“ಪರ್ಸ್ ಕಳೆದುಕೊಂಡ ಮಹಿಳೆಯ ಪಾಲಿಗೆ ದೇವರಾದ ಸಬ್ಲಿ ದೇವರಾಜ್.”
1 min read
ಪರ್ಸ್ ಕಳೆದುಕೊಂಡ ಮಹಿಳೆಗೆ ಪರ್ಸ್ ಹಿಂದಿರುಗಿಸುವ ಮೂಲಕ ವ್ಯಕ್ತಿಯೊಬ್ಬರು ಮಾನವೀಯತೆ ಮೆರೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಬಣಕಲ್ ನಲ್ಲಿ ನಡೆದಿದೆ.
ಬಣಕಲ್ ನಲ್ಲಿ ದಿನಾಂಕ 21/07/2024ರ ಭಾನುವಾರದಂದು ಓರ್ವ ಮಹಿಳೆ ಪರ್ಸನ್ನು ರಸ್ತೆಯಲ್ಲಿ ಬೀಳಿಸಿ ಹೋಗಿದ್ದರು.ಆ ಪರ್ಸ್ ಸಬ್ಲಿ ದೇವರಾಜ್ ಅವರಿಗೆ ಸಿಕ್ಕಿತ್ತು.ಅದರಲ್ಲಿ ಆಧಾರ್ ಕಾರ್ಡ್ ಪರಿಶೀಲಿಸಿದಾಗ ಪಿಲೋಮಿನಾ ಪಾಯ್ಸ್,ಚನ್ನಡ್ಲು ಎಂದು ವಿಳಾಸ ಇತ್ತು.
ಹೀಗಾಗಿ ಅವರನ್ನು ಕೊಟ್ಟಿಗೆಹಾರಕ್ಕೆ ಕರೆಸಿ ಅವರ 1,500 ಸಾವಿರ ರೂಪಾಯಿ ನಗದು,ಎಟಿಎಂ ಕಾರ್ಡ್,ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳ ಸಮೇತ ಅವರಿಗೆ ದೇವರಾಜ್ ಅವರು ಹಣದ ಪರ್ಸ್ ಮರಳಿಸಿ ಮಾನವೀಯತೆ ಮೆರೆದಿದ್ದಾರೆ.
✍️ಬರಹ ಕೃಪೆ.✍️
ಸಿದ್ದಿಕ್ ಚಕ್ಕಮಕ್ಕಿ.
7847891857.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.