ಮಲೆನಾಡಿನಲ್ಲಿ ಭೂಹಿನರಿಗೆ ಸಿಗದ ಭೂಮಿ ಬಲಿಷ್ಟರಿಗೆ ಸಿಗುತ್ತಿದೆ
1 min read
ಮಲೆನಾಡಿನಲ್ಲಿ ಭೂಹಿನರಿಗೆ ಸಿಗದ ಭೂಮಿ ಬಲಿಷ್ಟರಿಗೆ ಸಿಗುತ್ತಿದೆ
ಮಲೆನಾಡಿನ ಭೂಮಿಗೆ ಭೂ ಮಿತಿ ಕಾಯ್ದೆ ನಿಗದಿಪಡಿಸಿ : ರುದ್ರಯ್ಯ(ಸಿ.ಪಿ.ಎಂ.ಎಲ್)
ನಮ್ಮಲ್ಲಿ ಇತ್ತೀಚಿಗೆ ನಮುನೆ ಸಂಖ್ಯೆ 53,50, ರ ಅಡಿಯಲ್ಲಿ ಅಕ್ರಮ ಹಾಗು ಸಕ್ರಮದಲ್ಲಿ ಮಂಜೂರಾದ ಕೆಲವೊಂದು ಭೂಮಿಯನ್ನು ಜಿಲ್ಲಾಡಳಿತ ರದ್ದುಗೊಳಿಸಿದ ಹಿನ್ನಲೆ ಒಂದಷ್ಟು ಸಿರಿವಂತ ರೈತರು ಶಾಸಕರನ್ನು ಬೇಟಿಮಾಡಿ ರದ್ದುಗೊಳಸಿದಂತಹ ಭೂಮಿಯನ್ನುಪುನಃ ಸಕ್ರಮಗೊಳಿಸಿ ದೊರಕಿಸಿಕೊಡಲು ಪ್ರಯತ್ನಿಸ ಬೇಕು ಎಂದು ಬೇಡಿಕೆ ಇಟ್ಟಿದ್ದು ಇದಕ್ಕೆ ಶಾಸಕರೂ ಕೂಡ ಬೆಂಬಲ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಭೂಮಾಲೀಕರ ಪರವಾಗಿ ಕೆಲಸ ಮಾಡುವುದನ್ನು ಮೊದಲು ಕೈ ಬಿಡಬೇಕು
ಇಲ್ಲಿ ಬಹಳಷ್ಟು ರೈತರು ಸಿರಿವಂತರು ಹಾಗು ಉಳ್ಳವರೇ ಆಗಿದ್ದಾರೆ ಇದರೆ ಬಗ್ಗೆ ಹೆಚ್ಚು ಗಮನಹರಿಸದೇ ಬಡವರಿಗೆ ಭೂಮಿ ಸಿಗುವಂತಹ ಕ್ರಮಕ್ಕೆ ಹೆಚ್ಚಿನ ಆಸಕ್ತಿಯನ್ನು ತೋರಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರು ಕ್ರಮ ವಹಿಸಬೇಕು.
ಇಲ್ಲವಾದರೆ ಮುಂದಿನ ದಿನದಲ್ಲಿ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು
ಅವರು ಬುಧವಾರ ಮೂಡಿಗೆರೆಯಲ್ಲಿ ಸುದ್ದಿ ಯನ್ನು ನಡೆಸಿ ಮಾತನಾಡಿ ನಮುನೆ ಸಂಖ್ಯೆ 53,50, ರ ಅಡಿಯಲ್ಲಿ ಸಲ್ಲಿಸಿದ ಅಕ್ರಮ ಅರ್ಜಿಗಳನ್ನು ಜಿಲ್ಲಾಡಳಿತ ವಜಾಗೊಳಿಸಲು ಮುಂದಾಗಿರುವುದು ಸ್ವಾಗತಾರ್ಹ.
ಈ ಪ್ರಕ್ರಿಯೆಯನ್ನು ಅಧಿಕಾರಿಗಳು ಚುರುಕುಗೊಳಿಸಿ ಅಕ್ರಮವಾಗಿರುವ ಭೂ ಮಾಲೀಕರ ಅರ್ಜಿಗಳನ್ನು ಮುಲಾಜಿಲ್ಲದೇ ವಜಾಗೊಳಿಸಬೇಕು.
ಮಲೆನಾಡು ಭೂಮಿಗೆ ಭೂ ಕಾಯಿದೆ ನಿಗದಿ ಮಾಡಿ, ಒತ್ತುವರಿ ತೆರವುಗೊಳಿಸಬೇಕು ಹಾಗು ಯಾವುದೇ ಒತ್ತಡಕ್ಕೆ ಮಣಿಯದೇ ಕಾನೂನು ಬದ್ದವಾಗಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.
