ಮಾನವನ ರಕ್ಷಣೆಗಾಗಿ ಸಂಘಟನೆ:* ಇದೇನಪ್ಪಾ
1 min read
*ಮಾನವನ ರಕ್ಷಣೆಗಾಗಿ ಸಂಘಟನೆ:* ಇದೇನಪ್ಪಾ ಮಾನವನ ರಕ್ಷಣೆಗಾಗಿ ಸಂಘಟನೆ ಎಂದು ಬೆರಗಾಗಬೇಕಾಗಿಲ್ಲ, ಅಂತಹ ಅನಿವಾರ್ಯ ಈಗ ಬಂದೊದಗಿದೆ. ಪ್ರಸ್ತುತ ದಿನಗಳಲ್ಲಿ ಪ್ರಾಣಿಗಳಿಗಿಂತ ಮನುಷ್ಯ ಕಡೆಯಾಗಿದ್ದಾನೆ. ಪ್ರಾಣಿ, ಪಕ್ಷಿಗಳ ಮೇಲೆ ಇರುವ ದಯೆ ಮನುಷ್ಯರ ಮೇಲೆ ಇಲ್ಲದಂತಾಗಿದೆ. ಉಪದ್ರವ ನೀಡದ, ಅಮಾಯಕ ಪ್ರಾಣಿ ಮತ್ತು ಪಕ್ಷಿಗಳ ಸಂರಕ್ಷಣೆ ನಮ್ಮ ಕರ್ತವ್ಯ ಒಪ್ಪಿಕೊಳ್ಳೋಣ. ಆದರೆ ಅಮಾಯಕ ಮನುಷ್ಯರ ಬಲಿ ಪಡೆಯುವ ಕ್ರೂರ ಪ್ರಾಣಿಗಳ ರಕ್ಷಣೆ ಒಂದಿಷ್ಟು ಚರ್ಚೆಯ ವಿಷಯ. ಆದರೆ ನಮ್ಮ ನಡುವೆಯೇ ಇದ್ದು ಮಾರಣಾಂತಿಕವಾಗಿ ಹಲ್ಲೆ ಮಾಡಿ, ಗಾಯಗೊಳಿಸಿ ಅಪಾಯ ಉಂಟು ಮಾಡುವ ಹಾಗೂ ಮುಗ್ಧ ಮಕ್ಕಳ ಮೇಲೆ ಧಾಳಿ ಮಾಡಿ ಕಚ್ವಿ ಕೊಲ್ಲುವ ಬೀದಿ ನಾಯಿಗಳ ನಿಯಂತ್ರಣ ಇಡೀ ಸಮಾಜಕ್ಕೆ ದೊಡ್ಡ ಸವಾಲಾಗಿದೆ. ಈ ಸಮಸ್ಯೆ ಈಚೆಗೆ ಶುರುವಾಗಿದ್ದು, ಪ್ರಾಣಿ ದಯಾ ಸಂಘಗಳ ವಿವೇಚನಾ ರಹಿತ ಹೋರಾಟಗಳಿಂದ. ಪ್ರತಿ ನಿತ್ಯ. ದೇಶದಲ್ಲಿ ಕೋಟ್ಯಾಂತರ ಕುರಿ, ಮೇಕೆ, ದನ, ಕೋಳಿ, ಮೀನು, ಇತರೆ ಪ್ರಾಣಿ ಪಕ್ಷಗಳನ್ನು ಆಹಾರಕ್ಕಾಗಿ ಕೊಲ್ಲಲಾಗುತ್ತದೆ. ಇದು ಪ್ರಾಣಿ ಹಿಂಸೆ ಅಲ್ಲವೇ. ಅವುಗಳ ಮನುಷ್ಯನಿಗೆ ಯಾವುದೇ ತರಹದ ಉಪದ್ರವ ನೀಡುವುದಿಲ್ಲ. ಕಾಡಿನಿಂದ ಊರಿಗೆ, ಗ್ರಾಮಕ್ಕೆ ಬರುವ ಆನೆ, ಹುಲಿ, ಚಿರತೆ, ಕರಡಿ, ಸಿಂಹ, ಇತರೆ ಕಾಡು