ಅಥಣಿ ತಾಲ್ಲೂಕು ಆಸ್ಪತ್ರೆ ಭ್ರಷ್ಟಾಚಾರ ವಿರುದ್ದ ಕಿಡಿ ಕಾರಿದ ಜಯಕರ್ನಾಟಕ ಸಂಘ #avintvcom
1 min read
ಅಥಣಿ ತಾಲ್ಲೂಕು ಆಸ್ಪತ್ರೆ ಭ್ರಷ್ಟಾಚಾರ ವಿರುದ್ದ ಕಿಡಿ ಕಾರಿದ ಜಯಕರ್ನಾಟಕ ಸಂಘ
ಅಥಣಿ ತಾಲೂಕು ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಬಡ ಜನರಿಂದ ಹಣ ಪಡೆಯಲಾಗುತ್ತಿರುವದನ್ನು ಖಂಡಿಸಿ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಅಪರ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿ ಡಾಕ್ಟರ್ ಶರಣಬಸಪ್ಪ ಗಡೆದ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಯಕರ್ನಾಟಕ ಸಂಘಟನೆಯ ವಿದ್ಯಾರ್ಥಿ ಘಟಕದ ಅಧ್ಯಕ್ಷ ವಿಜಯ ಪವಾರ ಕಳೆದ ಹಲವಾರು ತಿಂಗಳುಗಳಿಂದ ಆಸ್ಪತ್ರೆಯಲ್ಲಿ ಹೆರಿಗೆ ಮಾಡಲು ಹಣ ಪಡೆಯುತ್ತಿರುವ ಗಂಭೀರ ಆರೋಪಗಳು ಕೇಳಿಬಂದರೂ ಕೂಡ ತಪ್ಪಿತಸ್ಥರ ವಿರುದ್ಧ ಯಾವುದೆ ಶಿಸ್ತು ಕ್ರಮ ಜರುಗಿಸಿಲ್ಲ.ಈಗಾಗಲೇ ಎರಡು ಸಲ ಹೆರಿಗೆ ವೇಳೆ ಕಂದಮ್ಮಗಳು ಸಾವನ್ನಪ್ಪಿವೆ.ಹಣ ಕೊಟ್ಟ ಬಡವರು ಆರೋಪಿಸಿದರೂ ಕೂಡ ಮಾನವೀಯತೆ ಮರೆತ ಹಣದಾಹಿಗಳು ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತ ಬಡವರ ಜೀವ ಹಿಂಡುವ ಕೆಲಸ ಮುಂದುವರೆಸಿದ್ದು ಕೂಡಲೇ ಹಣ ಪಡೆದವರಿಂದ ಬಹಿರಂಗ ಕ್ಷಮೆ ಯಾಚಿಸಿ ಹಣ ಮರಳಿಸುವಂತೆ ಮಾಡಬೇಕು ಅಷ್ಟೇ ಅಲ್ಲದೆ ಅವರ ವಿರುದ್ದ ಜಿಲ್ಲಾ ವೈದ್ಯಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಇದೇ ವೇಳೆ ಮಾತನಾಡಿದ ತಾಲ್ಲೂಕು ಅಧ್ಯಕ್ಷ ಸುನೀಲ ನಾಯಕ ಸರ್ಕಾರಿ ಕೆಲಸ ಅಂದರೆ ದೇವರ ಕೆಲಸ ಅದನ್ನು ಮರೆತು ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಂದ ಹಣ ಪಡೆಯುತ್ತಿರುವದು ಸರಿ ಅಲ್ಲ.ಈಗಾಗಲೇ ಹಲವಾರು ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ವರದಿ ಪ್ರಕಟವಾದರೂ ಕೂಡ ಇಲ್ಲಿನ ಸಿಬ್ಬಂದಿ ಹಣದಾಹಕ್ಕೆ ಕಡಿವಾಣ ಬಿದ್ದಿಲ್ಲ ಸಹಜ ಹೆರಿಗೆಗೆ ಎರಡರಿಂದ ನಾಲ್ಕು ಸಾವಿರ ಮತ್ತು ಸೀಜರ್ ಮಾಡಲು ಐದರಿಂದ ಏಳುಸಾವಿರ ಹಣ ಪಡೆಯುತ್ತಿರುವ ಗಂಭೀರ ಆರೋಪಗಳು ಕೇಳಿಬಂದಿವೆ. ಇದೇ ರೀತಿ ಮುಂದುವರೆದದ್ದೇ ಆದಲ್ಲಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ವೇಳೆ ಜಯಕರ್ನಾಟಕ ಸಂಘಟನೆಯ ಯುವ ಘಟಕದ ಅಧ್ಯಕ್ಷ ಶೋಯಬ್ ಚೌಧರಿ,ರಿಯಾಜ್ ಬಿರಾದಾರ,ವಿಜಯ ಬಡಚಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.