AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದ ಹಂಗರ್ ಪ್ರಾಜೆಕ್ಟ್ ಮತ್ತು ಸುಗ್ರಾಮ .
ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಒಕ್ಕೂಟ ಸಂಘ ಮೂಡಿಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಹೆಜ್ಜೆ ಸಭಾಂಗಣದಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳಿಗೆ NBW ವಿಷಯಾಧಾರಿತ ಕಾರ್ಯಕ್ರಮವನ್ನು ಮಾಡಲಾಯಿತು.
ಈ ಕಾರ್ಯದಲ್ಲಿ ಮೂಡಿಗೆರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಮತ್ತು ಕಾಫಿ ನಾಡು ಸಮಾಜ ಸೇವಾ ಸಂಘ ಅಧ್ಯಕ್ಷರಾದ ಹಸೈನರ್ ಬಿಳಗೊಳ ಭಾಗವಹಿಸಿದ್ದರು ಕಾರ್ಯಗಾರದಲ್ಲಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರವರು ಪೊಲೀಸ್ ಠಾಣೆಯಲ್ಲಿ ಸಿಗುವ ಸೇವೆಗಳ ಕುರಿತಂತೆ ಮಾಹಿತಿಯನ್ನು ನೀಡಿದರು ಪೋಕ್ಸೋ ಕಾಯ್ದೆ ಮತ್ತು ಪ್ರಕ್ರಿಯೆಗಳ ಕುರಿತಂತೆ ಹಾಗೂ ಮಹಿಳೆ ಹಾಗೂ ಬಾಲಕಿಯ ರಕ್ಷಣೆಯ ಕುರಿತಂತೆ ಅನುಸರಿಸಬೇಕಾದ ಮಾನದಂಡಗಳು ಮತ್ತು ಅವರಿಗೆ ನೀಡುವಂತ ಸಹಕಾರಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಸಾರ್ವಜನಿಕ ವಲಯದಲ್ಲಿ ಇಂಥ ಪ್ರಕರಣಗಳು ಕಂಡುಬಂದಲ್ಲಿ ಸ್ವಯಂ ಪ್ರೇರಿತವಾಗಿ ಯಾರು ಕೂಡ ದೂರನ್ನು ಸಲ್ಲಿಸಬಹುದು ಅಥವಾ ದೂರವಾಣಿ ಕರೆ ಮಾಡಿ ದೂರನ್ನು ದಾಖಲಿಸಬಹುದು ಕರೆ ಮಾಡಿದವರ ಹೆಸರುಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ಮಾಹಿತಿಯನ್ನು ತಿಳಿಸಿದರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆಯಿಂದ ನೀಡಲಾಗುತ್ತಿರುವ ಸೇವೆಗಳು ಮತ್ತು ಬೀಟ್ ಪೊಲೀಸರ ಗಳ ಬಗ್ಗೆ ಮಾಹಿತಿಯನ್ನು ನೀಡಿದರು ಹಾಗೆಯೇ ಪೊಲೀಸ್ ಠಾಣೆಯಲ್ಲಿ ಇರುವ ಸೇವೆಗಳನ್ನು ಎಲ್ಲರೂ ಬಳಸಿಕೊಳ್ಳಬೇಕು, ಪೊಲೀಸರು ರಕ್ಷಣೆಗೆ ಇರುವುದು ವಿನಹ ದರ್ಪ ತೋರುವುದಕ್ಕೆ ಅಲ್ಲ ಎಂದು ತಿಳಿಸಿದರು.
ಯಾವುದೇ ತುರ್ತು ಸಂದರ್ಭದಲ್ಲಿ 112 ಕರೆ ಮಾಡುವುದು ಪೊಲೀಸರಿಗೆ ಮತ್ತು 112 ಇರುವ ಸಂಬಂಧದ ಬಗ್ಗೆ ವಿಷಯವನ್ನು ತಿಳಿಸಿದರು ಹಾಗೆಯೇ ಮಹಿಳಾ ಸದಸ್ಯರು ಮಹಿಳೆ ಮೇಲಿನ ರಕ್ಷಣೆ ಹಾಗೂ ಅತ್ಯಾಚಾರ ದೌರ್ಜನ್ಯ ಹಿಂಸೆ ಇವುಗಳ ಕುರಿತಂತೆ ಅನೇಕ ವಿಷಯಗಳನ್ನು ಮತ್ತು ಪ್ರಶ್ನೆಗಳನ್ನು ಅಧಿಕಾರಿಯವರಿಗೆ ಕೇಳಿದರು ಈ ವಿಷಯಗಳಿಗೆ ಸಂಬಂಧಿಸಿದಂತೆ ಸಮರ್ಪಕವಾದ ಉತ್ತರ ಮತ್ತು ಕಾನೂನುನಲ್ಲಿರುವ ಸಲಹೆಗಳನ್ನು ಪೋಲಿಸ್ ಅಧಿಕಾರಿ ನೀಡಿದರು .