ಮಲೆನಾಡಿಗೆ ರಾಜ್ಯ ಉಪಾಧ್ಯಕ್ಷ ಹುದ್ದೆ.
1 min read
ಮಲೆನಾಡಿಗೆ ರಾಜ್ಯ ಉಪಾಧ್ಯಕ್ಷ ಹುದ್ದೆ.
ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಜಾಕೀರ್ ಹುಸೇನ್ ಆಯ್ಕೆ
ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಜಾಕೀರ್ ಹುಸೇನ್ ರವರಿಗೆ ಮೂಡಿಗೆರೆ ಬಿಎಸ್ಪಿಯಿಂದ ಗೌರವ ಸಮರ್ಪಣೆ…
ಕಳೆದ ಎರಡು ದಶಕಗಳಿಂದ ಹೆಚ್ಚು ಪಕ್ಷಕ್ಕೆ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತ ಬಂದಿದ್ದ ಜಾಕೀರ್ ಹುಸೇನ್ ರವರಿಗೆ ಪಕ್ಷವು ಬಹುದೊಡ್ಡ ಹುದ್ದೆಯನ್ನು ಅಂದರೆ ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಿದೆ.
ಇದರ ಹಿನ್ನಲೆಯಲ್ಲಿ ದಿನಾಂಕ -26-10-2024 ಶನಿವಾರ ಮೂಡಿಗೆರೆ ತಾಲ್ಲೂಕು ಘಟಕದ ಸಭೆಯಲ್ಲಿ ಗೌರವ ಸಲ್ಲಿಸಲಾಯಿತು.. ಈ ಸಂದರ್ಭದಲ್ಲಿ ಬಿಎಂ ಶಂಕರ್, ಬಕ್ಕಿ ಮಂಜುನಾಥ್, ಎಲ್ ಬಿ ರಮೇಶ್, ಸುರೇಶ್, ಲಕ್ಷಣ ದೊಡ್ಡಯ್ಯ, ಶ್ರೀಕಾಂತ್, ಕುಮಾರ್, ಸತೀಶ್,ದಿನೇಶ್, ಗಣೇಶ್, ರತೀಶ್, ನಾಗೇಶ್, ಹೆಡದಾಳ್ ಅಭಿಜಿತ್ ಮುಂತಾದವರು ಹಾಜರಿದ್ದರು.