ಕಾಫಿ ಬೆಳೆಗಾರರ ಸುಸ್ಥಿ ಸಾಲಗಳನ್ನು ಇ-ಹರಾಜು ಸದ್ಯಕ್ಕಿಲ್ಲ….
1 min read
ಕಾಫಿ ಬೆಳೆಗಾರರ ಸುಸ್ಥಿ ಸಾಲಗಳನ್ನು ಇ-ಹರಾಜು ಸದ್ಯಕ್ಕಿಲ
ಕಾಫಿ ಬೆಳೆಗಾರರ ಸುಸ್ಥಿ ಸಾಲಗಳನ್ನು ಇ-ಹರಾಜು ಮಾಡದಂತೆ ಹಾಗೂ OTS ಮಾಡಿಕೊಳ್ಳಲು ಅನುವಾಗುವಂತೆ ಸದ್ಯದ 6 ತಿಂಗಳ ಕಾಲ ಯಾವುದೇ ಕ್ರಮ ಕೈಗೊಳ್ಳದಂತೆ ಮಾನ್ಯ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಸೂಚಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಚಿಕ್ಕಮಗಳೂರು ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯಸ್ಥರಾದ ಶ್ರೀ ಸುರೇಶ್ ರವರು ಎಲ್ಲ ಬ್ಯಾಂಕ್ ಗಳಿಗೆ ರವಾನಿಸಿರುವ ಸದರಿ ಸೂಚನೆಯ ಪ್ರತಿಯನ್ನು ಒದಗಿಸಿಕೊಟ್ಟಿರುತ್ತಾರೆ.
ಮೂಡಿಗೆರೆ ತಾ ಬೆಳೆಗಾರ ಸಂಘದ ಅಧ್ಯಕ್ಷರಾದ ಶ್ರೀ ಬಿ. ಆರ್ . ಬಾಲಕೃಷ್ಣ, ಬಿಜೆಪಿ ಮುಖಂಡರಾದ ಶ್ರೀ ದೀಪಕ್ ದೊಡ್ಡಯ್ಯ , ಬೆಳೆಗಾರರಾದ ಶ್ರೇಯಸ್, ನಿಡುವಾಲೆ ಚಂದ್ರು, ಪ್ರವೀಣ್ ಹಂತೂರು ಹಾಗೂ ಸುರೇಂದ್ರ ಕೋಳೂರು ರವರು ಹಾಜರಿದ್ದರು