ಗೌಡಹಳ್ಳಿಯಲ್ಲಿ ಚಿನ್ನದ ಚೈನ್ ಕಳ್ಳತನ ಮಾಡಿರುವ ಕಳ್ಳನನ್ನು ಹಿಡಿದ ಪೊಲೀಸ್ ಇಲಾಖೆ.
1 min readಗೌಡಹಳ್ಳಿಯಲ್ಲಿ ಚಿನ್ನದ ಚೈನ್ ಕಳ್ಳತನ ಮಾಡಿರುವ ಕಳ್ಳನನ್ನು ಹಿಡಿದ ಪೊಲೀಸ್ ಇಲಾಖೆ.
ಸೋಮವಾರಪೇಟೆ ತಾಲೂಕ್ ಗೌಡಳ್ಳಿಯಲ್ಲಿ ಅಣ್ಣಯ್ಯ ಅವರ 30 ಗ್ರಾಂ ಚಿನ್ನದ ಚೈನನ್ನು ರಾತ್ರಿ ಹೊತ್ತಿನಲ್ಲಿ ಬಂದು ಚೈನ್ ಅನ್ನು ಕಳ್ಳತನ ಮಾಡಿ ಹೋಗಿದ್ದರು. ಆದರೆ ಈಗ ಕಳ್ಳರು ಸಿಕ್ಕಿಕೊಂಡಿದ್ದಾರೆ ಯಾರೆಂದರೆ ಶನಿವಾರಸಂತೆ ಕೆಇಬಿಯಲ್ಲಿ ಲೈನ್ ಮ್ಯಾನ್ ಕೆಲಸ ಮಾಡಿಕೊಂಡಿದ್ದ ಸಂದೀಪ್ ಎಂಬುವವರು ಈ ಕಳ್ಳತನ ಮಾಡಿದ್ದಾರೆ ಎಂಬುದು ಸಾಬೀತಾಗಿರುವುದು ಗೊತ್ತಾಗುತ್ತದೆ ಹಾಗೂ ಈ ವ್ಯಕ್ತಿ ದಿನಾಲು ಇವರ ಮನೆಗೆ ಬಂದು ಹೋಗುತ್ತಿದ್ದರು ಹಾಗಾಗಿ ಇವರ ಮನೆಯಲ್ಲಿ ಯಾರು ಇಲ್ಲ ಎಂದು ಖಾತರಿಪಡಿಸಿಕೊಂಡು ರಾತ್ರಿ ಹೊತ್ತಿನಲ್ಲಿ ಬಂದು ಈ ಕಳ್ಳತನ ಮಾಡಿರೋದು ಬೆಳಕಿಗೆ ಬಂದಿರುತ್ತದೆ ಈ ವ್ಯಕ್ತಿಯನ್ನು ಪೊಲೀಸರು ಈಗಾಗಲೇ ಬಂಧಿಸಿರುತ್ತಾರೆ ಹಾಗೂ ಕೆಇಬಿ ಲೈನ್ ಮ್ಯಾನ್ ಸಂದೀಪ್ ಈ ವ್ಯಕ್ತಿ ಕದ್ದ ಚೇನನ್ನು ಅವರ ಊರಿನಲ್ಲಿರುವ ಫೈನಾನ್ಸ್ ನಲ್ಲಿ ಅಡಾವ್ ಇಟ್ಟಿರುವುದು ಗೊತ್ತಾಗಿರುತ್ತದೆ.
ಈ ಕಳ್ಳತನವನ್ನು ಭೇದಿಸಿದ ಪೋಲಿಸಿ ಇಲಾಖೆಯವರಿಗೆ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇವೆ.
ಸಂದೀಪ್ ಶನಿವಾರಸಂತೆ ಕೆಇಬಿ ಲೈನ್ ಮ್ಯಾನ್ ಇವರು ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿರುತ್ತಾರೆ ಸರ್ಕಾರಿ ಅಧಿಕಾರಿಗಳು ಹೀಗೆ ಮಾಡಿದರೆ ಹೇಗೆ ಜನ ಸರ್ಕಾರಿ ಅಧಿಕಾರಿಗಳನ್ನು ಹೇಗೆ ನಂಬುವುದು