ತೇಜಸ್ವಿ ಪ್ರತಿಷ್ಠಾನದಲ್ಲಿ ಒಂದು ವಿಷ್ಮಯ….. ಮಗ್ಗಲಮಕ್ಕಿಗಣೇಶ್…..
1 min read
ತೇಜಸ್ವಿ ಪ್ರತಿಷ್ಠಾನದಲ್ಲಿ ಒಂದು ವಿಷ್ಮಯ…..
ಮಗ್ಗಲಮಕ್ಕಿಗಣೇಶ್…..
ಮಾನ್ಯರೆ
ತಾ:12.01.1025.ರಂದು ಕೆ.ಪಿ.ಪೂರ್ಣ ಚಂದ್ರತೇಜಸ್ವಿ ಪ್ರತಿಷ್ಠಾನಕ್ಕೆ ನಾನು.ಬಕ್ಕಿಮಂಜು.ವಸಂತಹಾರಗೊಡು ಹೋಗಿದ್ದೆವು.ಅಲ್ಲಿಯ ಮೆಲ್ವಿಚಾರಕರಾದ ಬಂಕೇನಹಳ್ಳಿನಂದೀಶ್ ಬ್ಲಾಕ್ ಟೀ ಕೈಗಿಟ್ಟು ನೀವು ತೇಜಸ್ವಿ ಮನೆಗೆ ಹೊದಾಗ ನಡೆದ ಒಂದು ಘಟನೆಯನ್ನು ರಾಜೇಶ್ವರಿತೇಜಸ್ವಿಯವರು “ನನ್ನ ತೇಜಸ್ವಿ” ಪುಸ್ತಕದಲ್ಲಿ ಬರೆದಿದ್ದಾರೆ ಎಂದು ಕೇಳಿದರು.ಪುಸ್ತಕ ಕೈಗಿಟ್ಟರು.ಹುಡುಕಿದೆ ಸಿಗಲಿಲ್ಲ.ವಸಂತರವರು ಹುಡುಕಿಕೊಟ್ಟರು.
ಪುಸ್ತಕದಲ್ಲಿನ ಬರಹ….೫೨೮ | ನನ್ನ ತೇಜಸ್ವಿ…
ಮೂಡಿಗೆರೆ ಮುನಿಸಿಪಾಲ್ಟಿಯವರಿಗೆ ಊರ ತ್ಯಾಜ್ಯವಸ್ತುಗಳನ್ನು ಕಸ ಕರಗಿಸುವ ಸಮಸ್ಯೆ ಎದುರಾಗಿತ್ತು. ಅದರ ವಿಲೇವಾರಿ ಮಾಡುವುದರ ಬಗ್ಗೆ ತಲೆ ಬಿಸಿಯಾಗಿತ್ತು. ಸಂಬಂಧಪಟ್ಟವರು ತೇಜಸ್ವಿಯೊಟ್ಟಿಗೆ ಮಾತಾಡಲೂ ಬಂದಿದ್ದರು. ಅವತ್ತು ಸ್ಥಳೀಯರೊಬ್ಬರು ಮಗ್ಗಲಮಕ್ಕಿಗಣೇಶ ಎನ್ನುವರು ಇದರ ಬಗ್ಗೆ ಮಾತಾಡಲೆಂದೇ ಮನೆಗೆ ಬಂದಿದ್ದರು. ಆಗ ತೋಟದ ಕೆಲಸಾರರ ಕೈ ಬಿಡುವ ಸಮಯವಾಗಿತ್ತು. ತೋಟದಲ್ಲಿ ಜೇನು ಎದ್ದಿದೆಯೆಂದು ಆಳುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಅಲ್ಲಿ ಹೋಗಿ ಇಲ್ಲಿ ಹೋಗಿರೆಂದು ಕೂಗಾಡುತ್ತ ತಮ್ಮ ಎಂದಿನ ದಾರಿ ಹಿಡಿಯದೆ ಬೇರೆ ದಾರಿ ಹಿಡಿದರು. ಅವರು ಮಾತ್ರ ಮೋಟಾರು ಸೈಕಲ್ ಮೇಲೆ ಹೋಗುವುದು ತಾನೆ ಎಂದು ಹೊರಟೇಬಿಟ್ಟರು. ಗೇಟು ಬಾಗಿಲು ತೆಗೆಯಲು ಮೋಟಾರುಸೈಕಲ್ನಿಂದ ಇಳಿಯುತ್ತಿದ್ದಂತೆ ಅಲ್ಲಿ ಎದ್ದಿದ್ದ ಹೆಚ್ಚೇನು ಹುಳುಗಳು ಬಂದು ಅವರ ಮೇಲೆ ಎರಗಿದವಂತೆ. ಆದರೂ ಹೊರಟರು. ಅವೂ ಹಿಂಬಾಲಿಸಿ ಮುತ್ತಿದವು.
