ಕನ್ನಡದ ಕುಳ್ಳ ಇನ್ನಿಲ್ಲ.
1 min read
*ಕನ್ನಡದ ಕುಳ್ಳ ಎಂದೇ ಈ ನಾಡಿನ ಮನೆ ಮಾತಾಗಿದ್ದ ದ್ವಾರಕೀಶ್ ಅವರು ಇನ್ನು ಮುಂದೆ ಒಂದು ಚಿರನೆನಪು ಅಷ್ಟೆ,* 23ರ ವಯಸ್ಸಿನಲ್ಲೇ ನಿರ್ಮಾಪಕರಾಗಿ 54 ಚಿತ್ರ ನಿರ್ಮಾಣ ಮಾಡಿ,22 ನಿರ್ದೇಶನದೊಂದಿಗೆ 300ಕ್ಕೂ ಹೆಚ್ಚು ಕನ್ನಡ ಚಲನಚಿತ್ರದಲ್ಲಿ ನಟಿಸಿದ ದ್ವಾರಕೀಶ್ ಅವರನ್ನು ಹೊರಗಿಟ್ಟು ಕನ್ನಡ ಚಲನಚಿತ್ರ ರಂಗವನ್ನು ನೋಡಲು ಸಾಧ್ಯವೇ ಇಲ್ಲ. ಒಂದು ಕಾಲದಲ್ಲಿ ದ್ವಾರಕೀಶ್ ಅವರು ಮುಟ್ಟಿದ್ದೆಲ್ಲವು ಚಿನ್ನವಾದ ಕಾಲವಿತ್ತು, ನಂತರ ಅವರು ಮುಟ್ಟಿದ್ದೆಲ್ಲವನ್ನು ಕಳೆದುಕೊಂಡ ಕಾಲವು ಕೊಡ ಇತ್ತು.
ಸಿನಿಮಾಕ್ಕಾಗಿ ಬದುಕಿ, ಸಿನಿಮಾಕ್ಕಾಗಿ ಕಳೆದುಕೊಂಡು, ಮತ್ತೆ ಸಿನಿಮಾದಲ್ಲೇ ಪಡೆದುಕೊಂಡ ದ್ವಾರಕೀಶ್ ಅವರು ಪಶ್ಚಾತಾಪದ ಅಗ್ನಿ ಕುಂಡದಲ್ಲಿ ಬೆಂದವರು. ಕನ್ನಡದ ಹೆಗ್ಗಳಿಕೆಯ ಈ ಕುಳ್ಳ ಕನ್ನಡ ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕಟ್ಟಿದ ಧೀಮಂತ ನಟ – ನಿರ್ಮಾಪಕ ನಿರ್ದೇಶಕ ಎನ್ನಬಹುದು.
ಯಶಸ್ಸಿನ ಮೆಟ್ಟಲುಗಳನ್ನು ಏರಿದಂತೆಯೇ ಅವರು ಅನುಭವಿಸಿದ ಆರ್ಥಿಕ ನಷ್ಟ ಕೂಡ ಕನ್ನಡ ಚಲನಚಿತ್ರರಂಗದ ಚರಿತ್ರೆಯಲ್ಲಿ ಮರೆಯುವಂತಿಲ್ಲ,ಅದೆಷ್ಟೇ ವೈಯಕ್ತಿಕ ಸಂಕಟಗಳನ್ನು ಅನುಭವಿಸುತ್ತಿದ್ದರೂ ಕೂಡ ಕನ್ನಡ ಚಲನಚಿತ್ರರಂಗವನ್ನು ಸುಧೀರ್ಘವಾಗಿ ನಕ್ಕು ನಲಿಸಿ,82 ವರ್ಷಗಳ ಕಾಲ ಬದುಕಿ ,ಇಂದು ಇಹ ಬದುಕಿಗೆ ವಿದಾಯ ಹೇಳಿ ಹೊರಟು ಹೋಗಿರುವ ದ್ವಾರಕೀಶ್ ಅವರ ಅಗಲಿಕೆ ಚಲನಚಿತ್ರನಕ್ಕೆ ಮಾತ್ರವಲ್ಲ ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ.ಹೋಗಿ ಬನ್ನಿ ಸಾರ್..*ನಿಮಗಿದೊ ಅಂತಿಮ ನಮನಗಳು*.🙏🌹🙏.