लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಅದ್ದೂರಿಯಾಗಿ ಕಾರ್ಗಿಲ್ ವಿಜಯೋತ್ಸವಕ್ಕೆ ಸಿದ್ಧತೆ : ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಅವಿನಾಶ್.”

1 min read

oplus_0

ಮೂಡಿಗೆರೆ (Mudigere) : ಕಾರ್ಗಿಲ್ ವಿಜಯೋತ್ಸವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಾಗಿದೆ.ಹಾಗಾಗಿ ಈ ಬಾರಿ ಕಾರ್ಗಿಲ್ ವಿಜಯೋತ್ಸವವನ್ನು ಬಿಜೆಪಿ ಯುವ ಮೋರ್ಚಾದಿಂದ ದಿನಾಂಕ 25/07/2024 ಹಾಗೂ 26/07/2024 ರಂದು ಅದ್ದೂರಿಯಾಗಿ ಜಿಲ್ಲೆಯಾಧ್ಯಂತ ನಡೆಸಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಅವಿನಾಶ್ ಹೇಳಿದರು.

ಜುಲೈ 25ರಂದು ಬೆಳಗ್ಗೆ 9 ಗಂಟೆಗೆ ಪಟ್ಟಣದ ಅಮರ್ ಜವಾನ್ ಸ್ಮಾರಕದಿಂದ ವಿಜಯ ಜ್ಯೋತಿ ಯಾತ್ರೆ ರಥಕ್ಕೆ ಬಿಜೆಪಿ ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷ
ಡಾ.ಮಲ್ಲಿಕಾರ್ಜುನ ಬಾಳೆಕಾಯಿ ಚಾಲನೆ ನೀಡಲಿದ್ದಾರೆ.ಬಳಿಕ ರಥ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಗಿ ನಂತರ ಆಲ್ದೂರು,ಬಾಳೆಹೊನ್ನೂರು, ಶೃಂಗೇರಿ,ಕೊಪ್ಪ,ಎನ್.ಆರ್.ಪುರಕ್ಕೆ ಸಾಗಲಿದೆ ಎಂದರು.

ಮರುದಿನ ಜುಲೈ 26ರಂದು ಬೆಳಗ್ಗೆ 9 ಗಂಟೆಗೆ ಲಕ್ಕವಳ್ಳಿಯಿಂದ ಪ್ರಾರಂಭಿಸಿ ತರಿಕೆರೆ,ಬೀರೂರು, ಕಡೂರು,ಸಕ್ಕರಾಯ ಪಟ್ಟಣ ನಂತರ
ಚಿಕ್ಕಮಗಳೂರು ನಗರಕ್ಕೆ ತೆರಳಲಿದ್ದು,ಸಂಜೆ ಪಂಜಿನ ಮೆರವಣಿಗೆ ಮೂಲಕ ಆಜಾದ್ ಪಾರ್ಕಿಗೆ ಸಾಗಿ ಬೃಹತ್ ಬಹಿರಂಗ ಸಭೆ ನಡೆಯಲಿದೆ.ಕಾರ್ಗಿಲ್
ಯುದ್ದದಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುವುದು ಭಾರತೀಯರ ಕರ್ತವ್ಯವಾಗಿದೆ.ಹಾಗಾಗಿ ಎಲ್ಲಾ ಪಕ್ಷ,ಪ್ರಗತಿಪರ ಸಂಘಟನೆಗಳು,ವಿದ್ಯಾರ್ಥಿಗಳು ಕಾರ್ಗಿಲ್ ವಿಜಯೋತ್ಸವಕ್ಕೆ ಆಗಮಿಸುವ ಮೂಲಕ
ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ನಮ್ಮ ವಾಹಿನಿಯ ಮೂಲಕ ಮನವಿ ಮಾಡಿದರು.


ಈ ಸಂದರ್ಭದಲ್ಲಿ ಪ.ಪಂ.ಸದಸ್ಯ ಮನೋಜ್‌ಕುಮಾರ್, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಬಾಲುಶೆಟ್ಟಿ, ತಾಲ್ಲೂಕು ಅಧ್ಯಕ್ಷ ತಾರೇಶ್,
ಪ್ರಧಾನ ಕಾಯದರ್ಶಿ ಶಶಿ ಕೆಲ್ಲೂರು ಮುಂತಾದವರು ಉಪಸ್ಥಿತರಿದ್ದರು.

✍️ಬರಹ ಕೃಪೆ.✍️

ಸಿದ್ದಿಕ್ ಚಕ್ಕಮಕ್ಕಿ.

7847891857.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

 

About Author

Leave a Reply

Your email address will not be published. Required fields are marked *