“ನೇಣಿಗೆ ಶರಣಾದ ಅರ್ಚಕರು.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಗೋಣಿಬೀಡು ಹೋಬಳಿಯ,ಹೊಯ್ಸಳಲು ಗ್ರಾಮದ ದೇವಸ್ಥಾನದ ಅರ್ಚಕರು ನೇಣಿಗೆ ಶರಣಾಗಿದ್ದಾರೆ
ಹೊಯ್ಸಳಲು ಶಿವ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಅರ್ಚಕ ವೃತ್ತಿ ಮಾಡುತ್ತಿದ್ದ ಭಾಸ್ಕರ ಶಾಸ್ತ್ರಿ(62 ವರ್ಷ) ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಗೋಣಿಬೀಡು ಸಮೀಪದ ಮಂಡಿಮನೆ ಗ್ರಾಮದಲ್ಲಿ ವಾಸವಾಗಿದ್ದ ಭಾಸ್ಕರ ಶಾಸ್ತ್ರಿ ದಿನಾಂಕ 28/05/2024ರ ಮಂಗಳವಾರ ಮುಂಜಾನೆ ತನ್ನ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ.
ಮನೆಯಲ್ಲಿ ಮಗಳು ಅಳಿಯ ಇದ್ದಾಗಲೇ ಮುಂಜಾನೆ 4 ಗಂಟೆಗೆ ಎದ್ದು ಎಂದಿನಂತೆ ಮನೆಯಲ್ಲಿ ಪೂಜೆ ಮುಗಿಸಿ ನಂತರ ಮನೆಯ ಹೊರಭಾಗದಲ್ಲಿ ನೇಣಿಗೆ ಕೊರಲೊಡ್ಡಿದ್ದಾರೆ.
ಈ ಭಾಗದಲ್ಲಿ ಪ್ರಸಿದ್ಧ ಅರ್ಚಕರಾಗಿದ್ದರು ಮತ್ತು ಪುರೋಹಿತರಾಗಿ ಶಾಸ್ತ್ರವನ್ನು ಸಹ ಹೇಳುತ್ತಿದ್ದರು. ಅವರ ಪತ್ನಿ ನಿಧನರಾಗಿದ್ದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಹಿರಿಯ ಮಗಳ ಮದುವೆಯಾಗಿದ್ದು, ಎರಡನೇ ಮಗಳು ವ್ಯಾಸಂಗ ಮಾಡುತ್ತಿದ್ದಾಳೆ.
ಭಾಸ್ಕರ ಶಾಸ್ತ್ರಿ ತನ್ನ ಪತ್ನಿಯ ಅಗಲಿಕೆಯಿಂದ ಮನನೊಂದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಅವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.