ಕರೆಂಟ್ ನೀರಿಗಾಗಿ ಪ್ರತಿಭಟನೆ..
1 min read
ಕರೆಂಟ್ ನೀರಿಗಾಗಿ ಪ್ರತಿಭಟನೆ...ಮೂಡಿಗೆರೆ ತಾಲೂಕಿನ ಚಂದ್ರಾಪುರ ಗ್ರಾಮದ ನೂರಾರು ಜನರು ಚಿನ್ನಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ.
ಫೋನ್ ಮುಖಾಂತರ ಶಾಸಕಿ ನಯನ ಮೋಟಮ್ಮರವರಿಗೂ ದೂರು ಸಲ್ಲಿಸಿದ ಗ್ರಾಮಸ್ಥರು ಕೂಡಲೇ ಸಮಸ್ಯೆನ ಬಗೆಹರಿಸಿ ಕೊಡಬೇಕೆಂದು ಕೇಳಿಕೊಂಡರು ಇಲ್ಲವಾದಲ್ಲಿ ಮುಡಿಗೆರೆಯ ಮೆಸ್ಕಾಂ ಅಧಿಕಾರಿಯ ವಿರುದ್ಧ ಉಗ್ರವಾದ ಹೋರಾಟ ಮಾಡುವುದಾಗಿ ಹೇಳಿದರು.
ಗ್ರಾಮದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಗ್ರಾಮ ಪಂಚಾಯತಿ ಸದಸ್ಯರಾದ ಸಮಂತ ರವರು ಹೇಳಿದರು. ಸ್ಥಳದಲ್ಲಿ ಮೆಸ್ಕಾಂ ಅಧಿಕಾರಿ ರವಿಕುಮಾರ್ ರವರು ಹಾಜರಿದ್ದರು. ಈ ದಿನ ಗ್ರಾಮಸ್ಥರೆಲ್ಲ ಮತ್ತು ಗ್ರಾಮ ಪಂಚಾಯ್ತಿ ಸದಸ್ಯರಾದ ಶಮಂತ್ ಉಪಾಧ್ಯಕ್ಷರಾದ ನಾಗಮ್ಮರವರು. ಎಲ್ಲರೂ ಸೇರಿ ಮೆಸ್ಕಾಂ ಕಚೇರಿ & ಗ್ರಾಮ .ಪಂಚಾಯ್ತಿ ಗೆ ಭೇಟಿ ಮಾಡಿ ನಮ್ಮ ಸಮಸ್ಯೆಗೆ ಪರಿಹಾರ ಮಾಡಿಕೊಡುವಂತೆ ಒತ್ತಾಯಿಸಿ ಮನವಿ ಜೊತೆ ಎಚ್ಚರಿಕೆ (ಮತ್ತೊಮ್ಮೆ ಎಲ್ಲರೂ ಕಚೇರಿಯ ಮುಂದೆ ಧರಣಿ ಕೂರುವುದಾಗಿ) ಕೊಟ್ಟು ಬಂದಿರುತ್ತೇವೆ. ಹಾಗೆ ಶಾಸಕರಾದ ನಯನ ಮೋಟಮ್ಮರವರು ಮತ್ತು ಉಪ ಸಭಾಪತಿ ಪ್ರಾಣೇಶ್ ರವರು ನಮ್ಮ ಪರವಾಗಿ ಮೆಸ್ಕಾಂ ಅಧಿಕಾರಿ JE Ravi Kumar ಜೊತೆ ಮಾತನಾಡಿ ಊರಿನ ಸಮಸ್ಯೆಯನ್ನು ಆದಷ್ಟು ಬೇಗ ಹರಿಸಿಕೊಡುವುದಾಗಿ ಹೇಳಿರುತ್ತಾರೆ.