ಆನೆಗಳನ್ನು ಸ್ಥಳಾಂತರ ಮಾಡುವಂತೆ ಮಾಜಿ ಮಂತ್ರಿಗಳಿಂದ ಮನವಿ.
1 min read
ಆನೆಗಳನ್ನು ಸ್ಥಳಾಂತರ ಮಾಡುವಂತೆ ಮಾಜಿ ಮಂತ್ರಿಗಳಿಂದ ಮನವಿ.
*ಮೂಡಿಗೆರೆ ವಿಧಾನಸಭಾ ಕ್ಷೇತ್ರದ* ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಹೋಬಳಿಯ ಮಾರಿಕಟ್ಟೆ, ತೊಂಡುವಳ್ಳಿ, ಕೆಸವಿನಮನೆ, ಗ್ರಾಮಗಳಲ್ಲಿ ಸುಮಾರು 22 ರಿಂದ 25 ಆನೆಗಳು ಬಂದು ಕಾಫಿ ತೋಟ ಲೂಟಿ ಮಾಡಿದ ಕಾರಣ *ಇಂದು (20.11.24) ಮಾಜಿ
ಸಚಿವರಾದ ಬಿ.ಬಿ ನಿಂಗಯ್ಯನವರು ಮತ್ತು ಹೆಚ್.ಹೆಚ್ ದೇವರಾಜ್ ಅವರು* ಡಿ.ಎಫ್.ಓ ಭೇಟಿ ಮಾಡಿ ಅವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಮತ್ತು ಆನೆ ಸ್ಥಳಾಂತರಿಸಿವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಂಜಪ್ಪಯ್ಯ, ಗಿರೀಶ್, ದಯಾನಂದ್, ಅಣ್ಣಯ್ಯ ಮರ್ಲೆ, ಜಗನಾಥ್, ಬೈರೇಗೌಡ್ರು, ಈರಯ್ಯ, ಗುರ್ ಶಾಂತಪ್ಪ, ಚಂದ್ರಯ್ಯ ಪ್ರೆಸ್, ಮಹೇಶ್, ರಘು, ದಿನೇಶ್, ರವಿ ವಸ್ತಾರೆ, ಊರಿನ ಗ್ರಾಮಸ್ಥರು ಜೊತೆಗಿದ್ದರು…