ತರೀಕೆರೆ ತಾಲೂಕು ಶರಣ ಸಾಹಿತ್ಯ ಪರಿಷತ್ತು ಘಟಕಕ್ಕೆ ದಾದಾಪೀರ್ ಅವರನ್ನು ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
1 min read
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತರೀಕೆರೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ, ಕಸಾಪ ಮಾಜಿ ಅಧ್ಯಕ್ಷ ಹಾಗೂ ತರೀಕೆರೆ ಪುರಸಭೆಯ ಹಾಲಿ ಸದಸ್ಯರಾದ ದಾದಾಪೀರ್ ಅವರನ್ನು , ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಒಟ್ಟು ಸೇವೆಯನ್ನು ಪರಿಗಣಿಸಿ ಜಿಲ್ಲಾ ಘಟಕವು ನೇಮಕ ಮಾಡಿದೆ.
ಲಿಂಗಭೇದದ ವಿರುದ್ಧ ಸಮರಸಾರಿ, ಸತ್ಕಾಂತಿ ರೂಪಿಸಿ, ಜಾತಿಯ ಸಂಕೋಲೆಯಿಂದ ಸಮಾಜವನ್ನು ಮುಕ್ತಗೊಳಿಸಲು ಹನ್ನೆರಡನೇ ಶತಮಾನದ ಶಿವಶರಣರು ರೂಪಿಸಿದ ಸಮ ಸಮಾಜದ ಆಂದೋಲನ ಇಡೀ ವಿಶ್ವಕ್ಕೆ ಮಾದರಿಯದದ್ದು. ಈ ಆಶಯದೊಂದಿಗೆ ಶರಣ ಸಾಹಿತ್ಯ ಪರಿಷತ್ತು ಅಖಿಲ ಭಾರತ ಮಟ್ಟದಲ್ಲಿ ಶರಣರ ಸಂದೇಶವನ್ನು ಪ್ರಚಾರ ಮತ್ತು ಪ್ರಸಾರ ಮಾಡುವ ಮೂಲಕ ಒಂದು ನಿರಂತರತೆಯೊಂದಿಗೆ, ಜಾತ್ಯಾತೀತವಾದ ಸುಂದರ ಸಮಾನತೆಯ ವಿಶ್ವ ಭ್ರಾತೃತ್ವವದ ವಿಚಾರಧಾರೆಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತಿದೆ.ಈ ನಿಟ್ಟಿನಲ್ಲಿ ಶರಣ ಸಾಹಿತ್ಯದ ಆಶಯಗಳೊಂದಿಗೆ ಮಾನವೀಯ ಮೌಲ್ಯವನ್ನು ಮರು ಸ್ಥಾಪಿಸಿ, ಸಮಾಜದ ಎಲ್ಲರನ್ನೂ ಒಳಗೊಳ್ಳುವ ಕ್ರಿಯಾತ್ಮಕ ಚಟುವಟಿಕೆಯನ್ನು ರೂಪಿಸಲು,ತರೀಕೆರೆ ತಾಲೂಕು ಶರಣ ಸಾಹಿತ್ಯ ಪರಿಷತ್ತು ಘಟಕಕ್ಕೆ ದಾದಾಪೀರ್ ಅವರನ್ನು ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಿ. ಎಂ. ಮಂಜುನಾಥಸ್ವಾಮಿ ತಿಳಿಸಿದ್ದಾರೆ.