ಪ್ರಾಣಿಗಳು ಮನುಷ್ಯನಿಗೆ ಉಪಠಳ ನೀಡಿದಾಗ ಅರಣ್ಯ ಇಲಾಖೆಯವರು ತಕ್ಷಣ ಕಾರ್ಯಪ್ರವೃತ್ತರಾಗಿ ಅಂತಹ ಪ್ರಾಣಿಗಳನ್ನು ಸಂರಕ್ಷಿಸಿ, ಮೂಲ ಸ್ಥಾನಕ್ಕೆ ಸೇರಿಸುವುದಲ್ಲದೇ ತೊಂದರೆಗೊಳಗಾದವರಿಗೆ, ಮೃತರ ಕುಟುಂಬಕ್ಕೆ ಪರಿಹಾರವನ್ನು ನೀಡಲಾಗುತ್ತದೆ. ಆದರೆ ಯಾರದೋ ಮನೆಯ ರಕ್ಷಣೆಗೆ ಸಾಕಿಕೊಂಡ ಅಥವಾ ಸಾಕಿ ವಂಶಾಭಿವೃದ್ಧಿಯಾದ ಬಳಿಕ ಬೀದಿಗೆ ಬಿಟ್ಟ ಬೀದಿ ನಾಯಿಗಳ ನಿಯಂತ್ರಣ ಹೇಗೆ. ನಾನಾ ರೋಗಗಳನ್ನು ಹರಡುವ, ಮನುಷ್ಯನ ಜೀವಕ್ಕೆ ಅಪಾಯ ತರುವ ಬೀದಿನಾಯಿಗಳ ಸಮಸ್ಯೆಗೆ ಪರಿಹಾರ ಹುಡುಕುವವರು ಯಾರು? ಕಳೆದ ಎರಡು ಮೂರು ದಶಗಳ ಹಿಂದೆ ಅವುಗಳ ಸಂಖ್ಯೆ ತುಂಬಾ ಕಡಿಮೆ ಪ್ರನಾಣದಲ್ಲಿತ್ತು. ಆದರೆ ಈಗ ಅವುಗಳ ಸಂಖ್ಯೆ ಪ್ರತಿ ಬೀದಿಯಲ್ಲಿ ಗಣನೀಯ ಸಂಖ್ಯೆಯಲ್ಲಿ ಹೆಚ್ಚಿದ್ದು ನೂರಾರು ಬೀದಿ ನಾಯಿಗಳ ಹಗಲು ರಾತ್ರಿ ಜನರಿಗೆ ನಾನಾ ರೀತಿಯ ತೊಂದರೆ ಕೊಡಲು ಆರಂಭಿಸಿದೆ. ಮಕ್ಕಳು ವೃದ್ಧರು ಬೀದಿನಾಯಿಗಳಿಂದ ಪಾರಾಗುವುದು ತುಂಬಾ ಕಷ್ಟಕರವಾಗಿದೆ. ಜನ ವಸತಿ ಪ್ರದೇಶದಲ್ಲಿ ಒಂಟಿಯಾಗಿ ಹೋಗುವ ಮಹಿಳೆಯರು, ಮಕ್ಕಳು, ಹಿರಿಯರ ಮೇಲೆ ಒಮ್ಮೇಲೆ ಹತ್ತಾರು ಬೀದಿ ನಾಯಿಗಳು ಧಾಳಿ ಮಾಡಿ, ಕಚ್ಚಿ ಕೊಙದಿರುವ ನೂರಾರು ಘಟನೆಗಳಿಗೆ ಕಾರಣ ಯಾರು ? ಎಂಬುದು ಯಕ್ಷ ಪ್ರಶ್ನೆ. ಪ್ರಾಣಿ ದಯಾ ಸಂಘದ ಮನವಿ ಮೇಲೆ ಸುಪ್ರೀಂ ಕೋರ್ಟ್ ಆದೇಶ ಮಾಡಿ, ಅವುಗಳನ್ನು ಕೊಲ್ಲಬಾರದು ಎಂದಿದೆ. ಸಂತಾನ ಹರಣ ಮಾಡಿ ಅವುಗಳ ಸಂಖ್ಯೆಯ ನಿಯಂತ್ರಣ ಆಗುತ್ತಿಲ್ಲ. ಸರ್ಕಾರ, ಜಿಲ್ಕಾಡಳಿತ, ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ, ಉದಾಸೀನತೆ, ಬೇಜವಾಬ್ಧಾರಿತನದಿಂದ ನಿತ್ಯ ಹತ್ತಾರು ಸಾವು ನೋವುಗಳು ಸಂಭವಿಸುತ್ತಿವೆ. ನ್ಯಾಯಾಲಯವಾಗಲಿ, ಪ್ರಾಣಿ ದಯಾ ಸಂಘಗಳಾಗಲಿ ಸಮಸ್ಯೆ, ಅಪಾಯ, ಹಿಂಸೆ ಕಡೆ ಗಮನ ಕೊಡುತ್ತಿಲ್ಲ ಮತ್ತು ಪರಿಹಾರ ಸೂಚಿಸುತ್ತಿಲ್ಲ. ಹಾಗಾದರೆ ಇದಕ್ಕೆ ಯಾರು ಹೊಣೆ. ಪ್ರಾಣ ಹಾನಿಗೆ ಕಾರಣ ಯಾರು ? ಬೇಸತ್ತ ಜನ ರೊಚ್ಚಿಗೆದ್ದು ಬೀದಿಗಳಿದರೆ ಗತಿ ಏನು ? ನೊಂದವರಿಗೆ ಸಾಂತ್ವನ ಹೇಳುವವರು, ನಷ್ಟಕ್ಕೆ ಪರಿಹಾರ ಕೊಡುವವರು ಯಾರು? ಇದೆಂಥಾ ವಿಚಿತ್ರ ಸನ್ನಿವೇಶ. ಇದೂವರೆಗೂ ನಡೆದ ಎಲ್ಲಾ ಘೋರ ಘಟನೆಗಳು, ಅನ್ಯಾಯ, ಹಿಂಸೆ, ಸಾವು, ನೋವುಗಳ ಸಮಗ್ರ ಮಾಹಿತಿಯೊಡನೆ ನ್ಯಾಯಾಲಯದಲ್ಲಿ ವಾದ ಮಂಡಿಸಿ, ವಾಸ್ತವತೆಯನ್ನು ನ್ಯಾಯಾಲಯದ ಗಮನಕ್ಕೆ ತಂದು ಆದೇಶ ಪುನರ್ ಪರಿಶೀಲಿಸಲು ಮನವಿ ಸಲ್ಲಿಸಬೇಕಿದೆ. ಇಲ್ಲಾ ಅಮಾಯಕರ ಪ್ರಾಣ ರಕ್ಷಣೆಗಾಗಿ ಬೀದಿಗಳಿದು ಹೋರಾಟ ಮಾಡಬೇಕಿದೆ. ಮಾನವರ ಹಿತ ರಕ್ಷಣೆ ಸಮಿತಿ ಮೂಲಕ ಈ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಸಾಗಿದ್ದು, ನ್ಯಾಯಾಲಯದಲ್ಲಿ ಈ ಬಗ್ಗೆ ನ್ಯಾಯ ಕೋರಿ ಪ್ರಕರಣ ದಾಖಲಿಸುವ ಸಂಭವ ಇದೆ. ಹಾಗಾಗಿ ಆಸಕ್ತರು ಈ ಕೆಳಕಂಡವರಲ್ಲಿ ತಮ್ಮ ಹೆಸರನ್ನು ನೋಙದಾಯಿಸಿ ಹೆಚ್ಚಿನ ಮಾಹಿತಿ ನೀಡ ಬಹುದಾಗಿದೆ. ಧನಂಜಯ, ವಕೀಲರು, ಬೆಂಗಳೂರು, : 9880010776, ತಿಪಟೂರು ಕೃಷ್ಣ, ಪತ್ರಕರ್ತರು : 9448416550 …. *ಬನ್ನೀ, ಅಮಾಯಕ ಜೀವಗಳ ಸಂರಕ್ಷಿಸೋಣ* .. ಈಚೆಗೆ ಒಂದು ಮಗು ಮೇಲೆ ಹತ್ತಾರು ಬೀದಿ ನಾಯಿಗಳು ಧಾಳಿ ಮಾಡಿ, ಕಚ್ಚಿಕೊಂದಿವೆ. ಈ ಘಟನೆ ನೆನೆದರೆ ಮೈ ಜುಂ ಎನ್ನುತ್ತದೆ. ಕಣ್ಣಲ್ಲಿ ನೀರು ಹರಿಯುತ್ತದೆ. ಇನ್ನೂ ಹೆತ್ತವರ ಸ್ಥಿತಿ ಬಗ್ಗೆ ಯೋಚಿಸಿದರೆ ಕರಳು ಕಿತ್ತು ಬಂದ ಅನುಭವವಾಗುತ್ತದೆ. ಇದು ಎಂಥಾ ಕಲ್ಲು ಹೃದಯವೂ ಕರಗುವ ಘಟನೆ. ಈ ಅನ್ಯಾಯ ಘೋರವಾದದ್ದು, ಈ ಬಗ್ಗೆ ಆಳುವ ಸರ್ಕಾರದಿಂದ ಒಂದು ಪ್ರತಿಕ್ರಿಯೆ ಬಂದಿಲ್ಲ. ಏಕೆಂದರೆ ನಿತ್ಯ ಇಂತಹ ನೂರಾರು ಘಟನೆಗಳು, ಹತ್ತಾರು ಸಾವು ನೋವುಗಳು ನಡೆಯುತ್ತಲೇ ಇರುತ್ತವೆ. ಎಲ್ಲದಕ್ಕೂ ಪ್ರತಿಕ್ರಿಯಿಸಲು ಸಾಧ್ಯವೇ ? ಇಂತಹ
ನರಸತ್ತ ರಾಜಕಾರಣಿಗಳು, ನಿರ್ಜೀವ ಸರ್ಕಾರದ ಮೊರೆ ಹೋದರೆ ಯಾವುದೇ ಪ್ರಯೋಜನವಿಲ್ಲ. ಮಾನವೀಯತೆ, ಮನುಷ್ಯತ್ವ ಇಲ್ಲದ ಯಾವುದೇ ದುಷ್ಟ ವ್ಯವಸ್ಥೆಗೆ, ಸರ್ಕಾರಕ್ಕೆ ನನ್ನ ದಿಕ್ಕಾರ.. ದಿಕ್ಕಾರ…ದಿಕ್ಕಾರ.
ನಾವು ಯಾರ ವಿರುದ್ಧವೂ ಅಲ್ಲ, ಯಾರ ಪರವೂ ಅಲ್ಲ. ಅನ್ಯಾಯ ಮತ್ತು ಹಿಂಸೆಯ ವಿರುದ್ಧ.
ಅಧಿಕಾರಿಗಳು, ರಾಜಕಾರಣಿಗಳಿಗೆ ನ್ಯಾಯಕ್ಕಾಗಿ ನಾವು ಬೇಡಬೇಕೇ ? ಅವರಿಗೇಕೆ ನೊಙದವರು ಇಂತಹ ವಿಡಿಯೋ ಕಳುಹಿಸುತ್ತೀರಾ…!? ಮೊದಲಿಗೆ ಅವರು ಮನುಷ್ಯರೇ ಅಲ್ಲ.
