AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

# ಅತಿವೃಷ್ಟಿ # ಅತಿಮಳೆ # ಭೂಕುಸಿತ. ಮಲೆನಾಡ ಮಹಿಳೆಯ ಕಣ್ಣಿರು.

1 min read

# ಅತಿವೃಷ್ಟಿ # ಅತಿಮಳೆ # ಭೂಕುಸಿತ.
ಮಲೆನಾಡ ಮಹಿಳೆಯ ಕಣ್ಣಿರು.
ನಾವು ನೋಡಿದಂತೆ ಬಾರಿಮಳೆ ಸುರಿದರು ಬಿರುಗಾಳಿ ಬೀಸಿದರು ನದಿ ಹಳ್ಳಕೊಳ್ಳ ತುಂಬಿ ಹರಿದು ಬಯಲು ಹಳ್ಳ ಹತ್ತಿದರು ಗುಡ್ಡವೇನು ಕುಸಿಯುತ್ತಿರಲಿಲ್ಲ..
ಅಭಿವೃದ್ಧಿ ಹೆಸರಿನಲ್ಲಿ ಪವರ್ ರ್ಪ್ಲಾಂಟ್ ಲೈನ್ ಕಂಬಗಳು ಗ್ಯಾಸ್ ಡೀಸೆಲ್ ಸಾಗಾಣಿಕೆಗೆ ಬೃಹತ್ ಪೈಪ್ ಅಳವಡಿಕೆ ಹಾಗೆ ನದಿ ತಿರುವು ಯೋಜನೆಗಳು ಹೆದ್ದಾರಿ ರಸ್ತೆಗಳ ಅಗಲೀಕರಣ ಕಲ್ಲು ಗಣಿಗಾರಿಕೆ ಮರಕಡಿತ ಗುಡ್ಡಗಾಡಿನಲ್ಲಿ ಭೂ ಸಮಾತಟ್ಟು ಮಾಡಿ ಕಟ್ಟಡ ನಿರ್ಮಾಣ ಕೆರೆಕಟ್ಟೆ ಮುಚ್ಚಿ ವಸತಿ ಸಮುಚ್ಚಯ ನಿರ್ಮಾಣ ಯರ್ರಾ ಬಿರ್ರಿ ರಸ್ತೆ ಆಗೆತ ಹೀಗೆ ಮಣ್ಣಿನ ಗುಣಮಟ್ಟ ಪರೀಕ್ಷಿಸದೆ ಕೈಗೊಂಡ ಹತ್ತು ಹಲವಾರು ಯೋಜನೆಗಳು.ಇವಾಗಿನ ಭೂ ಕುಸಿತಕ್ಕೆ ಬಲವಾದ ಕಾರಣಗಳು
ಹಾಗೆ ಘಟ್ಟ ಶ್ರೇಣಿಯ ನಿತ್ಯ ಹರಿಧ್ವರ್ಣ ಕಾಡು ಮಳೆ ನದಿ ಕಣ್ಣತುಂಬೋ ಸೊಬಗು ನಿಸರ್ಗದತ್ತ ಕೊಡುಗೆ
ಪ್ರಸ್ತುತ ಪಶ್ಚಿಮ ಘಟ್ಟ ಶ್ರೇಣಿ ತನ್ನ ಗಟ್ಟಿತನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಪಶ್ಚಿಮ ಘಟ್ಟಯೋಜನೆ ತಮಿಳುನಾಡಿನಿಂದ ಗುಜರಾತ್ ತನಕ ಜೀವ ವೈವಿಧ್ಯತೆ ಹೊಂದಿದೆ. ಘಟ್ಟ ಪ್ರದೇಶದಲ್ಲಿ ಸರ್ಕಾರ ಕೂಡ ಸಾವಿರಾರು ಎಕರೆ ಭೂಮಿಯನ್ನು ಪ್ಲಾಂಟೇಷನ್ ಬೆಳೆ ಬೆಳೆಯಲು ಗುತ್ತಿಗೆ ನೀಡಿದೆ
ಮಾಧವ ಗಾಡ್ಗಿಲ್ ವರದಿ, ಕಸ್ತೂರಿರಂಗನ್ ವರದಿ ಹಾಗೆ ಪರಿಸರವಾದಿಗಳ ಮಾತನ್ನು ವಿರೋದಿಸುವ ನಾವು ಒಮ್ಮೆ ಯೋಚಿಸೋಣ ನಮ್ಮಊರಿನ ಬೆಟ್ಟಗುಡ್ಡದಲ್ಲಿ ಎಷ್ಟು ಹೋಂಸ್ಟೇ ನಿರ್ಮಾಣ ಆಗಿವೆ. ಪ್ರವಾಸೋದ್ಯಮದ ಹೆಸರಿನಲ್ಲಿ ಎಷ್ಟು ಗುಡ್ಡದ ಕಾಲುದಾರಿ ಸವೆದು ಕವಲೋಡೆದು ಧರೆ ಜರಿದು ದಾರಿಯಾಗಿದೆ. ಅದರೊಳಗೆ ಮಳೆ ನೀರು ಹರಿದು ಪ್ರಪಾತವಾಗಿದೆ. ಮುಂದೆ ಗುಡ್ಡ ಮಕಾಡೆಯಾದರೆ ಅದರ ಕೆಳಗಿನ ಕೃಷಿಜಮೀನು ಊರು ನಿರ್ನಾಮ ಆಗುವುದರಲ್ಲಿ ಸಂದೇಹವಿಲ್ಲ.
ವಿಜ್ಞಾನ ಮುಂದುವರೆದರೇನು ಜಾಗತಿಕ ತಾಪಮಾನ ಹೆಚ್ಚಾದಂತೆ ಮಳೆ ಚಳಿ ಭರ ಹವಾಮಾನ ಅರಿಯಲಾಗದು.
ಪ್ರಕೃತಿಯ ಮುನಿಸಿಗೆ ನಾವೇ ಕಾರಣರಲ್ಲವೇ
ನೆಲಸಮವಾದ ನಾಗರೀಕತೆಗೆ ಹೊಣೆಗಾರರು ಯಾರು??ಎಂಬ ಪ್ರಶ್ನೆ ಕಾಡುತ್ತೆ
ಮೊನ್ನೆ ದೇವರನಾಡಿನಲ್ಲಿ ಆಗಿದ್ದು ಇದೇನೆ ಗಾಢ ನಿದ್ದೆಯಲ್ಲಿರುವಾಗ ಆಸ್ತಿ ಅಂತಸ್ತು ಜೀವ ಜೀವನ ಎಲ್ಲವೂ ಕೊಚ್ಚಿ ಅವಶೇಷವಾಯಿತು
ಭೂಮಿತಾಯಿ ಮುನಿದು ಬಾಯಿ ತೆರೆದು ನುಂಗಿ ಬಟಾಬಯಲು ಸ್ಮಶಾನ ಮಾಡಿದ್ದು ಪ್ರಕೃತಿ ಮಾತೆಯ ರೌದ್ರ ಅವತಾರ ಅಲ್ಲವೇ.

ಬರಹ.
ಶಾಂತಲನಾಗೇಶ್.ಕೊಟ್ರಕೆರೆ.
ಮೂಡಿಗೆರೆ.

About Author

Leave a Reply

Your email address will not be published. Required fields are marked *