AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಿಳ್ಕೋಡಿಗೆ ಸಮಾರಂಭ..

ಮೂಡಿಗೆರೆಯ ಗೌರವಾನ್ವಿತ ಪ್ರಧಾನ ಪ್ರಥಮ ದರ್ಜೆಯ ಸಿವಿಲ್ ಮತ್ತು ನ್ಯಾಯಿಕ ದಂಡಾಧಿಕಾರಿಗಳಾದ ಸಚಿನ್. ಡಿ. ರವರು ಎರಡು ವರ್ಷ ಮೂಡಿಗೆರೆಯ ನ್ಯಾಯಾಲಯದಲ್ಲಿ ಕೆಲಸ ನಿರ್ವಹಿಸಿ ಬೆಂಗಳೂರಿಗೆ ವರ್ಗಾವಣೆಯಾಗಿರುತ್ತಾರೆ.
ವರ್ಗಾವಣೆಯಾದ ಪ್ರಯುಕ್ತ ಅವರಿಗೆ ಮೂಡಿಗೆರೆ ವಕೀಲರ ಸಂಘದಿಂದ ಬಿಳ್ಕೋಡುಗೆ ಸಮಾರಂಭ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷರಾದ ಬಿ.ಟಿ.ನಟರಾಜ್ ವಹಿಸಿದ್ದರು, ಉದ್ಘಾಟನೆ ಮಾನ್ಯ ಹಿರಿಯ ಶ್ರೇಣಿಯ ದಿವಾಣಿ ಮತ್ತು ಪ್ರಥಮ ದರ್ಜೆಯ ನ್ಯಾಯಿಕ ದಂಡಧಿಕಾರಗಳಾದ ಜಯಪ್ರಕಾಶ್.ವಿ. ರವರು ನೆರವೆರಿಸಿದರು.,
ಕಾರ್ಯಕ್ರಮದ ನಿರೂಪಣೆಯನ್ನು ವಕೀಲರ ಸಂಘದ ಕಾರ್ಯದರ್ಶಿ ಶ್ರೀ ಕೆ.ಸಿ.ಚಂದ್ರಶೇಖರ್ ರವರು ಮಾಡಿದರು, ಸ್ವಾಗತ ವಕೀಲರ ಸಂಘದ ಖಜಾಂಜಿಯಾದ ಶ್ರೀಮತಿ ಭಾಗ್ಯ ರವರು ಮಾಡಿಡಿದರು.ಪ್ರಾಸ್ತಾವಿಕ ನುಡಿಯನ್ನು ಎಂ.ವಿ.ಜಯರಾಜ್ ಮಾತನಾಡಿದರು,, ವೇದಿಕೆಯಲ್ಲಿ ಹಿರಿಯ ವಕೀಲರಾದ ಕೆ.ಎಂ.ಪ್ರಶಾಂತ್ ,ಬಿ.ಜಗದೀಶ್ ಮತ್ತು ಸರ್ಕಾರಿ ಅಭಿಯೋಜಕರು ಹಾಜರಿದ್ದರು. ಈ ಸಂದರ್ಭದಲ್ಲಿ ಎಲ್ಲಾ ವಕೀಲರ ಸಂಘದ ಹಿರಿಯ ಮತ್ತು ಕಿರಿಯ ವಕೀಲರು ಸಿಬ್ಬಂದಿ ವರ್ಗದವರು ಹಾಜರಿದ್ದರು.

About Author

Leave a Reply

Your email address will not be published. Required fields are marked *