ಅಷ್ಟೇ ಅಲ್ಲದೆ ಇವರನ್ನು ಹಿಂಬಾಲಿಸುತ್ತಿದ್ದ ಒಂದಷ್ಟು ಜೇನುಹುಳುಗಳು, ಅಲ್ಲಿ ಒಬ್ಬಳು ತಲೆಮೇಲೆ ಸೌದೆ ಹೊತ್ತು ಹೋಗುತ್ತಿದ್ದವಳಿಗೂ ಮುತ್ತಿಕೊಂಡವಂತೆ, ಅವರ ದೆಸೆಯಿಂದಾಗಿ ಇವಳಿಗೆ ಮುತ್ತಿಕೊಂಡವು. ಸೀರೆ ಒಳಗೂ ಹೊಕ್ಕಿ ಕಚ್ಚಿದುವಂತೆ. ಅವಳೂ ಸೌದೆ ಬಿಸುಟು ದಿಕ್ಕಾಪಾಲಾಗಿ ಓಡಿದಳು. ಇಬ್ಬರೂ ಮೂಡಿಗೆರೆ ಗೌರಮೆಂಟ್ ಆಸ್ಪತ್ರೆ ಸೇರಿಕೊಂಡಿರುವರೆಂದು ಸುದ್ದಿ ಮುಟ್ಟಿತು ತೇಜಸ್ವಿಗೆ.
ಆಸ್ಪತ್ರೆಗೆ ಹೋಗಿ ನೋಡಿ ಬರೋಣೆಂದರು ತೇಜಸ್ವಿ. ಇಬ್ಬರೂ ಹೊರಟೆವು. ಅಲ್ಲಿ ಅವರು ವಾರ್ಡನಲ್ಲಿ ಮಲಗಿದಾರೆ. ಪಕ್ಕದಲ್ಲಿ ಪತ್ನಿ, ಗೆಳೆಯರು ನಿಟ್ಟುಸಿರಿಡುತ್ತಾ ನಿಂತಿದಾರೆ. ತೇಜಸ್ವಿ ನೋಡಿದವರೇ, ‘ಅಯ್ಯೋ ಮಾರಾಯ, ಹನುಮಂತರಾಯನ ಮೂತಿ ಮಾಡ್ಕೊಂಡು ಮಲಗಿರಿಯಾ ಅಂತ ತಿಳಿದಿದ್ದರೆ ಚೆನ್ನಾಗೇ ಇದ್ದೀಯಲ್ಲೋ’ ಎಂದರು. ಈಗ ತಾನೆ ಎಪ್ಪತ್ತೈದು ಹೆಚ್ಚೇನಿನ ಮುಳ್ಳು ತೆಗೆದು ತಂದು ಇಲ್ಲಿ ಹಾಕಿದಾರೆ ಸಾರ್ ಎಂದು ಅವರು ನಕ್ಕರು. ಆ ನಗುವಿನಲ್ಲಿ ನೋವು ಹೋಗಿದ್ದೀತು.
ಮೂಡಿಗೆರೆಯ ಮುನಿಸಿಪಾಲ್ಟಿಯವರು ಊರ ಕಸವನ್ನು RRS ಅಂದರೆ Regional Research stationನವರಿಗೆ ಸೇರಿದ್ದ ಜಾಗದಲ್ಲಿ(ನಮ್ಮ ತೋಟದ ಆಚೆಗೆ ಮಗ್ಗಲಮಕ್ಕಿ ಬಳಿ) ವಿಲೇವಾರಿ ಮಾಡುತ್ತಿದ್ದರಂತೆ. ಇನ್ನು ಆ ಪ್ರದೇಶ ಕಸದ ತೊಟ್ಟಿಯಾಗುತ್ತೆಂದು ಎಲ್ಲರೂ ಕಂಪ್ಲೇಂಟು ಶುರುಮಾಡಿದರು. RRS-ನ ಮುಖ್ಯಸ್ಥರಾದ ಬೆಳವಾಡಿಯವರೂ ಸ್ಥಳೀಯರೂ ತಮ್ಮತಮ್ಮ ಅಹವಾಹಲನ್ನು ತೇಜಸ್ವಿಯಲ್ಲಿ ತೋಡಿಕೊಂಡರು. ಅವರಿಗೆಲ್ಲ ಬಗೆಹರಿಯದ ಸಮಸ್ಯೆಯಾಗಿತ್ತು. ಒಂದು ಪರಿಹಾರವನ್ನು ಸೂಚಿಸಬೇಕೆಂದು ತೇಜಸ್ವಿಯಲ್ಲಿ ಕೇಳಿಕೊಂಡರು. ಇವರು ಬೆಂಗಳೂರಲ್ಲಿದ್ದ pollution control ಬೋರ್ಡಿನ ಮುಖ್ಯಸ್ಥರಾದ ಶ್ರೀ ಶರತ್ಚಂದ್ರರವರನ್ನು ಸಂಪರ್ಕಿಸಿ, consult ಮಾಡಿದರು. ಅವರೂ ಮೂಡಿಗೆರೆಗೆ ಬಂದು ಕೂಲಂಕಷವಾಗಿ ನೋಡಿ ತಾತ್ಕಾಲಿಕವಾದ ವ್ಯವಸ್ಥೆ ಏರ್ಪಾಟು ಮಾಡಿಹೋದರು.