ಸ್ವಚ್ಛತೆ ಹಾಗೂ ಡೆಂಗ್ವೀಜ್ವರ ನಿಯಂತ್ರಣಕ್ಕೆ ತೆಗೆದುಕೊಳ್ಳ ಬೇಕಾಗಿರುವ ಕ್ರಮಗಳ ಬಗ್ಗೆ ತಿಳುವಳಿಕೆ

ದಿನಾಂಕ 04:08:2024ರಂದು ಬೆಳಿಗ್ಗೆ ಸಮಯ 10.30 ರಿಂದ ಗೋಣಿಬೀಡು ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲೂ ಸ್ವಚ್ಛತೆ ಹಾಗೂ ಡೆಂಗ್ವೀಜ್ವರ ನಿಯಂತ್ರಣಕ್ಕೆ ತೆಗೆದುಕೊಳ್ಳ ಬೇಕಾಗಿರುವ ಕ್ರಮಗಳ ಬಗ್ಗೆ ತಿಳುವಳಿಕೆ ಕಾರ್ಯಕ್ರಮವನ್ನು ಎರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕಿನ ಯೋಜನೆ ಅಧಿಕಾರಿ ಶಿವಾನಂದ ಮಾಹಿತಿ ನೀಡಿದರು ಹಾಗೂ ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ಅಧ್ಯಕ್ಷರಾದ ಆದರ್ಶ, ಕಾರ್ಯದರ್ಶಿ ಜಗತ್ ಸ್ವಚ್ಛತೆ ಡೆಂಗೋ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಲಯ ಮೇಲ್ವಿಚಾರಕ ದೀಪಕ್ , ವಂದಿಸಿದರು ಹಾಗೇ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕ ಜಗತ್, ಮಂಜುನಾಥ್, ಉದಯ್, ಪೂರ್ಣೇಶ್, ಇಂದಿರಶೇಖರ್, ಸಂಯೋಜಕ ಹೇಮಾ , ಜೆ ಸಿ ಪೂರ್ವ ಅಧ್ಯಕ್ಷ ಸುಂದ್ರೇಶ್. ಆಸ್ಪತ್ರೆ ಸಿಬ್ಬಂದಿಗಳು. ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.