ಸೇಡಂ ತಾಲೂಕಿನ ಖಂಡೆರಾಯನಪಲ್ಲಿ ಮೇನ್ ರೋಡ್ ನ ಬಸ್ ತಂಗುದಾಣ ಕುಸಿದು ಹೋಗುವ ಸ್ಥಿತಿಯಲ್ಲಿದೆ
1 min read
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಖಂಡೆರಾಯನಪಲ್ಲಿ ಮೇನ್ ರೋಡ್ ನ ಬಸ್ ತಂಗುದಾಣ ಕುಸಿದು ಹೋಗುವ ಸ್ಥಿತಿಯಲ್ಲಿದೆ. ಅದು ಅಲ್ಲದೆ ಇಲ್ಲಿ ಯಾವುದೇ ಸ್ವಚತೆ ಇಲ್ಲ. ಸೇಡಂ ಮತ್ತು ಹೈದರಾಬಾದ್ ನ ಮುಖ್ಯರಸ್ತೆಯ ಬದಿಯಲ್ಲೇ ಬಸ್ ತಂಗುದಾಣ ಇದೆ. ಆದರೆ ಇಲ್ಲಿಗೆ ಬರುವ ಜನರಿಗೆ ಆ ಬಸ್ ಸ್ಟೇಶನ್ ಯಾವುದೇ ಉಪಯೋಗವಿಲ್ಲ ಹಾಗೆ ಯಾವುದೇ ಸ್ವಾಚತೆ ಕೂಡ ಇಲ್ಲ. ಇದು ಸುಮಾರು 10ವರ್ಷಗಳಿಂದ ಹೀಗೆ ಇದೆ. ಇದನ್ನು ಯಾವುದೇ ಸರ್ಕಾರವು ಕೂಡ ಕ್ರಮಕ್ಕೆ ತೋಗೊಂಡಿಲ್ಲ. . ಇಂತಹ ಒಂದು ಮುಖ್ಯರಸ್ತೆಯಲ್ಲಿರುವ ಬಸ್ ಸ್ಟೇಶನ್ ಈ ಸ್ಥಿತಿಯಲ್ಲಿ ಇದೆ ಎಂದರೆ ಸಾಮಾನ್ಯ ಗ್ರಾಮಗಳ ಪರಿಸ್ಥಿತಿ ಇನ್ನೂ ಯಾವ ರೀತಿ ಇದ್ದಿರಬೇಕು ಎಂದು ಇಲ್ಲಿನ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. . ಮಳೆ ಬಂದರೂ, ಬಿಸಿಲು ಬಂದರೂ ಜನರು ರೋಡ್ ಮೇಲೆ ನಿಂತುಕೊಂಡು ತಮ್ಮ ಸಮಯ ಬಸ್ ಗಳು ಬರುವರೆಗು ಕಾಯುತ್ತಿದ್ದಾರೆ. . ಸುಮಾರು 10 ವರ್ಷಗಳಿಂದ ಇದೆ ಪರಿಸ್ಥಿತಿ ಇದೆ. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಕ್ರಮಕ್ಕೆ ತೋಗಲ್ಬೇಕಾಗಿ ವಿನಂತಿ ಮಾಡಿಕೊಂಡಿದ್ದಾರೆ ಇಲ್ಲಿನ ಸ್ಥಳೀಯರು. . ವರದಿಗಾರ ವೆಂಕಟಪ್ಪ ಸುಗ್ಗಾಲ್ avin ಟಿವಿ ಸೇಡಂ.