AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅದ್ಯಕ್ಷರಾಗಿ ಪುನರಾಯ್ಕೆ..

ಮಲ್ನಾಡ್ ಗಲ್ಫ್ ಟ್ರಸ್ಟ್ ಮಹಾಸಭೆ ಮೂಡಿಗೆರೆ.
ಪಟ್ಟಣದ ಶಾದಿ ಮಹಲ್ ನಲ್ಲಿ ಮಂಗಳವಾರ ಸಂಜೆ ನಡೆದ ಮಲ್ನಾಡ್ ಗಲ್ಫ್ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ವಲಯ ಸಮಿತಿ ವಾರ್ಷಿಕ ಮಹಾಸಭೆಯಲ್ಲಿ ಈ ಹಿಂದಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಉತ್ತಮ ಕಾರ್ಯವೈಖರಿಯನ್ನು ಗುರುತಿಸಿ ಪುನಃ ಅವರನ್ನೇ ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು.
ಸಭೆಯಲ್ಲಿ ಇತರೆ ಸದಸ್ಯರು ಕೇಳಿದ ಪ್ರಶ್ನೆಗೆ ಅಧ್ಯಕ್ಷ ಭೂತನಕಾಡು ಇಸಾಕ್ ಅವರು ಉತ್ತರಿಸಿ ನಮ್ಮ ಅವಧಿಯಲ್ಲಿ ನಮಗೆ ತಿಳಿದಂತೆ ಎಲ್ಲವೂ ಸ್ಪಷ್ಟವಾಗಿ ವಸ್ತುನಿಷ್ಠವಾಗಿ ಕರ್ತವ್ಯ ನಿರ್ವಹಿಸಿದ್ದನ್ನು ಆ ಭಗವಂತನು ಕಾಣುತ್ತಿದ್ದಾನೆ. ಈ ನೆಲೆಯಲ್ಲಿ ಕೆಲಸ ಮಾಡಿದ್ದೇವೆ. ಕೇಂದ್ರ ಸಮಿತಿ ತೆಗೆದುಕೊಳ್ಳುವ ಕೆಲವೊಂದು ನಿರ್ಧಾರ ನಮ್ಮ ಅರಿವಿಗೆ ಬಾರದೆ ವಲಯ ಸಮಿತಿಯಲ್ಲಿ ನಾವೆಲ್ಲರೂ ವಿಚಲಿತರಾಗಿದ್ದನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಚಾರಗಳಲ್ಲಿ ನಮಗೆ ತಿಳಿದ ಮಟ್ಟಿಗೆ ಯಾವುದೇ ಕಪ್ಪು ಚುಕ್ಕೆಯನ್ನು ಈ ಸಂಸ್ಥೆಗೆ ಬಾರದಂತೆ ಸಮಿತಿಯ ಪ್ರತಿಯೊಬ್ಬರು ಸಂಸ್ಥೆಯ ಪರವಾಗಿ ಅವರ ಹಾದಿಯಲ್ಲೇ ನಡೆದಿದ್ದೇವೆ ಎಂದು ತಿಳಿಸಿದರು.
ಟ್ರಸ್ಟ್ ವಲಯ ಸಮಿತಿ ಅಧ್ಯಕ್ಷನಾಗಿ 3 ವರ್ಷದಿಂದ ಒಳ್ಳೆಯ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ. ಪುನಃ ಸಮಿತಿಯ ಮುಂದುವರಿದ ಅಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಿದ್ದು ಮತ್ತಷ್ಟು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಕೇಂದ್ರ ಸಮಿತಿಯಿಂದ ವಲಯ ಮಟ್ಟದಲ್ಲಿ ಕೈಗೊಳ್ಳುವ ಯಾವುದೇ ಕಾರ್ಯಕ್ರಮದಲ್ಲಿ ಮೊದಲು ವಲಯ ಸಮಿತಿಗೆ ತಿಳಿಸಿದಲ್ಲಿ ಕರ್ತವ್ಯ ನಿರ್ವಹಿಸಲು ಸುಲಭವಾಗುತ್ತದೆ. ನೂತನ ಸದಸ್ಯರ ಸೇರ್ಪಡೆಯಿಂದ ಟ್ರಸ್ಟ್ ಮೂಲಕ ಜನರ ಸೇವೆ ಮಾಡಲು ಇನ್ನಷ್ಟು ಸುಲಭವಾಗಿದೆ. ಕೇಂದ್ರ ಸಮಿತಿ ಸೂಚನೆ ಮೇರೆಗೆ ಕಾರ್ಯಕಾರಣೆ ಸಮಿತಿಗೆ ಸುಮಾರು 14 ಜನರನ್ನು ಹೊಸದಾಗಿ ಸೇರ್ಪಡೆ ಮಾಡುವ ಮೂಲಕ 38 ಸದಸ್ಯರ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು. ಎಂಜಿಟಿ ರಾಷ್ಟ್ರೀಯ ಅಧ್ಯಕ್ಷ ಅಕ್ರಮ್ ಹಾಜಿ, ಸದಸ್ಯರಾದ ಪಿ.ಕೆ.ಹಮೀದ್, ಹಸನ್ ಕೊಟ್ಟಿಗೆಹಾರ, ವಲಯ ಘಟಕದ ಉಪಾಧ್ಯಕ್ಷರಾದ ಹುಸೈನ್ ಪಾಷ, ಅಬ್ದುಲ್ ಲತೀಫ್, ಶಬ್ಬಿರ್ ಅಹಮದ್ ಬೇಗ್, ಕಾರ್ಯದರ್ಶಿಗಳಾದ ಫಾರೂಕ್, ರಜಾಕ್, ಆಶಿಕ್, ಕೋಶಾಧಿಕಾರಿ ಇಬ್ರಾಹಿಂ ಶಾಲಿಮಾರ್, ಶಿಕ್ಷಣ ಸಂಯೋಜಕ ಶಾಹುಲ್, ಎ.ಸಿ.ಅಯ್ಯಬ್ ಹಾಜಿ, ವೈದ್ಯಕೀಯ ಸಂಯೋಜಕ ಮೊಯ್ದಿನ್ ಶೇಟ್, ಕಿರುಗುಂದ ಅಬ್ಬಾಸ್, ಮಹಮ್ಮದ್ ಅಲಿ, ಎಂ.ಎಸ್.ಇಬ್ರಾಹಿಂ, ರಿಜ್ವಾನ್ ಅಲಿ, ಇಸ್ಮಾಯಿಲ್ ಅಜಾದ್.ಹಸೈನಾರ್ ಬಿಳಗೊಳ. ಮುಸ್ತಾಕ್ ಬಿಳಗೊಳ..ಎಂ.ಎ.ಹನೀಫ಼್ ಬಿಳಗೊಳ. ಆಸಿಫ಼್ ಹಾರ್ಡ್ ವೆರ್..ಹಸನಬ್ಬ ಸಭ್ಬೆನಹಳ್ಲಿ..ಯಾಕೂಬ್ ಚಕ್ಕಮಕ್ಕಿ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *