ಗೊಕಳ್ಳರ ಬಂದನ.
1 min read
ಗೊಕಳ್ಳರ ಬಂದನ.
ಕೊಟ್ಟಿಗೆಹಾರ: ಅಕ್ರಮವಾಗಿ ಹೋರಿ ಮತ್ತು ಗೋವುಗಳನ್ನು ಸಾಗಿಸುತ್ತಿದ್ದ ಇಬ್ಬರು ಗೋಕಳ್ಳರನ್ನು ಬಂಧಿಸಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಬಿನ್ನಡಿ ಗ್ರಾಮದ ಅಶ್ವಥ್ ಮತ್ತು ಸಚಿನ್ ಬಂಧಿತ ಆರೋಪಿಗಳು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಿಂದ ವಿಟ್ಲ ತಾಲೂಕಿನ ಸಾಲೆತ್ತೂರಿಗೆ ಅಕ್ರಮವಾಗಿ ಮೂರು ಹೋರಿ ಮತ್ತು ಒಂದು ಗೋವನ್ನು ಸಾಗಿಸಲಾಗುತ್ತಿತ್ತು.
ಗುರುವಾಯನಕೆರೆ ಬಳಿ ವಾಹನ ತಡೆದು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತರಿಬ್ಬರೂ ಬಜರಂಗದಳದ ಕಾರ್ಯಕರ್ತರು ಎಂಬ ಆರೋಪ ಕೇಳಿ ಬಂದಿದ್ದು, ಇದಕ್ಕೆ ಸ್ಪಷ್ಟನೆ ನೀಡಿರುವ ಬಜರಂಗದಳ ಬಂಧಿತರು ತಮ್ಮ ಸಂಘಟನೆಗೆ ಸೇರಿಲ್ಲ ಎಂದಿದೆ.