ಶ್ರೀ ಬಿ.ಎಲ್.ಶಂಕರ್ ಅವರ 25 ವರ್ಷಗಳ ಹಿಂದಿನ ಸುದ್ದಿಯೊಂದು ಇವತ್ತಿನ ಪ್ರಜಾವಾಣಿಯಲ್ಲಿ…
1 min read
ಶ್ರೀ ಬಿ.ಎಲ್.ಶಂಕರ್ ಅವರ 25 ವರ್ಷಗಳ ಹಿಂದಿನ ಸುದ್ದಿಯೊಂದು ಇವತ್ತಿನ ಪ್ರಜಾವಾಣಿಯಲ್ಲಿ…
ಅಪರೂಪಕ್ಕೂ ಆತ್ಮವಿಮರ್ಶೆಯನ್ನು ಮಾಡಿಕೊಳ್ಳದ ಇಂದಿನ ಕಾಲಘಟ್ಟದಲ್ಲಿ ನಿಂತು 25ವರ್ಷದ ಹಿಂದಕ್ಕೆ ತಿರುಗಿ ಒಬ್ಬ ಜೀವನ್ಮುಖಿ ನಾಯಕರಾಗಿದ್ದ ಇಂದಿನ 70 ವರ್ಷದ ಹರೆಯದ ಶ್ರೀ ಬಿ.ಎಲ್.ಶಂಕರ್ ಅವರ 45ನೇ ವಯಸ್ಸನ್ನು ನೋಡುವ ಸೌಭಾಗ್ಯವಿದು.
ಜೀವಪರ ಸಿದ್ಧಾಂತಗಳು, ಜನಪರ ಚಳುವಳಿಗಳೂ ತಬ್ಬಲಿಗಳಾಗುತ್ತಿರುವ ಇಂದಿನ ಆತಂಕದ ಸಂದರ್ಭದಲ್ಲಿ ರಾಜಕೀಯ ವ್ಯವಸ್ಥೆಯ ಹಳೆಯದೆಲ್ಲವೂ ಹೊಸಬರಿಗೆ ತುರ್ತಾಗಿ ಬೇಕಿದೆ.
ಕಾರಣ
ರಾಜಕೀಯದಲ್ಲಿ ಎಡ-ಬಲ ಎಂಬ ಸಿದ್ಧಾಂತಗಳು ಏನೇ ಇರಲಿ; ಹಿಂದೆ ಬಹುತೇಕ ರಾಜಕೀಯ ನಾಯಕರು ಪಕ್ಷಾತೀತವಾಗಿ ಪ್ರಾಮಾಣಿಕರಿದ್ದರು;
ಇಂದು ರಾಜಕಾರಣ ಪಕ್ಷಾತೀತವಾಗಿ “ಭ್ರಷ್ಟರ ರೆಸಾರ್ಟ” ಆಗಿದೆ.
ಎಂಬತ್ತರ ದಶಕದ ಹಳೇ ಸಮಾಜವಾದಿ ನಾಯಕರ ಪೈಕಿ ಈಗ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಇರುವವರು ಸದ್ಯ ಸಿದ್ದರಾಮಯ್ಯ ಬಿ.ಎಲ್.ಶಂಕರ್, ಉಗ್ರಪ್ಪ ಶ್ರೀನಿವಾಸಪುರದ ರಮೇಶ್ ಕುಮಾರ್, ಹಳಿಯಾಳದ ದೇಶಪಾಂಡೆ, ಯಲಬುರ್ಗಾದ ಬಸವರಾಜ ರಾಯರೆಡ್ಡಿ, ಅಳಂದದ ಬಿ.ಆರ್.ಪಾಟೀಲ್.
ಹಳಬರ ಪೈಕಿ ದೇವೇಗೌಡರು, ಸಿಂಧ್ಯಾ, ಇಬ್ರಾಹಿಂ ಶ್ರೀನಿವಾಸ್ ಪ್ರಸಾದ್, ಮುಧೂಳದ ಗೋವಿಂದ ಕಾರಜೋಳ, ಜಯಪ್ರಕಾಶ್ ಹೆಗ್ಡೆ, ಎಂ.ಸಿ.ನಾಣಯ್ಯ ಇತರರು ಬೇರೆಬೇರೆ ಪಕ್ಷದಲ್ಲಿನ ಹಳೆ ಸಂಗಾತಿಗಳು ಅತ್ಯಲ್ಪ ಸಂಖ್ಯೆಗೆ ಇಳಿದಿದೆ.
ರಾಜಕೀಯ ಮತ್ತು ಸರ್ಕಾರ ದುರ್ಬಲರಿಗಾಗಿ ಇರಬೇಕೆನ್ನುವ ತುಡಿತ ಅಂತರಂಗದಲ್ಲಿ ಕಾಡುತ್ತಿದ್ದ ಕಾಲಘಟದಿಂದ ಹಿಡಿದು ಇವತ್ತಿನ ಲಾಭಿ ರಾಜಕಾರಣದ ತನಕ ಉಳಿದವರ ಪೈಕಿ ಬಿ.ಎಲ್.ಶಂಕರ್ ಒಬ್ಬರು ಎನ್ನುವುದೇ ನಮಗೆ ಹೆಮ್ಮೆ..
ಮನಸುಳಿ ಮೋಹನ್ ತರೀಕೆರೆ.