ಯುವಕರು ದುಷ್ಚಟದಿಂದ ದೂರವಾಗಲು ಕರೆ:
1 min read
ಯುವಕರು ದುಷ್ಚಟದಿಂದ ದೂರವಾಗಲು ಕರೆ:
ಮೂಡಿಗೆರೆ ಯ ತಾಲೂಕಿನ ಫಲ್ಗುಣಿ ಯಲ್ಲಿ
ಶ್ರೀ ಪದ್ಮಾವತಿ ದೇವಿ ಸಂಘದ ವತಿಯಿಂದ ಗಣೇಶೋತ್ಸವ ಕಾರ್ಯ ಕ್ರಮ ನಡೆಯಿತು ಆ ಸಂದರ್ಭದಲ್ಲಿ
ಸನ್ಮಾನ ಸ್ವೀಕರಿಸಿ ಮಾತನಾಡಿದ ಯುವ ಜಾಗೃತಿ ಮತದಾರರ ವೇದಿಕೆ ರಾಜ್ಯ ಅದ್ಯಕ್ಷ
ಮಹೇಂದ್ರ ಕುಮಾರ್ ಫಲ್ಗುಣಿ
ಯುವಕರಿಗೆ
ಹಿತವಚನ ಹೇಳಿದರು
ಯುವಕರು ಕೆಟ್ಟ ಚಟಗಳಿಂದ ದೂರವಿರಬೇಕು.
ಸಮಾಜ ಮುಖಿ ಕೆಲಸಗಳಲ್ಲಿ ತೊಡಗಬೇಕೆಂದರು.
ಅವರು ಮುಂದುವರೆದು ಮಾತನಾಡುತ್ತಾ
ಪರಿಸರ ನಾಶ ಮಾಡದಂತೆ ಯುವಕರು
ಜನಸಾಮಾನ್ಯರಿಗೆ ಅರಿವು ಮೂಡಿಸಬೇಕೆಂದರು.
ನಿಮ್ಮಿಂದ ನಿರಂತರ ಸ್ವಚ್ಚತಾ ಕಾರ್ಯಗಳು ನಡೆಯಬೇಕು.
ನೀವು ಯಾವ ಧರ್ಮದಲ್ಲಿ ಇದ್ದಿರೋ ಆ ಧರ್ಮವನ್ನು ಸರಿಯಾಗಿ ಬಳಸಿಕೊಳ್ಳಿ ಯಾವ ಧರ್ಮದಿಂದಲೂ
ಯಾರಿಗೂ ತೊಂದರೆ ಆಗಬಾರದು
ಮನಸ್ಸಿನ ಸ್ವಚ್ಚತೆಯ ಜೊತೆಗೆ ಪರಿಸರದ ಸ್ವಚ್ಚತೆಯೂ ಅತ್ಯಗತ್ಯ ಎಂದರು.
ವೇದಿಕೆಯಲ್ಲಿ ಸ್ಥಳೀಯ ಶರತ್ ಫಲ್ಗುಣಿ.
ಲೋಹಿತ್. ಸತೀಶ್.
ಮಿಥುನ್. ಜಗದೀಶ್ ಇತರರರು ಹಾಜರಿದ್ದರು.
ನಂತರ ಕ್ರೀಡೆಯಲ್ಲಿ ಹಾಗು ನೃತ್ಯ ದಲ್ಲಿ ಭಾಗವಹಿಸಿ ಗೆದ್ದ ಕ್ರೀಡಾಪಟುಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು
ಈ ಸಂಧರ್ಭದಲ್ಲಿ ಮಹೇಂದ್ರ ಕುಮಾರ್ ಫಲ್ಗುಣಿ
ಊರಿನ ಏಳ್ಗೆಗಾಗಿ ತಮ್ಮ ಕೈಲಾದ
ಹಣ ಸಹಾಯ ಮಾಡಲು ಸಿದ್ದ ಎಂದು ವೇದಿಕೆಯಲ್ಲಿ ಘೋಷಣೆ ಮಾಡಿದರು .
ನಂತರ ವೇದಿಕೆಯಲ್ಲಿ ಸ್ಥಳೀಯ ನಾಯಕರನ್ನು
ಗೌರವಿಸಲಾಯಿತು.ಗ್ರಾಮಸ್ಥರು. ಸಾರ್ವಜನಿಕರು ಭಾಗವಹಿಸಿದ್ದರು.