ಜಿಲ್ಲಾದಿಕಾರಿಗಳ ನ್ಯಾಯಲಯದಲ್ಲಿ ಕಪ್ಪು ಬಾವುಟ..ಮಂಜುನಾಥಗೌಡ
1 min read
ಜಿಲ್ಲಾದಿಕಾರಿಗಳ ನ್ಯಾಯಲಯದಲ್ಲಿ ಕಪ್ಪು ಬಾವುಟ..ಮಂಜುನಾಥಗೌಡ..
*ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಒತ್ತಾಯಿಸಿ ಕಪ್ಪುಪಟ್ಟಿ ಧರಿಸಿ ವಿಚಾರಣೆಗೆ ಹಾಜರಾಗಲು ತೀರ್ಮಾನ : ಮಂಜುನಾಥಗೌಡ*
ಜಿಲ್ಲೆಯಲ್ಲಿ ಭೂ ಕಬಳಿಕೆಯಲ್ಲಿ ಬಾಗಿಯಾದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸುವ ಬಗ್ಗೆ ಏ.9ರಂದು ಜಿಲ್ಲಾಧಿಕಾರಿಗಳು ದೂರುದಾರರು ಹಾಗೂ ಅಧಿಕಾರಿಗಳಿಗೆ ವಿಚಾರಣೆಗೆ ಕರೆದಿದ್ದು, ಈ ವಿಚಾರಣೆಗೆ ತಾನು ಕಪ್ಪುಪಟ್ಟಿ ಧರಿಸಿ ಹಾಜರಾಗುತ್ತೇನೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಮಂಜುನಾಥ್ಗೌಡ ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಕಡತಗಳ ಲಭ್ಯವಿಲ್ಲದ ಬಗ್ಗೆ ಕರ್ನಾಟಕ ಕಡಕ ಸಂರಕ್ಷಣಾ ಕಾಯಿದೆ 2010 ಮತ್ತು ನಿಯಮ 2013ರ ಸಂಬಂಧಪಟ್ಟ ಅಧಿಖಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ದಿನಾಂಕ 28-12-2021ರಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಲಾಗಿತ್ತು. ಅದರಂತೆ ಉಪ ವಿಭಾಗಾಧಿಕಾರಿಗಳು ವಿಚರಣೆ ನಡೆಸಿ ಕಡತಗಳು ಕಾಣೆಯಾಗಿರುವ ಬಗ್ಗೆ ವರದಿ ನೀಡಿರುತ್ತಾರೆ. ಆದರೂ ತಹಸೀಲ್ದಾರ್ ಅವರು ಕಡತ ಸಂರಕ್ಷಣೆ ಕಾಯಿದೆಯಡಿ ಆರೋಪಿಗಳ ಮೇಲೆ ದೂರು ನೀಡದೇ, ತಪ್ಪಿತಸ್ಥ ಅಧಿಕಾರಿಗಳನ್ನು ಉಳಿಸುವ ಸಲುವಾಗಿ ಕರ್ನಾಟಕ ಭೂ ಕಂದಾಯ ಕಾಯಿದೆ 1964 ರ ಕಲಂ 92ಎ ಅಡಿ ದೂರು ನೀಡಿದ್ದಾರೆಂದು ದೂರಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ ಸಿಆರ್ಐಪಿ ನಂ 7458/2022 ವಿಚಾರಣೆ ನಡೆಸಿ ಸರಕಾರದ ಸುತೋಲೆ ಆರ್.ಡಿ. 674-ಎಲ್ಜಿಬಿ 2008ನ ದಿನಾಂಕ 08-09-2008ನ್ನು ಅನುಸರಿಸಿ ಪ್ರಕರಣವನ್ನು ಮರು ದಾಖಲಿಸಲು ಉಚ್ಚನ್ಯಾಯಾಲಯ ಸರಕಾರಕ್ಕೆ ತಿಳಿಸಿದೆ. ಆದರೆ ಈವರೆಗೂ ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಂಡಿಲ್ಲ. ಬದಲಾಗಿ ಆರೋಪಿಗಳ ಬಗ್ಗೆ ಇಲಾಖೆ ವಿಚಾರಣೆ ನಡೆಸಲು ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಹಾಗಾಗಿ ಉಚ್ಚನ್ಯಾಯಾಲಯದ ಆದೇಶವನ್ನು ಪಾಲಿಸಲು ಮತ್ತು ಕಡತ ಸಂರಕ್ಷಣೆ ಕಾಯಿದೆಯಂತೆ ಪ್ರಕರಣ ದಾಖಲಿಸಲು ಆಗ್ರಹಿಸಿ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ವಿಚಾರಣೆಗೆ ಕಪ್ಪು ಪಟ್ಟಿ ಧರಿಸಿ ಹಾಜರಾಗಲಾಗುವುದು ಎಂದು ಹೇಳಿದರು.