ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತರೀಕೆರೆ ಇವರಿಂದ
1 min read
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತರೀಕೆರೆ ಇವರಿಂದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಬಿ. ಆರ್ ಶೃತಿ ರವರಿಗೆ ತರೀಕೆರೆ ಪಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ಅಭಿನಂದಿಸಲಾಯಿತು. ಈ ಸಮಯದಲ್ಲಿ ತರೀಕೆರೆ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಜಿ. ಹೆಚ್. ಶ್ರೀನಿವಾಸ್ ಹಾಗೂ ತರೀಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ರವಿ ದಳವಾಯಿ, ಗೌರವ ಕಾರ್ಯದರ್ಶಿಗಳಾದ ತ.ಮ.ದೇವಾನಂದ್, ಸಂಘಟನಾ ಕಾರ್ಯದರ್ಶಿಗಳಾದ ದಾದಾಪೀರ್, ತರೀಕೆರೆ ಕಸಬಾ ಹೋಬಳಿ ಅಧ್ಯಕ್ಷರಾದ ಟಿ ಎನ್. ಜಗದೀಶ್, ದರ್ಶನ್ ದುಗ್ಲಾಪುರ, ಶೇಖರಪ್ಪ, ಸದಾನಂದ್, ಜಿ. ಟಿ. ರಮೇಶ್, ಮಂಜುನಾಥ್ ಲಾಡ್, ತಹಶೀಲ್ದಾರ್ ರಾಜೀವ್ ಸರ್. ಪುರಸಭೆ ಮುಖ್ಯ ಅಧಿಕಾರಿ ಪ್ರಶಾಂತ್, ತರೀಕೆರೆ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರು ಸುನಿತಾ ಕಿರಣ್ ಹಾಗೂ ಇತರರು ಗೌರವ ಸಮರ್ಪಣಾ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರವಿ ದಳವಾಯಿ
ಅಧ್ಯಕ್ಷರು ಹಾಗೂ ಪದಾಧಿಕಾರಿಗಳು
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ತರೀಕೆರೆ