ಕಲ್ಯಾಣಿ (65).ಕೊಲೆಯಾದಳ…..!!!!!?????
1 min read
ಕಲ್ಯಾಣಿ (65).ಕೊಲೆಯಾದಳ…..!!!!!?????
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿಳಗೊಳದ ಕಲ್ಯಾಣಿ 30.06.2024.ರಂದು ಮೂಡಿಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಅನಾಥ ಶವವಾಗಿ ಬಿದ್ದಿದ್ದರು. ಸ್ಥಳಕ್ಕೆ ಆಗಮಿಸಿದ ಮೂಡಿಗೆರೆ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ತಂಡ ಹೆಚ್ಚಿನ ತನಿಖೆ ನಡೆಸಿ ಶವವನ್ನು ಅಂತಿಮ ಸಂಸ್ಕಾರ ಮಾಡಿದರು.ಕಾಫ಼ಿನಾಡು ಸಮಾಜ ಸೇವಾ ಸಂಘದ ಹಸೆನಾರ್ ಬಿಳಗೊಳ.ಅಬ್ದುಲ್ ರಹಿಮಾನೆಂ.ಕೆ…ಆರಿಫ಼್ ಬಣಕಲ್.ರಹೀಮ್ ಅಂಬುಲೆನ್ಸ್..ಅಜೆಯ್ .ಯೊಗೀಶ್.ಬಸವರಾಜ್.ಅಂತಿಮ ಸಂಸ್ಕಾರವನ್ನು ಹಿಂದೂ ವಿದಿ ವಿದಾನದಂತೆ ನಡೆಸಿಕೊಟ್ಟರು…
ಕಲ್ಯಾಣಿ ಯಾರು…..????
ಬಿಳಗೊಳದಲ್ಲಿ ಅನೇಕ ವರ್ಷಗಳಿಂದ ಸಹೋದರ ಈರಪ್ಪನ ಜೊತೆ ಸ್ವಂತ ಮನೆಯಲ್ಲಿ ಕೂಲಿ ಮಾಡುತ್ತಾ ಜೀವನ ನಡೆಸುತಿದ್ದರು.ಇತ್ತಿಚಿನ ವರ್ಷದಲ್ಲಿ ಮನೆಯನ್ನು ಮಾರಿ ಬಿಕ್ಷಾಟನೆಯಲ್ಲಿ ತೊಡಗಿದ್ದರು.
ಸಹೋದರ ಈರಪ್ಪನು ಸಹ ನಾಲ್ಕು ತಿಂಗಳ ಹಿಂದೆ ತೀರಿಕೊಂಡನು.ಮದ್ಯಪಾನದ ದಾಸರಾಗಿ ರಸ್ತೆ ಬದಿಯಲ್ಲೆ ಮಲಗುತಿದ್ದರು.
ಕೋವಿಡ್ ಸಂದರ್ಭದಲ್ಲಿ ಸಮಾಜ ಸೇವಕ ಬಿಳಗೊಳ ಹಸೈನಾರ್ ಒಂದು ವರ್ಷಗಳ ಕಾಲ ಅನ್ನ ಬಟ್ಟೆ ಕೊಟ್ಟು ಸಾಕಿದ್ದರು.20.ದಿನಗಳ ಹಿಂದೆ ಕೂಡ ಹಸೆನಾರ್ ಹತ್ತಿರ ಸಹಾಯ ಪಡೆದುಕೊಂಡಿದ್ದರು.
65.ವರ್ಷದ ಕಲ್ಯಾಣಿ ಕೇಸು ವಾರಸುದಾರರು ಇಲ್ಲದೆ ಇಲ್ಲಿಗೆ ಮುಚ್ಚಿ ಹೊಗುತ್ತಾ.ಪೋಲಿಸರು ಕೊಲೆಗಾರರ ಹೆಡೆಮುರಿ ಕಟ್ಟುತ್ತಾರ ಕಾದು ನೊಡ ಬೇಕಿದೆ.