18 ಕೋಟಿ ರಸ್ತೆ ಕಾಮಗಾರಿ, 3 ಕೋಟಿ ವೆಚ್ಚದ ಸೇತುವೆಗೆ ಗುದ್ದಲಿಪೂಜೆ.ಶಾಸಕಿ ನಯನಮೋಟಮ್ಮ.
1 min read
18 ಕೋಟಿ ರಸ್ತೆ ಕಾಮಗಾರಿ, 3 ಕೋಟಿ ವೆಚ್ಚದ ಸೇತುವೆಗೆ ಗುದ್ದಲಿಪೂಜೆ.ಶಾಸಕಿ ನಯನಮೋಟಮ್ಮ.
ಕಳಸ ತಾಲ್ಲೂಕಿನಲ್ಲಿ ದೊಡ್ಡ ಸಮಸ್ಯೆ ಹದಗೆಟ್ಟ ರಸ್ತೆಗಳದ್ದೇ ಆಗಿದೆ.ಕೆಲ ಪ್ರಮುಖ ರಸ್ತೆ ಕಾಮಗಾರಿಗೂ ಅನುದಾನ ಇಲ್ಲದೆ ಬಹಳ ಸಮಸ್ಯೆ ಆಗಿತ್ತು. ಶಾಸಕಿ ನಯನಾ ಮೋಟಮ್ಮ ಇದೀಗ ಅನೇಕ ರಸ್ತೆ ಕಾಮಗಾರಿಗಳಿಗೆ ವಿವಿಧ ಯೋಜನೆಗಳಿಂದ ಅನುದಾನ ತರುವಲ್ಲಿ ಸಫಲರಾಗಿದ್ದಾರೆ.
ಗುರುವಾರ ಕಳಸ ತಾಲ್ಲೂಕಿನಲ್ಲಿ ಒಟ್ಟು 18.75 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಅವರು ಗುದ್ದಲಿಪೂಜೆ ನೆರವೇರಿಸಿದರು.ತಾಲ್ಲೂಕಿನ ಮೂಲೆ ಮೂಲೆಯಲ್ಲೂ ಇರುವ ಈ ರಸ್ತೆಗಳಿಗೆ ಆಯಾ ಸ್ಥಳಕ್ಕೇ ತೆರಳಿ ಗುದ್ದಲಿಪೂಜೆ ನೆರವೇರಿಸಿದರು. ದುಸ್ಥಿತಿಯಲ್ಲಿದ್ದ ರಸ್ತೆಗಳಿಗೆ ಮುಕ್ತಿ ಸಿಗುವ ಆಸೆಯಿಂದ ಗ್ರಾಮಸ್ಥರು ಶಾಸಕರನ್ನು ಅಭಿನಂದಿಸಿದರು.
ಮೊದಲಿಗೆ ಸಂಸೆ-ಕುದುರೆಮುಖ-ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿಯ ದುರಸ್ತಿಗೆ ಶಾಸಕಿ ನಯನಮೋಟಮ್ಮ ಚಾಲನೆ ನೀಡಿದರು.
ಸಂಸೆ ಗ್ರಾಮದ ನೆಲ್ಲಿಬೀಡಿನಿಂದ ಕುದುರೆಮುಖವರೆಗೆ 20 ಕಿಮೀ ರಸ್ತೆ ಅಗೆದು ಸಂಪೂರ್ಣವಾಗಿ ಹೊಸದಾಗಿ ಕಾಮಗಾರಿ ನಡೆಸಲಾಗುತ್ತದೆ. ಇದರೊಂದಿಗೆ ಕುದುರೆಮುಖದಿಂದ ಕಡಾಂಬಿ ಜಲಪಾತದವರೆಗಿನ 9 ಕಿ.ಮೀ ರಸ್ತೆಯನ್ನು ಒಟ್ಟು 13 ಕೋಟಿ ವೆಚ್ಚದಲ್ಲಿ ಮರುಡಾ0ಬರೀಕರಣ ಮಾಡಲಾಗುತ್ತದೆ ಎಂದು ಶಾಸಕಿ ತಿಳಿಸಿದರು. ಕಡಾಂಬಿಯಿಂದ ಎಸ್.ಕೆ.ಬಾರ್ಡರ್ವರೆಗಿನ ಉಳಿದ ರಸ್ತೆ ಕಾಮಗಾರಿಗೂ ಅನುದಾನ ಬಿಡುಗಡೆಯಾಗಲಿದೆ ಎಂದು ಮಾಹಿತಿ ಕೊಟ್ಟರು.
