“ಮನೆ ಮೇಲೆ ಉರುಳಿದ ಮರ”-ಸ್ಪಂದಿಸಿದ ಆದಿ ದ್ರಾವಿಡ ಸಮಾಜ
1 min read
*ಆದಿದ್ರಾವಿಡ ಸಮಾಜ ಸೇವಾ ಸಂಘ ಚಿಕ್ಕಮಗಳೂರು ಜಿಲ್ಲೆ*
ಬಾಳೂರು ಹೋಬಳಿ ಆದಿದ್ರಾವಿಡ ಸಮಾಜದ ಸದಸ್ಯರಾದ ಸಂತೋಷ್ ನಿಡುವಾಳೆಯವರ ಮನೆಯು ಇತ್ತೀಚೆಗೆ ಸುರಿದ ಮಳೆಗೆ ರಾತ್ರಿ 10:30 ರ ಸುಮಾರಿಗೆ ಮರ ಬಿದ್ದು ಹಾನಿ ಸಂಭವಿಸಿ ವಾಸಕ್ಕೆ ಅನಾನುಕೂಲವಾಗಿದೆ.
ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸಂತೋಷ್ ರವರ ತಾಯಿ ಲಲಿತಮ್ಮ, ತುಂಬು ಗರ್ಭಿಣಿ ಹೆಂಡತಿ ಲಕ್ಷ್ಮೀ , ಮಗಳು ಮಗಳು ಪವಾಡ ಸದೃಶ ಪಾರಾಗಿದ್ದಾರೆ.
ಇಂದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧ್ಯಕ್ಷರಾದ ಸುರೇಶ್ ಆರ್ಡಿಕೊಪ್ಪ ಮನೆ ನಿರ್ಮಾಣಕ್ಕೆ ಸಹಕಾರಿಯಾಗುವಂತೆ ಸಂಭಂದಪಟ್ಟ ಅಧಿಕಾರಿಗಳ ಜೊತೆ ಪರಿಹಾರಕ್ಕಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಆದಷ್ಟು ಬೇಗ ಸ್ಪಂದಿಸುವಂತೆ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಮೂಡಿಗೆರೆ ತಾ॥ ಅಧ್ಯಕ್ಷರಾದ ಕೃಷ್ಟಪ್ಪ ಜಾವಳಿ, ಜಿಲ್ಲಾ ಆಟೋ ಸಂಘದ ಅಧ್ಯಕ್ಷರಾದ ವಿಶ್ವ ಆಟೋ, ಬಾಳೂರು ಹೋಬಳಿ ಉಪಾಧ್ಯಕ್ಷರಾದ ಶಿವಪ್ಪ ಉರುವಿನಖಾನ್ , ಕಾರ್ಯದರ್ಶಿ ಶಂಕರ್ ಹೇಮಾವತಿ, ಸದಸ್ಯರಾದ ಶೀನಾ ಹೇಮಾವತಿ , ಸದಾಶಿವ ನಿಡುವಾಳೆ ಸೈಟ್, ಕಲ್ಮನೆ ದೈವಸ್ಥಾನ ಸಮಿತಿ ಅಧ್ಯಕ್ಷರಾದ ಬಿ.ಕೆ. ಸಂಜೀವ, ಉರುವಿನಖಾನ್ ಘಟಕ ಅಧ್ಯಕ್ಷರಾದ ಪ್ರವೀಣ್ ಮಾಸ್ಟರ್, ಸದಸ್ಯ ಪ್ರಭಾಕರ್ , ನಿಡುವಾಳೆ ಘಟಕ ಉಪಾಧ್ಯಕ್ಷರಾದ ಮಹೇಶ್ ಆಟೋ ಮತ್ತಿತರರು ಉಪಸ್ಥಿತರಿದ್ದರು.