AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‘ಸಂವಿಧಾನ ಆಶಯಗಳು ಜಾರಿಯಾಗಲು ಬಿ ಎಸ್ ಪಿ ಬೆಂಬಲಿಸಿ’
ಇಂದು ಮೂಡಿಗೆರೆಯಲ್ಲಿ ಪತ್ರಿಕಾ ಗೋಷ್ಠಿಯ ಉದ್ದೇಸಿಸಿ ಮಾತನಾಡಿದ ಬಿ ಎಸ್ ಪಿ ಯ ಉಡುಪಿ -ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಕೆ ಟಿ ರಾಧಾಕೃಷ್ಣ ರವರು – ಸುಮಾರು 40ವರ್ಷಗಳ ಹೋರಾಟ ನನ್ನ ಸೇವೆ ಎಲ್ಲ ಜಾತಿ ಜನಾಂಗಕ್ಕೂ ಸಿಕ್ಕಿದೆ ಯಾವುದೇ ಅಧಿಕಾರ ಇಲ್ಲದೆ ನನ್ನ ವೈಯಕ್ತಿಕ ಶಕ್ತಿ ಮೇಲೆ ನ್ಯಾಯ ಕೊಡಿಸಿದ್ದೇನೆ ಹಾಗಾಗಿ ಎಲ್ಲ ಮತದಾರರು ನನ್ನನ್ನು ಮತ ಕೊಡುವ ಮೂಲಕ ಬೆಂಬಲಿಸುತ್ತಾರೆ ಅನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಸಂವಿಧಾನದ ಆಶಯಗಳಿಗೆ ಬದ್ಧನಾಗಿ ಕೆಲಸ ನಿರ್ವಹಿಸುತ್ತೇನೆ ಅದರಲ್ಲಿ ಇರುವ ಆಶಯಗಳನ್ನು ಜಾರಿಗೊಳಿಸಲು ನನ್ನನ್ನು ಬೆಂಬಲಿಸಿ ಬಿ ಎಸ್ ಪಿ ಗೆ ಮತ ನೀಡಬೇಕು ಎಂದರು.
ಇದೆ ಸಂದರ್ಭದಲ್ಲಿ ಜಾಕೀರ್ ಹುಸೇನ್ ಮಾತನಾಡಿ – ಈ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಯ ಯಾವ ಗ್ಯಾರಂಟಿ ಕೂಡ ನಡೆಯಲ್ಲ ಮತದಾರ ಪ್ರಜ್ಞಾವಂತ ರಾಗಿದ್ದಾರೆ ಇವರಿಗೆ ಪಾಠ ಕಳಿಸುತ್ತಾರೆ.
ಅಲ್ಪ ಸಂಖ್ಯಾತರು ನಾವು ಜನಸಂಖ್ಯೆಯ ಎರಡನೇ ಸ್ಥಾನದಲ್ಲಿ ಇದ್ದರು ಕೂಡ ರಾಜ್ಯ ಸರ್ಕಾರ ಅನುದಾನ ಕೊಡುವಲ್ಲಿ ದ್ರೋಹ ಮಾಡಿದೆ ಇದಕ್ಕೆ ಅಲ್ಪ ಸಂಖ್ಯಾತರು ಈ ಚುನಾವಣೆಯಲ್ಲಿ ಎಚ್ಚರಿಕೆಯಿಂದ ಮತದಾನ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಲೋಕಸಭಾ ಕ್ಷೇತ್ರ ಸಂಯೋಜಕರಾದ ಗಂಗಾಧರ್, ಜಿಲ್ಲಾ ಉಪಾಧ್ಯಕ್ಷರಾದ ಮಂಜುಳಾ, ಜಿಲ್ಲಾ ಕಾರ್ಯದರ್ಶಿ ಬಕ್ಕಿ ಮಂಜುನಾಥ್,ಹಾಂದಿ ಬಾಬಣ್ಣ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಲೋಕವಳ್ಳಿ ರಮೇಶ್, ರತ್ನಮ್ಮ,ಹೊನ್ನೇಶ್ ಬೆಟ್ಟಗೆರೆ,ಹಳಿಕೆ ದೊಡ್ಡಯ್ಯ ಇದ್ದರು

About Author

Leave a Reply

Your email address will not be published. Required fields are marked *