“ಸಮಾಜ ಸೇವಕರಿಗೆ ರಾಜಧಾನಿಯಲ್ಲಿ ಸನ್ಮಾನ..”
1 min read
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಮಂದಿರ ಚಾಮರಾಜಪೇಟೆಯಲ್ಲಿ ನಡೆದಾಡುವ ದೇವರ ಟ್ರಸ್ಟ್ (ರಿ),ವತಿಯಿಂದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 5ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಸಲಾಯಿತು.
ಕಾಫಿನಾಡು ಸಮಾಜ ