ವರ್ತಮಾನದ ರಂಗಭೂಮಿ ಕುರಿತು ಬಹುಭಾಷಾ ನಟ ಪ್ರಕಾಶ್ ರಾಜ್ ಜೊತೆ ಚಿಕ್ಕಮಗಳೂರಿನಲ್ಲಿ ಮುಖಾ-ಮುಖಿ* ಸಿನಿಮಾ
1 min read
*ವರ್ತಮಾನದ ರಂಗಭೂಮಿ ಕುರಿತು ಬಹುಭಾಷಾ ನಟ ಪ್ರಕಾಶ್ ರಾಜ್ ಜೊತೆ ಚಿಕ್ಕಮಗಳೂರಿನಲ್ಲಿ ಮುಖಾ-ಮುಖಿ* ಸಿನಿಮಾ ಎಂಬುದು ಅತ್ಯಂತ ಪ್ರಭಾವಿ ಮಾಧ್ಯಮವಾದರೂ ಕೂಡ ಅ ಸಿನಿಮಾ ಎಂಬುದು ಸರಿ ತಪ್ಪುಗಳ ಬಗ್ಗೆ ಮಾತನಾಡುತ್ತದೆ.ಆದರೆ ರಂಗಭೂಮಿ ಎಂಬುದು ಎರಡು *ಸರಿ* ಗಳ ಮಧ್ಯೆ ಒಂದು ಸಂಘರ್ಷ ಏರ್ಪಡಿಸಿ ಹೊಸ ಅರಿವಿನೊಂದಿಗೆ ನೇರವಾಗಿ ಜನರೊಂದಿಗೆ ಮುಖಾಮುಖಿ ಸಂವಾದ ನಡೆಸುತ್ತದೆ.ಈ ಕಾರಣಕ್ಕಾಗಿ ಇತರೆ ಎಲ್ಲಾ ಮಾಧ್ಯಮಗಳಿಗಿಂತ ರಂಗಭೂಮಿ ಹೆಚ್ಚು ಜವಾಬ್ದಾರಿಯುತವಾದ ಮಾಧ್ಯಮವಾಗಿದೆ. ಜವಾಬ್ದಾರಿ ಇರುವ ಮಾಧ್ಯಮ ಎಂಬ ಕಾರಣಕ್ಕಾಗಿ ಬುಡ್ಡಿ ದೀಪದೊಂದಿಗೆ ನಮ್ಮ ಜನಪದರು ರಂಗಭೂಮಿಯತ್ತ ಹೆಜ್ಜೆ ಹಾಕಿದ್ದನ್ನು ನೋಡಬಹುದು.ರಂಗಭೂಮಿ ಎಂಬುದು ಯಾರನ್ನು ತನ್ನತ್ತ ಕೈಬೀಸಿ ಕರೆಯುವುದಿಲ್ಲ, ನಾವೇ ರಂಗಭೂಮಿಯತ್ತ ಸಾಗಬೇಕು. ರಂಗಭೂಮಿಯತ್ತ ಹೆಜ್ಜೆ ಹಾಕಿ ಹೋಗುವಾಗ ದನಗಳು ನುಗ್ಗಿ ಹೋದಂತೆ ಹೋಗುವುದಲ್ಲ. ಒಂದು ಎಚ್ಚರಿಕೆಯೊಂದಿಗೆ ರಂಗ ಪ್ರವೇಶ ಮಾಡಬೇಕು. ಸೋಮಾರಿಗಳಿಗೆ ಇಲ್ಲಿ ಏನು ದಕ್ಕುವುದಿಲ್ಲ, ದಕ್ಕ ಬೇಕಾದರೆ ಆಳವಾಗಿ ಅಗೇಯಬೇಕು, ಈ ರಂಗಭೂಮಿಯನ್ನು ಅಗೆಯುತ್ತ ಅಗೆಯುತ್ತಾ ಹೋದರೆ ಏನೆಲ್ಲವನ್ನು ಪಡೆಯಲು ಸಾಧ್ಯವಿದೆ. ವರ್ತಮಾನದ ಈ ದಿನಗಳಲ್ಲಿ ರಂಗಭೂಮಿಗೆ ಸಂಬಂಧಪಟ್ಟಂತೆ ಬಹು ಮುಖ್ಯವಾಗಿ, ಹೆಚ್ಚಾಗಿ, ಆಳವಾಗಿ, ಸುಧೀರ್ಘವಾಗಿ ಚರ್ಚೆ ಆಗುತ್ತಿರುವುದು ಹಗಲು ಮರೆಯಾಗಿ ಕತ್ತಲು ಬಂದಮೇಲೆ ಮತ್ತು ಟಿವಿ ಸಂದರ್ಶನದ ಮೂಲಕ. ವಸ್ತು ಸ್ಥಿತಿ ಹೀಗಿದ್ದರೂ ಕೂಡ ಚಿಂತನಶೀಲರಾದಂತೆ ಪ್ರಯೋಗಶೀಲರಾಗುತ್ತಿರುವುದು ಬಹಳ ಕಡಿಮೆ.ರಂಗಭೂಮಿಯ ನಿಜವಾದ ಕೆಲಸ ಆಗಬೇಕಾಗಿರುವುದು, ಸಂದರ್ಶನ -ಸಂವಾದ ಮಾಡಬೇಕಾಗಿರುವುದು, ಮುಖ್ಯವಾಗಿ ಬುಡ್ಡಿದೀಪದ ಕೆಳಗೆ ರಂಗಭೂಮಿಯನ್ನು ಹುಡುಕಿ ಅದರತ್ತ ಸಾಗಿದ ನಮ್ಮ ಜನಪದರ ಮನೆ ಮನಗಳ ಯುವ ಸಮುದಾಯದ ಮುಂದೆ ಎಂಬ ಚಿಂತನೆಗಳೊಂದಿಗೆ ಸಂವಾದ ನಡೆಸಲಾಯಿತು.ಸಂವಾದವನ್ನು ಸಮನ್ವಯಗೊಳಿಸಿದವರು ರಂಗಭೂಮಿ ಮತ್ತು ಚಲನಚಿತ್ರದ ಮೇರು ನಟ ಪ್ರಕಾಶ್ ರಾಜ್. ಸಂವಾದದಲ್ಲಿ ಪಾಲ್ಗೊಂಡವರು ಲೇಖಕ ರವೀಶ್ ಕ್ಯಾತನಬೀಡು. ರಂಗಕರ್ಮಿ ಡಿ. ಎಂ. ಮಂಜುನಾಥಸ್ವಾಮಿ. ನೃತ್ಯಗಾರ್ತಿ ಜ್ಯೋತಿ ಪ್ರಕಾಶ್. ವನ್ಯಜೀವಿ ಛಾಯಾಚಿತ್ರಗ್ರಾಹಕ ಹಿರೇಗೌಜ ಶಿವಕುಮಾರ್. ನೀನಾಸಂ ಕಲಾವಿದ ಸಂತೋಷ್. ನಿರ್ದೇಶಕ ಶಿವಮೊಗ್ಗದ ವೆಂಕಟೇಶ್.
D.M. Manjunathaswamy. Kjvs News Lain,,,,,,,,✒️ Chikkamagaluru