ಕಳಸ ಪಟ್ಟಣದ ಕಲ್ಲುಬಾವಿ, ಕೆಳಬೈಲು, ಮೀನು ಮಾರುಕಟ್ಟೆ, ಗಣಪತಿಕಟ್ಟೆ, ಗೋರಿಮಕ್ಕಿ ರಸ್ತೆಗಳಿಗೆ ಅನೇಕ ವರ್ಷಗಳಿಂದ ಅಭಿವೃದ್ಧಿಗಾಗಿ ಬೇಡಿಕೆ ಇತ್ತು.ಆದರೆ ಅನುದಾನ ಸಿಕ್ಕಿರಲಿಲ್ಲ.ಗುರುವಾರ ಒಟ್ಟು 2 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಎಲ್ಲ ರಸ್ತೆಗಳ ಕಾಂಕ್ರೀಟ್ ಕಾಮಗಾರಿಗೂ ಅವರು ಗುದ್ದಲಿಪೂಜೆ ನೆರವೇರಿಸಿದರು.ಅಲ್ಪಸಂಖ್ಯಾತ ಅಭಿವೃದ್ಧಿ ಯೋಜನೆಯಲ್ಲಿ ಈ ರಸ್ತೆಗಳ ಕಾಮಗಾರಿ ನಡೆಯಲಿದೆ.
ಹೊರನಾಡು ಗ್ರಾಮದ ಕಳ್ಳರಪಾಲು ಗಿರಿಜನ ಕಾಲೋನಿ ರಸ್ತೆ ಅಭಿವೃದ್ಧಿಯನ್ನು ವಿಶ್ವೇಶ್ವರಯ್ಯ ಜಲ ನಿಗಮದ 75 ಲಕ್ಷ ರೂಪಾಯಿ ಅನುದಾನದಲ್ಲಿ ಕೈಗೊಳ್ಳಲಿದ್ದು ನಯನಾ ಮೋಟಮ್ಮ ಚಾಲನೆ ನೀಡಿದರು.
ಲೋಕೋಪಯೋಗಿ ಇಲಾಖೆಯ 3 ಕೋಟಿ ವೆಚ್ಚದ ಮಣ್ಣಿನಪಾಲು-ಬಸರೀಕಟ್ಟೆ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಯಿತು. ಬಸರೀಕಟ್ಟೆ -ಕವನಳ್ಳ-ಮಣ್ಣಿನಪಾಲು ಮೂಲಕ ಹೊರನಾಡು ಇನ್ನು ಸನಿಹದ ಹಾದಿ ಆಗಲಿದೆ. 3 ಕೋಟಿ ವೆಚ್ಚದ ಮಹಾಲ್ಗೋಡು ಸೇತುವೆ ಕಾಮಗಾರಿಗೂ ಶಾಸಕಿ ಗುದ್ದಲಿಪೂಜೆ ನೆರವೇರಿಸಿದರು.ಪ್ರತಿ ವರ್ಷ ಮಹಾಲ್ಗೋಡು ಬಳಿ ರಸ್ತೆ ಮೇಲೆ ನೀರು ಹರಿದು ಸಂಚಾರಕ್ಕೆ ಅಡ್ಡಿ ಆಗುತ್ತಿದ್ದ ಸಮಸ್ಯೆ ಇದರಿಂದ ಬಗೆಹರಿಯಲಿದೆ.
ಆನಂತರ ಕಳಸದ ಶಾಸಕರ ಕಚೇರಿಯಲ್ಲಿ ಶಾಸಕಿ ನಯನಾ ಮೋಟಮ್ಮ ಪಟ್ಟಣದ 30 ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಿಸಿದರು.
ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಶ್ರೇಣಿಕ,
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ.ಪ್ರಭಾಕರ್.
ಮುಖಂಡರಾದ ಹಿತ್ಲುಮಕ್ಕಿ ರಾಜೇಂದ್ರ, ವಿಶ್ವನಾಥ್, ರಫೀಕ್, ವೀರೇಂದ್ರ, ಗಣೇಶ್ ಭಟ್, ಮಧು ಪ್ರಸಾದ್, ಜಿ.ಪಿ.ಚಂದ್ರು ಭಾಗವಹಿಸಿದ್ದರು.