AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

44.ನೆ *ಕಬ್ ಮತ್ತು ಬುಲ್ ಬುಲ್ ಉತ್ಸವ ಹಿನ್ನಲೆ* ಚ್ಯಾಂಪಿಯನ್ ಚಿಕ್ಕಮಗಳೂರು. ಹಳೇಬೀಡು ಪ್ರವಾಸಕ್ಕೆ ಚಾಲನೆ

1 min read

44.ನೆ *ಕಬ್ ಮತ್ತು ಬುಲ್ ಬುಲ್ ಉತ್ಸವ ಹಿನ್ನಲೆ*
ಚ್ಯಾಂಪಿಯನ್ ಚಿಕ್ಕಮಗಳೂರು.
ಹಳೇಬೀಡು ಪ್ರವಾಸಕ್ಕೆ ಚಾಲನೆ

ಚಿಕ್ಕಮಗಳೂರು:
೪೪ನೇ ರಾಜ್ಯಮಟ್ಟದ ಕಬ್ ಮತ್ತು ಬುಲ್ ಬುಲ್ ಉತ್ಸವದ ಅಂಗವಾಗಿ ಎರಡನೇ ದಿನವಾದ ಭಾನುವಾರ ಹಳೇಬೀಡು ಪ್ರವಾಸಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶಿವಾನಂದ ಸ್ವಾಮಿ ಅವರು ಪ್ರವಾಸಕ್ಕೆ ಚಾಲನೆ ನಡೆಯಿತು. ಪ್ರವಾಸಕ್ಕೂ ಮುನ್ನ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ವರೆಗೆ ಕಬ್ ಮತ್ತು ಬುಲ್ ಬುಲ್ ಎಳೆಯರು ಪಥ ಸಂಚಲನದಲ್ಲಿ ಹೆಜ್ಜೆ ಹಾಕಿದರು.
ಈ ಸಂದರ್ಭದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷ ಎ.ಎನ್ ಮಹೇಶ್, ಜಿಲ್ಲಾ ಮುಖ್ಯ ಆಯುಕ್ತ ಷಡಾಕ್ಷರಿ, ರಾಜ್ಯ ಸಂಚಾಲಕ ಎಲ್.ಟಿ.ಲೋಕೇಶ್, ಜಿಲ್ಲಾ ಕಾರ್ಯದರ್ಶಿ ನೀಲಕಂಠ ಆಚಾರ್, ಜಿಲ್ಲಾ ಖಜಾಂಚಿ ರಮೇಶ್, ಜಿಲ್ಲಾ ಗೈಡ್ಸ್ ಆಯುಕ್ತೆ ಮಮತಾ, ಜಿಲ್ಲಾ ಸ್ಕೌಟ್ಸ್ ಆಯುಕ್ತ ಫಣ ರಾಜ್, ಪದಾಧಿಕಾರಿಗಳಾದ ಸಂಗಮನಾಥ್, ಪ್ರಸನ್ನ, ರುಕ್ಮಿಣ , ಭಾರತಿ, ನಂದಕುಮಾರ್, ಷಣ್ಮುಖ ಸುಂದರಂ, ಕಿರಣಕುಮಾರ್, ರಕ್ಷಿತ್ ಬಾಳೂರು, ಪೊಲೀಸ್ ಠಾಣಾ ಪಿಎಸ್‌ಐ ಕೀರ್ತಿಕುಮಾರ್ ಮುಂತಾದವರು ಇದ್ದರು.

ಜನಮನ ಸೆಳೆದ ಕೀಟ ಪ್ರದರ್ಶನ

೪೪ನೇ ರಾಜ್ಯಮಟ್ಟದ ಕಬ್ ಮತ್ತು ಬುಲ್ ಬುಲ್ ಉತ್ಸವದ ಅಂಗವಾಗಿ ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಕೀಟ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕೀಟ ಪ್ರದರ್ಶನವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂದ್ಯಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮುಖ್ಯ ಆಯುಕ್ತ ಷಡಾಕ್ಷರಿ, ಕೀಟ ಜಗತ್ತಿನ ವಿಸ್ಮಯವನ್ನು ತೆರೆದಿಡುವುದಲ್ಲಿ ಈ ಕೀಟ ಪ್ರದರ್ಶನ ಸಹಕಾರಿಯಾಗಿದೆ. ಅದ್ಬುತವಾದ ಕೀಟ ಸಂಗ್ರಹ ಈ ಪ್ರದರ್ಶನದಲ್ಲಿದ್ದು ಈ ಪ್ರದರ್ಶನದ ಮೂಲಕ ಮಕ್ಕಳಲ್ಲಿ ಕೀಟಗಳ ಬಗ್ಗೆ ಆಸಕ್ತಿ, ಕುತೂಹಲ ಮೂಡಿ ಪರಿಸರ ಪ್ರಜ್ಞೆ ಮೂಡಲು ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷ ಎ.ಎನ್ ಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಡಾ.ಸಿ ರಮೇಶ್, ಬೆಳಗಾವಿ ರಾಣ ಚೆನ್ನಮ್ಮ ವಿಶ್ವವಿದ್ಯಾಲಯ ಉಪಕುಲಪತಿಗಳಾದ ಸಿ.ಎಂ ತ್ಯಾಗರಾಜ್, ಕೀಟ ತಜ್ಞರಾದ ಡಾ.ಅವಿನಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಾಂತ್ರಿಕ ಸಹಾಯಕ ನವದೀಪ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ಮುಂತಾದವರು ಇದ್ದರು.

About Author

Leave a Reply

Your email address will not be published. Required fields are marked *