಿಯವರ ಅಭೂತಪೂರ್ವ ಕಾದಂಬರಿಯ ಮೂರನೇ ಆವೃತ್ತಿಯ ಜನಾರ್ಪಣೆ ಕಾರ್ಯಕ್ರಮದ ಒಂದು ನೋಟ.
ಯಾವುದೇ ಬರಹಗಾರ ವರ್ತಮಾನಕ್ಕೆ ದಕ್ಕುವ ಹಾಗೆ ಬರೆಯುವ ಬಗೆ ಹೇಗೆ ?
ಎಂಬ ಸೂಕ್ಷ್ಮವನ್ನು ಅರಿತಿರಬೇಕು,ಈ ಸೂಕ್ಷ್ಮವನ್ನು ಅರಿತಾಗ ಮಾತ್ರ ಬರಹಕ್ಕೊಂದು ಶಕ್ತಿ ದಕ್ಕುತ್ತದೆ.
ಸಮುದ್ರದಲ್ಲಿ ಅಲೆ ಅಲೆಯಾಗಿ ತೇಲಿ ಬರುವ ತೆರೆಗಳ ಶಬ್ದಗಳ ಹಿಂದೆ ಒಂದು ಮೌನವು ಸಹ ಇರುತ್ತದೆ, ಈ ತರಹದ ಮೌನವೊಂದನ್ನು ನಿಶಬ್ದವಾಗಿ ಆ ಸಮುದ್ರ ತನ್ನ ತೆರೆಗಳ ಹಿಂದೆ ಬಚ್ಚಿಟ್ಟಿರುತ್ತದೆ, ಈ ಮೌನವನ್ನು, ಆ ಮೌನದ ಅನುಭವವನ್ನು ಕಂಡು ಹಿಡಿಯುವ ಬಗೆ ಇದೆಯಲ್ಲ ಅದು ಒಂದು ಸೂಕ್ಷ್ಮತೆಯಾಗಿರುತ್ತದೆ, ಅಂತಹ ಸೂಕ್ಷ್ಮತೆಗಳನ್ನು ಒಂದು ಭಾಷೆಯಾಗಿ ಅಕ್ಷರಕ್ಕೆ ಹಿಡಿದಿಡುವ ಜಾಣ್ಮೆಯನ್ನು ಯಾವ ಬರಹಗಾರ / ಬರಹಗಾರ್ತಿ ಸಮರ್ಥವಾಗಿ ಧಕ್ಕಿಸಿಕೊಳ್ಳುತ್ತಾರೊ ಅಂಥವರು ಅತ್ಯುತ್ತಮ ಸಾಹಿತಿಗಳ ಸಾಲಿನಲ್ಲಿ ನಿಲ್ಲಲು ಸಾಧ್ಯ.
ಇಂತಹ ಸಾಧನೆಗಳು ನಮ್ಮದಾದಾಗ ಮಾತ್ರ, ಈ ಸಮಾಜದೊಳಗೆ ಅಂತಹ ಸಾಧನೆಗೊಂದು ಮನ್ನಣೆ ದೊರೆಯುತ್ತದೆ. ತಾನು ರಚಿಸಿದ ಪುಸ್ತಕ ಕೊಂದು ಜೀವ ಕಳೆ ಬರುತ್ತದೆ.
ದೇಶವೊಂದಕ್ಕೆ ಬಾಹ್ಯ ಸೌಂದರ್ಯವಿದ್ದಂತೆ ಆಂತರಿಕ ಸೌಂದರ್ಯವೂ ಇರುತ್ತದೆ. ಈ ಆಂತರಿಕ ಸೌಂದರ್ಯವೇ ಕಲೆ ಸಾಹಿತ್ಯ ಸಂಸ್ಕೃತಿಗಳು, ಇಂತಹ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಿ, ಈ ಮೂಲಕ ಯುವ ಸಮುದಾಯಕ್ಕೆ ಪ್ರೇರಣೆ ನೀಡುವುದು ನಾಗರಿಕರ ಜವಾಬ್ದಾರಿಯಾಗಿದೆ.
ಈ ಹಿನ್ನೆಲೆಯಲ್ಲಿ,ಲೇಖಕ,ಶಿಕ್ಷಕ ಕುಂದೂರು ಅಶೋಕ್ ಅವರು ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ಎಂಬುದನ್ನು ಹುಟ್ಟು ಹಾಕಿ, ಸಂಸ್ಥಾಪಕ ಅಧ್ಯಕ್ಷರಾಗಿ,ಕಳೆದ 12 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಕೊಡಮಾಡುತ್ತಾ ಬರುತ್ತಿದ್ದಾರೆ.
2025 ನೇ ಸಾಲಿನ ಈ ಪ್ರಶಸ್ತಿಗೆ ಕೊಪ್ಪ ತಾಲೂಕು ಜಾವಲ್ಮನೆ ಸುರೇಶ್ ನಾಯಕ್ ಅವರು ಭಾಜನರಾದರು. ಈ ಪ್ರಶಸ್ತಿ ಪ್ರಧಾನ ಸಮಾರಂಭದ ಸಂದರ್ಭದಲ್ಲಿ ಸಾಹಿತಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಗೆಳೆಯ ಸಿಂಗಟಗೆರೆ ಶಶಿಯವರ ಅಭೂತಪೂರ್ವ ಕಾದಂಬರಿಯ ಮೂರನೇ ಆವೃತ್ತಿ ಜನಾರ್ಪಣೆಗೊಂಡಿತು.
ಕುಂಭಕ ಸಂಸ್ಕೃತಿಕ ಪ್ರತಿಷ್ಠಾನ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ.ಚಿಕ್ಕಮಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಈ ಸಮಾರಂಭವನ್ನು ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್ ಡಿ ತಮ್ಮಯ್ಯ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಿ, ಪುಸ್ತಕ ಲೋಕಾರ್ಪಣೆ ಗೊಳಿಸಿದರು.
ಸಾಹಿತ್ಯ ಉಪನ್ಯಾಸಕ ಡಾ. ಬೆಳವಾಡಿ ಮಂಜುನಾಥ ಅವರು ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.
ಪ್ರತಿಷ್ಠಾನದ ಅಧ್ಯಕ್ಷ ಕುಂದುೂರು ಅಶೋಕ್ ಅವರು ಪ್ರವೇಶ ನುಡಿ ನುಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ದೇವೇಂದ್ರ ಅವರು ಅಧ್ಯಕ್ಷತೆ ವಹಿಸಿದ್ದರು.
ಗ್ಯಾರೆಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ. ಸಿ.ಶಿವಾನಂದಸ್ವಾಮಿ. ಜನತಾ ಬಜಾರ್ ಅಧ್ಯಕ್ಷ ಜಯರಾಜ ಅರಸು. ಲೇಖಕ ಡಿ. ಎಂ.ಮಂಜುನಾಥಸ್ವಾಮಿ.ನಿವೃತ್ತ ಶಿಕ್ಷಕ ಜಾವಳಿ ಚಂದ್ರಯ್ಯ . ಉಪನ್ಯಾಸಕ ಕೆ. ಎಂ.ಪ್ರದೀಪ್. ಶಿಕ್ಷಕಿ ಜ್ಯೋತಿ. ತಮ್ಮನ್ನ ಮನಾವರ್ ಮುಂತಾದವರು ಉಪಸ್ಥಿತರಿದ್ದರು.
••••••••••
ವರದಿ…
ಮಂಜುನಾಥ್.ಡಿ.ಎಂ.
ದಿಣ್ಣೆಕೆರೆ..