AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇದು ಉಗ್ಗೆಹಳ್ಳಿ ಯ ಊರು ಬಾಗಿಲಿನ ಕೆರೆ.
ಕಾಯಕಲ್ಪ ಎಂದು.

ಮೂಡಿಗೆರೆ ತಾಲೂಕ್ ಉಗ್ಗೆಹಳ್ಳಿಯಲ್ಲಿ ಇರುವ ಕೆರೆ.
ಇದರ ವಿಸ್ತೀರ್ಣ 7 ಎಕರೆ ಆದರೆ ಇದು ಗಿಡಗಂಟೆಗಳು ಬೆಳೆದು ಕಾಡಿನ ರೀತಿ ಆಗಿದೆ. ಇದರ ನೀರು ನೂರಾರು ಎಕರೆ ಭತ್ತ ಬೆಳೆಯುವ ಗದ್ದೆಗಳಿಗೆ ನೀರುಣಿಸುತ್ತದೆ.
ಮೂಡಿಗೆರೆ ತಾಲೂಕಿನಲ್ಲಿ ಇಷ್ಟು ದೊಡ್ಡ ಗದ್ದೆ ಬಯಲು ಈಗ ಉಳಿದಿಲ್ಲ. ಕಳೆದ ವರ್ಷ ಮಳೆ ಕಡಿಮೆಯಾಗಿ ಕೆಲವು ಗದ್ದೆಗಳನ್ನು ಕೊಯ್ಲು ಸಹ ಮಾಡಲಿಲ್ಲ ಹಾಗಾಗಿ ಇದಕ್ಕೆ ಸಂಬಂಧಪಟ್ಟವರು ಇದರ ಬಗ್ಗೆ ಗಮನ ಹರಿಸಿ ಈ ಕೆರೆಯನ್ನು ಸ್ವಚ್ಛಗೊಳಿಸಿ ಕೊಡಬೇಕಾಗಿ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಇದರ ಬಗ್ಗೆ ಗ್ರಾಮ ಸಭೆಯಲ್ಲಿ ಎರಡು ಬಾರಿ ಚರ್ಚಿಸಿ ಗಮನಕ್ಕೆ ತರಲಾಗಿದೆ. ಇದಕ್ಕೆ ಬೇಕಾದ ಹಣವನ್ನು ಇರಿಸಿದ್ದೇವೆ ಎಂದು ಹೇಳಿ ಮೂರು ವರ್ಷಗಳೆ ಕಳೆದಿದೆ. ಇದುವರೆಗೂ ಕೆಲಸ ಪ್ರಾರಂಭವಾಗಿಲ್ಲ.
ದಯವಿಟ್ಟು ಮೂಡಿಗೆರೆ ಶಾಸಕಿಯವರು ಸಂಬಂಧಪಟ್ಟವರು ಗಮನಹರಿಸಬೇಕಾಗಿ ಅಗ್ರಹಿಸಿದರು.
ಶಿವಕುಮಾರ್ ಯು ಆರ್ ಉಗ್ಗೆಹಳ್ಳಿ.
ಇವರೊಂದಿಗೆ ಪುನೀತ್. ಯು. ಜೆ.
ಕುಮಾರ್ ಯುಎನ್.ನಾಗರಾಜು ಯುಕೆ.
ಸಂಪತ್ ಕುಮಾರ್ ಯು ಆರ್.ಸಾರ್ವಜನಿಕರು ಇದ್ದರು.

About Author

Leave a Reply

Your email address will not be published. Required fields are marked *