ಕಾಪಿನಾಡು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಹಸೈನರ್ ಬಿಳುಗುಳ ಮಾತನಾಡಿ ಯಾವುದೇ ರೀತಿಯ ಅನಾಹುತ ಅಪಘಾತ ಅಪಾಯ ಇನ್ನಿತರ ಸಂದರ್ಭದಲ್ಲಿ ಸ್ವಯಂ ಪ್ರೇರಿತವಾಗಿ ನಮ್ಮ ಸಂಘವು ಕಾರ್ಯನಿರ್ವಹಿಸುತ್ತಿದ್ದು ಯಾವುದೇ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಲು ನಾವು ಸಿದ್ಧರಿದ್ದು ತಮಗೆ ದೂರವಾಣಿ ಕರೆ ಮಾಡಿದಲ್ಲಿ ದಿನದ 24 ಗಂಟೆಗಳ ಕಾಲ ತ್ವರಿತವಾಗಿ ಯಾವುದೇ ಫಲಪೇಕ್ಷೆ ಇಲ್ಲದೆ ಸಾಮಾಜಿಕ ಕೆಲಸವನ್ನು ಮಾಡುತ್ತೇವೆ ಎಂದರು . ಕಾರ್ಯಕ್ರಮದಲ್ಲಿ ಪೊಲೀಸ್ ಸೇವೆಗಳು ಮತ್ತು ಕಾನೂನಾತ್ಮಕ ವಿಷಯಗಳು ಮಹಿಳೆ ರಕ್ಷಣೆ ಮಹಿಳೆ ಮೇಲಿನ ದೌರ್ಜನ್ಯ ಮಹಿಳೆ ಮತ್ತು ಬಾಲಕಿಯ ಮೇಲಾಗುತ್ತಿರುವ ಅತ್ಯಾಚಾರಗಳು ಪೋಸ್ಕೋ ಕಾಯ್ದೆ ಮತ್ತು ಬಾಲ ಗರ್ಭಿಣಿಯರು . ಬಾಲ್ಯ ವಿವಾಹ ಹಾಗೂ ಮಧ್ಯಪಾನ ಗಾಂಜಾ ಹಾಗೂ ಇನ್ನಿತರ ಡ್ರಗ್ಸ್ ಸೇವನೆ ಮತ್ತು ಸೈಬರ್ ಕ್ರೈಂ ಇವುಗಳ ಬಗ್ಗೆ ಮಾಹಿತಿಯನ್ನು ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್, ಚಂದ್ರಶೇಖರ್ ನೀಡಿದರು ಸುಗ್ರಾಮ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರಿಗೆ ದೇಶದಲ್ಲಾಗುತ್ತಿರುವ ಮತ್ತು ರಾಜ್ಯದಲ್ಲಾಗುತ್ತಿರುವ ಮಹಿಳೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಯನ್ನು ಖಂಡಿಸಿ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸುವಂತೆ ಮತ್ತು ಕಠಿಣ ಕಾನೂನು ಕ್ರಮಗಳನ್ನು ತರುವಂತೆ ಮನವಿಯನ್ನು ಸಬ್ ಇನ್ಸ್ಪೆಕ್ಟರ್ ಮೂಲಕ ಸರ್ಕಾರಕ್ಕೆ ನೀಡಲಾಯಿತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಮತ್ತು ಸಮಾಜ ಸೇವಕರಾದ ಹಸೈನಾರ್ ಬಿಳುಗುಳ ಅವರನ್ನು ಗೌರವ ಪುರಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸುಗ್ರಾಮ ತಾಲೂಕು ಸಂಯೋಜಕರಾದ ನವೀನ್ ಕುಮಾರ್ . ದೀಕ್ಷಿತ್ ಹುರುಡಿ ಮೂಡಿಗೆರೆ ತಾಲೂಕು ಗ್ರಾಮ ಪಂಚಾಯಿತಿ ಮಹಿಳಾ ಅಧ್ಯಕ್ಷರುಗಳು ಉಪಾಧ್ಯಕ್ಷರುಗಳು ಮತ್ತು ಸುಗ್ರಾಮದ ಸದಸ್ಯರು ಹಾಜರಿದ್ದರು

About Author

Leave a Reply

Your email address will not be published. Required fields are marked *