ವಿದ್ಯಾರ್ಥಿಗಳತ್ತ ವಚನ ಸೌರಭ*
1 min read
*ವಿದ್ಯಾರ್ಥಿಗಳತ್ತ ವಚನ ಸೌರಭ*
ಭಾರತ ಮಾತ್ರವಲ್ಲ ಜಗತ್ತಿನ ಚರಿತ್ರೆಯಲ್ಲಿ 12ನೇ ಶತಮಾನ ಅತ್ಯಂತ ಪ್ರಮುಖವಾದ ಕಾಲಘಟ್ಟವಾಗಿದೆ. ಪರಿವರ್ತನಾ ಶತಮಾನವಾಗಿದೆ,ಸಾಮಾಜದ ಅನಿಷ್ಟ ಮತ್ತು ಅಸಮಾನತೆಯ ವಿರುದ್ಧ ಸಿಡಿದೆದ್ದು,ಸಮಸಮಜಕ್ಕಾಗಿ ಮಿಡಿದಿದ್ದು ಕಲ್ಯಾಣದ ಕ್ರಾಂತಿಯ ವಚನ ಚಳುವಳಿ. ಮುಂದೆ ಈ ವಚನ ಚಳುವಳಿಯು ರಕ್ತಪಾತದೊಂದಿಗೆ ಕೊನೆಗೊಂಡಿದ್ದು ಕರಾಳ ಇತಿಹಾಸವಾಗಿದೆ.
ಈ ಕರಾಳ ಇತಿಹಾಸಕ್ಕೆ ಒಂಬತ್ತು ಶತಮಾನ ತುಂಬಿದೆ.ಪಟ್ಟಭದ್ರ ಮನಸ್ಸುಗಳು ವಚನಗಾರರು ಕಟ್ಟುತ್ತಿದ್ದ ಕಲ್ಯಾಣದ ಸತ್ಕ್ರಾಂತಿಯನ್ನು ಕುತಂತ್ರದಿಂದ ಹತ್ತಿಕ್ಕಿದರು. ಆದರೆ ವಚನಗಳನ್ನು, ಅ ವಚನಗಳ ಆಶಯಗಳನ್ನು ಇಂದಿಗೂ ದಮನ ಮಾಡಲು ಸಾಧ್ಯವಾಗಿಲ್ಲ, ಸಾಧ್ಯವಾಗುವುದೂ ಇಲ್ಲ.
ಈ ನಿಟ್ಟಿನಲ್ಲಿ ವಚನಗಳ ಆಶಯವನ್ನು ವಿದ್ಯಾರ್ಥಿ ಯುವಜನರತ್ತ ಹೊತ್ತೋಯ್ದು, ಸಮಾಜಕ್ಕೆ ಶ್ರೇಷ್ಠವಾದದ್ದು ಯಾವುದು, ದಮನಕಾರಿಯಾದದ್ದು ಯಾವುದು, ಅನೀತಿಯ ವಿರುದ್ಧ ಧ್ವನಿ ಮಾಡಿ , ನಾವು ಚಲಿಸಬೇಕಾದ ನೀತಿಯ ಮಾರ್ಗ ಯಾವುದು ಎನ್ನುವುದರೊಂದಿಗೆ,ವಚನಕಾರರನ್ನು ಪರಿಚಯಿಸುವ ದೃಷ್ಟಿಯಿಂದ,ಚಿಕ್ಕಮಗಳೂರು ನಗರದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ, ಚಿಕ್ಕಮಗಳೂರಿನ ಮಾಡಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ವಚನಗಳಿಗೆ ಸಂಬಂಧಪಟ್ಟ ರಸಪ್ರಶ್ನೆ. ಪ್ರಬಂಧ ಹಾಗೂ ವಚನ ಗಾಯನ ಸ್ಪರ್ಧೆಯನ್ನು ಮುಗುಳುವಳ್ಳಿ ನಂಜಪ್ಪ ಶೆಟ್ಟಿ ಸ್ಮರಣಾರ್ಥ ವಚನ ಸೌರಭ ಕಾರ್ಯಕ್ರಮವನ್ನು ಏರ್ಪಡಿಸಿ, ವಿಜೇತ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಮತ್ತು ನಗದು ಬಹುಮಾನವನ್ನು ನೀಡಲಾಯಿತು.
ನಗರದ ಶ್ರೀ ಸಾಯಿ ಏಂಜಲ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಸ್ಪರ್ಧೆಯ ಎಲ್ಲ ವಿಭಾಗದಲ್ಲೂ ಭಾಗವಹಿಸಿ ಅತಿ ಹೆಚ್ಚು ಬಹುಮಾನ ಪಡೆದ ಕಾರಣ,ಮುಗುಳುವಳ್ಳಿ ನಂಜಪ್ಪ ಶೆಟ್ಟಿ ಸ್ಮಾರಕ ಪರ್ಯಾಯ ಪಾರಿತೋಷಕ ಮತ್ತು ಹತ್ತು ಸಾವಿರ ನಗದು ಬಹುಮಾನಕ್ಕೆ ಭಾಜನರಾದರು.
ಬೆಳಗ್ಗಿನಿಂದ ಸಂಜೆವರೆಗೆ ಒಂದು ದಿನಗಳ ಕಾಲ ನಡೆದ ಈ ವಚನ ಸೌರಭದ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾಡೆಲ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯರಾದ ಎಂ. ಏನ್.ಷಡಾಕ್ಷರಿ.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಕ್ಯಾತನಬೀಡು. ಸಾಹಿತಿ ಚಟ್ನಹಳ್ಳಿ ಮಹೇಶ್.ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷರಾದ ಗುರುಶಾಂತಪ್ಪ, ಮಾಡಲ್ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕಿ ವಿಶಾಲ ಷಡಾಕ್ಷರಿ. ಶಾಲೆಯ ಅಧ್ಯಕ್ಷರಾದ ಪುಟ್ಟಸ್ವಾಮಿ. ಕರಗಡ ನೀರಾವರಿ ಹೋರಾಟಗಾರರಾದ ನಟರಾಜ್ ಎಸ್ ಕೊಪ್ಪಲು. ನಿಜಗುಣ. ರಂಗಕರ್ಮಿ ಕಾಂತರಾಜ್ ಶಾಲೆಯ ಮುಖ್ಯ ಶಿಕ್ಷಕ ಯೋಗೇಶ್ ಇತರರು ಇದ್ದರು.
••••••••••••••••••••••••••••✒️
*ಡಿ.ಎಂ.ಮಂಜುನಾಥಸ್ವಾಮಿ*