ವಾಯ್ಸ್ ಸಂಸ್ಥೆ ಮತ್ತು ಅರಿವು ಬಾಳಿನ ಉಳಿವು ಸಮಾನ ಮನಸ್ಕ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮೂಡಿಗೆರೆಯ ಲ್ಯಾಂಪ್ ಸೊಸೈಟಿ ಸಭಾಂಗಣದಲ್ಲಿ ಮಲೆನಾಡೆ ಅಂದ ನಮ್ಮೂರೇ ಚೆಂದ ಆಲ್ಬಮ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಮತ್ತು ಮಕ್ಕಳ ಬೇಸಿಗೆ ಶಿಬಿರವನ್ನು ದೀಪ ಹಚ್ಚಿ ಉದ್ಘಾಟನೆ
1 min read
ವಾಯ್ಸ್ ಸಂಸ್ಥೆ ಮತ್ತು ಅರಿವು ಬಾಳಿನ ಉಳಿವು ಸಮಾನ ಮನಸ್ಕ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮೂಡಿಗೆರೆಯ ಲ್ಯಾಂಪ್ ಸೊಸೈಟಿ ಸಭಾಂಗಣದಲ್ಲಿ ಮಲೆನಾಡೆ ಅಂದ ನಮ್ಮೂರೇ ಚೆಂದ ಆಲ್ಬಮ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಮತ್ತು ಮಕ್ಕಳ ಬೇಸಿಗೆ ಶಿಬಿರವನ್ನು ದೀಪ ಹಚ್ಚಿ ಉದ್ಘಾಟನೆ. ಮಾಡುವ ಮೂಲಕ ಪ್ರಾರಂಭ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಸಂಭ್ರಮ ಅಧ್ಯಕ್ಷರಾದ ಎಂಎಸ್ ನಾಗರಾಜ್ ಮಾತನಾಡಿ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಸ್ಥಳಗಳ ಬಗ್ಗೆ ಹಾಗೂ ರಮಣೀಯವಾದ ದೃಶ್ಯಗಳನ್ನು ಸೆರೆಹಿಡಿದು ನವೀನ್ ಆನೆದಿಬ್ಬ ರವರ ಸಾಹಿತ್ಯ ಮತ್ತು ನಿರ್ದೇಶನದಲ್ಲಿ ಮಲೆನಾಡೆ ಅಂದ ನಮ್ಮೂರೇ ಚೆಂದ ಆಲ್ಬಮ್ ಸಾಂಗ್ ಬಹಳ ಸೊಗಸಾಗಿ ಮೂಡಿ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಮಗ್ಗಲ ಮಕ್ಕಿ ಗಣೇಶ್ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕಿರು ಚಿತ್ರಗಳಲ್ಲಿ ನಟಿಸುವ ಅವಕಾಶವನ್ನು ಮೊದಲು ನೀಡಿದ್ದು ನಮ್ಮವರೇ ಆದ ನವೀನ್ ಆನೆದಿಬ್ಬ ರವರು ಎಂದರು ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಮನೋರಂಜನ ಚಟುವಟಿಕೆಗಳು ಜನಪದ ಆಟಗಳು ಚಿತ್ರಕಲೆ ನೃತ್ಯ ಗಾಯನ ಅಭಿನಯ ಯೋಗ ವಿವಿಧ ರೀತಿಯ ಅಡುಗೆ ತರಬೇತಿಗಳು ಹಾಗೂ ಕಸದಿಂದ ರಸ ಆರೋಗ್ಯ ಸಂರಕ್ಷಣೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ರಂಗ ಸಜ್ಜಿಗೆ ನಿರೂಪಣೆ, ಜೀವನ ಕೌಶಲ್ಯ ಭಾಷಣ ಕಲೆ ವ್ಯಕ್ತಿತ್ವ ವಿಕಸನ ತರಬೇತಿ ನಾಯಕತ್ವ ತರಬೇತಿ ಹಾಗೂ ಇತರ ಚಟುವಟಿಕೆಗಳ ಬಗ್ಗೆ ನುರಿತ ತರಬೇತುದಾರರಿಂದ ಮಕ್ಕಳಿಗೆ ತರಬೇತಿ ನೀಡುವುದು ಸಂತಸದ ವಿಷಯ ಎಂದರು.
ಹಾಗೆಯೇ ಒಂದು ತಿಂಗಳ ಕಾಲ ನಡೆಯುವ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳು ಚಟುವಟಿಕೆಗಳ ಮೂಲಕ ಕಲಿಯುವುದರೊಂದಿಗೆ ಹೆಚ್ಚಿನ ಜ್ಞಾನಾರ್ಜನೆಗೆ ಸಹಾಯವಾಗುತ್ತದೆ ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ನಿರ್ದೇಶಕರಾದ ನವೀನ್ ಅನೆದಿಬ್ಬ ಬಕ್ಕಿ ಮಂಜು ಬಕ್ಕಿರವಿಂದ್ರ.ಉಷಾ. ಶೋಭಾ.
ಗೀತಾ. ಮನಮೋಹನ್ ವಿಜಯಲಕ್ಷ್ಮಿ .
ಸುನೀತ. ಕಿಶೋರ್. ಆದಿ ಕೃಷ್ನಪ್ಪ .ಸಂಗೀತ ನಿರ್ದೇಶಕರಾದ ಗ್ರಾಮ್ ಸ್ಟೇನ್ ಮತ್ತು ಇತರರು ಹಾಜರಿದ್ದರು