ಹಾಲೂರು ಸುದೀರ್ ಕೆಡಿಪಿ ಸಮಿತಿಗೆ ಅಯ್ಕೆ….
1 min read
ಸುಧೀರ್ ಹಾಲೂರು ಕೆ ಡಿ ಪಿ ಸಮಿತಿಗೆ ಆಯ್ಕೆ
ಮೂಡಿಗೆರೆ ತಾಲ್ಲೂಕಿನ ಹಾಲೂರು ಗ್ರಾಮದ ಸುಧೀರ್ ರವರು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ 20ಅಂಶಗಳ ಕಾರ್ಯಕ್ರಮ ಸೇರಿದಂತೆ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಚಿಕ್ಕಮಗಳೂರು ಜಿಲ್ಲಾ ಮಟ್ಟದ ತ್ರೈ ಮಾಸಿಕ ಪರಿಶೀಲನಾ ಕೆ ಡಿ ಪಿ ಸಮಿತಿಗೆ ಸದಸ್ಯರಾಗಿ ನಾಮನಿರ್ದೇಶನಗೊಳಿಸಲಾಗಿದೆ.
ಸುಧೀರ್ ರವರು ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 20ವರ್ಷಗಳಿಂದಲೂ ಸಕ್ರಿಯರಾಗಿದ್ದು ಎಸ್ ಸಿ ಮೋರ್ಚಾದ ತಾಲ್ಲೂಕು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಮೂಡಿಗೆರೆ ಆಟೋ ಚಾಲಕರ ಮಾಲೀಕರ ಸಂಘದ ಅಧ್ಯಕ್ಷರು ಆಗಿದ್ದರು,
ಕೆ ಡಿ ಪಿ ಸದಸ್ಯರಾಗಿ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಕುಟುಂಬದವರು, ಸ್ನೇಹಿತರು, ಸಂತಸ ವ್ಯಕ್ತ ಪಡಿಸಿದ್ದಾರೆ.