ಮೂಡಿಗೆರೆ ಪಟ್ಟಣದಲ್ಲಿ ಮತ್ತು ಪಟ್ಟಣಕ್ಕೆ ಬಂದು ಹೋಗುವ ವಾಹನ ಸವಾರರಿಗೆ ಸಿಹಿ ಸುದ್ದಿ.
1 min read
ಮೂಡಿಗೆರೆ ಪಟ್ಟಣದಲ್ಲಿ ಮತ್ತು ಪಟ್ಟಣಕ್ಕೆ ಬಂದು ಹೋಗುವ ವಾಹನ ಸವಾರರಿಗೆ ಸಿಹಿ ಸುದ್ದಿ.
ಸರ್ಕಾರದ ಆದೇಶವನ್ನು ಪಾಲಿಸದ ವಾಹನ ಸವಾರರಿಗೆ
ಮೂಡಿಗೆರೆ ಠಾಣಾದಿಕಾರಿ ಶ್ರೀನಾಥ್ ರೆಡ್ಡಿ ಬುದ್ದಿಮಾತು ಹೇಳುತಿದ್ದಾರೆ.
ತಪ್ಪಿದವರಿಗೆ ಕಾನೂನು ರೀತಿಯ ಶಿಕ್ಷೆಯಾಗುವಂತೆ ನೋಡಿಕೊಳ್ಳುತಿದ್ದಾರೆ.ಪಟ್ಟಣದಲ್ಲಿ ಜನಪ್ರತಿನಿದಿಗಳ ನಿರ್ಲಕ್ಷ್ಯದಿಂದ ವಾಹನ ನಿಲುಗಡೆಗೆ ಸರಿಯಾದ ಸ್ಥಳವಿರುವುದಿಲ್ಲ.
ಹೃದಯವಿಲ್ಲದ ಸ್ವಯಂಘೊಷಿತ ಶ್ರೀಮಂತರು ಎನಿಸಿಕೊಂಡವರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ದರ್ಪ ತೊರಿಸುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ.ಕಾನೂನು ರೀತಿಯಲ್ಲಿ ಕ್ರಮ ಕೈಕೊಂಡ ಅದಿಕಾರಿಯನ್ನು ಪ್ರವಾಸಿ ಮಂದಿರಕ್ಕೆ ಕರೆಸಿ ದಮ್ಕಿ ಹಾಕಿದ ಪ್ರಕರಣ ಕೂಡ ನಡೆದಿದೆ.
ಮೂಡಿಗೆರೆ ಪಟ್ಟಣ ಹಾಗೂ ಸಂತೆ ನಡೆಯುವ ಜಾಗದಲ್ಲಿ ಸುಗಮ ವಾಹನ ಸಂಚಾರಕ್ಕೆ ಕ್ರಮ ಕೈಗೊಂಡಿದ್ದಾರೆ.ಪಟ್ಟಣದ ಕೆಲವು ರಸ್ತೆಗಳಲ್ಲಿ ತಿಂಗಳುಗಟ್ಟಲೆ ವಾಹನ ನಿಲ್ಲಿಸಿದವರಿಗೆ ತಿಳುವಳಿಕೆ ನೀಡಿ.ತಪ್ಪಿದರೆ ಕಾನೂನು ರೀತಿಯ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.
ಗಾಂಜಾ ಮತ್ತು ಮದ್ಯಪಾನ ಮಾಡಿ ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣ ಮಾಡುವುದು ವೀಲಿಂಗ್ ಮಾಡುವವರಿಗೆ ಸಿಂಹ ಸ್ವಪ್ನ ಅಗಿದ್ದಾರೆ.ವಾಹನ ನಿಲುಗಡೆಗೆ ಕಡಿಮೆ ಜಾಗವಿರುವುದರಿಂದ ವಾಹನ ಸವಾರರು ಮಾಲಿಕರು ಕೂಡ ಸಾಮನ್ಯ ಜ್ನಾನ ಉಪಯೊಗಿಸಿ ಸಾರ್ವಜನಿಕರಿಗೆ ತೊಂದರೆ ಅಗದಂತೆ ನಡೆದು ಕೊಂಡರೆ ಉತ್ತಮ.
ಮೂರು ತಿಂಗಳ ಅವದಿಯಲ್ಲಿ ನೂರಾರು ಮೊಕದ್ದಮೆ ದಾಖಲಿಸಿ.ತಿಳುವಳಿಕೆ ನೀಡಿ ಸಾರ್ವಜನಿಕರು ಹುಬ್ಬೆರಿಸುವಂತೆ ಮಾಡಿದ್ದಾರೆ.ಠಾಣಾದಿಕಾರಿಯ ಇ ಕೆಲಸಕ್ಕೆ ಜನ ಪ್ರತಿನಿದಿಗಳು ಸ್ಪಂದಿಸಿದರೆ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಅಗುವುದು ಎಂಬುದೆ ಸಾರ್ವಜನಿಕರ ಅಭಿಪ್ರಾಯ.