ಕಣ್ಣು ಕಾಣದ, ಹೃದಯ ಇಲ್ಲದ, ಬುದ್ದಿಯಿಲ್ಲದ, ನಿಜವಾದ ಕರುಣೆ ಇಲ್ಲದ, ವಿವೇಚನೆ ಇಲ್ಲದ, ಶಕ್ತಿ ಇಲ್ಲದ, ಮಾನವೀಯತೆ ಇಲ್ಲದ ಕೊನೆಗೆ ಮನುಷ್ಯರೇ ಅಲ್ಲದ ರಾಜಕಾರಣಿಗಳು ಮತ್ತು ಈ ಪ್ರಚಾರ ಪ್ರಿಯ ಪ್ರಾಣಿ ದಯಾ ಸಂಘದ ಉದ್ದೇಶ ಪ್ರಶ್ನಾರ್ಹ. ಅವರ ನಿಯಮ, ನೀತಿ, ನಡೆ, ಅಸ್ತಿತ್ವ, ಕರ್ತವ್ಯ, ವಿಸ್ತಾರ, ಸೇವೆ ಅನುಮಾನಾಸ್ಪದ. ವಾಸ್ತವತೆ ಅರ್ಥ ಮಾಡಿಕೊಳ್ಳದ, ಘಟನೆಯ ಗಂಭೀರತೆ ಅರಿಯದ, ಘಟನೆ, ಪುನರ್ವಸತಿ, ಸಮಸ್ಯೆ ಪರಿಹಾರ ಅರ್ಥ ಮಾಡಿಕೊಳ್ಳದೇ ಇಂತಹ ಸಂಘಟನೆಗಳ ಪರ ವಕಾಲತ್ತು ವಹಿಸಿ, ಮಾನವನಿಗೆ ಪ್ರಾಣಿಗಳಿಂದ ಆಗುವ ದುಷ್ಪರಿಣಾಮ ಅರ್ಥ ಮಾಡಿಕೊಳ್ಳದೇ ವ್ಯತಿರಿಕ್ತ ಆದೇಶ ನೀಡುವುದರ ಹಿಂದಿನ ವಾಸ್ತವ ಸತ್ಯವನ್ನು ನ್ಯಾಯಾಲಯ ಮತ್ತು ನ್ಯಾಯಾಧೀಶರ ಗಮನಕ್ಕೆ ತರಬೇಕು. ಈ ಗೋಸುಂಭೆ ಮುಖವಾಡಗಳು, ರಾಜಕಾರಣಿಗಳು, ನಿರ್ವೀರ್ಯ ಅಧಿಕಾರಿಗಳಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಜನ ಎದ್ದೇಳಬೇಕು…ಹೋರಾಟ ಬೇಕು…ಇಂತಹ ವ್ಯವಸ್ಥೆಯ ವಿರುದ್ಧ ನಮ್ಮ ದಿಕ್ಕಾರ..
ಬನ್ನಿ, ಇಂತಹ ದುಷ್ಟ ವ್ಯವಸ್ಥೆಯ ವಿರುದ್ಧ ಹೋರಾಡೋಣ.
ಅದು ಪ್ರಾಣಿಯೇ ಆಗಿರಲಿ, ಮನುಷ್ಯರೇ ಆಗಿರಲಿ. ಅನ್ಯಾಯ, ಅನ್ಯಾಯವೇ…
ಬನ್ನಿ..ಕೈ ಜೋಡಿಸಿ..
ಬರಹ…….
– ತಿಪಟೂರು ಕೃಷ್ಣ ಪತ್ರಕರ್ತ. ಸಾಮಾಜಿಕ ಹೋರಾಟಗಾರ.