ರಾಜ್ಯದ ಕಾಂಗ್ರೇಸ್ ಸರ್ಕಾರ ಬಡವರಿಗೆ ಬಿಕ್ಷುಕರಂತೆ ಅಕ್ಕಿ ನೀಡಿ ಸಿರಿವಂತರಿಗೆ ಭೂಮಿಯನ್ನು ನೀಡವ ಮೂಲಕ ತಾರತಮ್ಯ ನೀತಿಯನ್ನು ಅಳವಡಿಸಿಕೊಂಡಿದ್ದು ಇದರಿಂದ ಬಡವರ ಕಲ್ಯಾಣದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೇಸ್ ಸರ್ಕಾರ ಬಡವರನ್ನು ಇನ್ನಷ್ಟು ಬಡವರನ್ನಾಗಿಯೇ ಇರಿಸುವ ಸಲುವಾಗಿ ಕೆಲಸ ಮಾಡುತ್ತಿದೆಯೇ ಎಂದು ಅನುಮಾನ ಪ್ರತಿಯೊಬ್ಬರಲ್ಲಿ ಮೂಡಿದೆ ಎಂದರು.
ರಾಜ್ಯದಲ್ಲಿರುವ ಎಲ್ಲಾ ವರ್ಗದ ಬಡ ಜನರಿಗೆ ಕನಿಷ್ಟಪಕ್ಷ ವಾಸಿಸಲು ಭೂಮಿಯನ್ನು ಸಹ ನೀಡದೆ ಸರ್ಕಾರ ದ್ರೋಹವನ್ನು ಮಾಡುತ್ತಿದೆ ಇದಕ್ಕೆ ಉದಾಹರಣೆ ಎಂಬಂತೆ ಮಲೆನಾಡಿನ ಭಾಗದ ಸಣ್ಣನ ಮಟ್ಟದ
ರೈತರು ಒತ್ತುವರಿ ಒತ್ತುವರಿ ಮಾಡಿ ನಮೂನೆ 57 ರ ಅಕ್ರಮ ಸಕ್ರಮದ ಅಡಿಯಲ್ಲಿ ಸಲ್ಲಿಸಿದಂತಹ ಅರ್ಜಿಯನ್ನು ಪ್ಲಾಂಟೇಶನ್ ಎಂಬ ನೆಪವೊಡ್ಡಿ ತಿರಸ್ಕರಿಸಿದ್ದು ಅದರಲ್ಲಿ ಬಹುತೇಕ ಅರ್ಜಿಗಳು ಮಲೆನಾಡಿನ ಬಡ ರೈತರದ್ದೇ ಆಗಿದ್ದು ಅದನ್ನು ತಕ್ಷಣ ಹಿಂಪಡೆದು ಯಾರಿಗೆ ಭೂಮಿ ಇಲ್ಲ ಎಂದು ಗುರುತಿಸಿ ಅಂತವರಿಗೆ ಭೂಮಿ ನೀಡುವ ಸಲುವಾಗಿ ಅರ್ಜಿಯನ್ನು ಪುನರ್ ಸ್ಥಾಪಿಸಿ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದರು.
ತಾಲೂಕು ಕಚೇರಿಯಲ್ಲಿ ನಿವೃತ್ತ ಅಧಿಕಾರಿಗಳು ಹಾಗೂ ದಲ್ಲಾಳಿಗಳಂತೆ ಕೆಲಸವನ್ನು ಮಾಡುತ್ತಿದ್ದು ಅವರು ಶ್ರೀಮಂತ ಭೂಮಾಲೀಕರಿಗೆ ಅಕ್ರಮವಾಗಿ ಭೂಮಿ ಕೊಡಿಸುವ ಕಾರ್ಯ ನಿರಂತರವಾಗಿ ಮಾಡುತ್ತಿದ್ದಾರೆ.
ಈ ಬಗ್ಗೆ ಶಾಸಕರು ಗಮನಹರಿಸಬೇಕು ಹಾಗು ಅಂತಹ ಕೆಲಸವನ್ನು ಮಾಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳೋಕು ಎಂದರು.
ಸುದ್ದಿ ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಸಂಚಾಲಕ ಕೆ.ಕೆ.ಕೃಷ್ಣಪ್ಪ, ತಾಲೂಕು ಸಂಚಾಲಕ ಶಿವಪ್ಪ ಉಪಸ್ಥಿತರಿದ್ದರು.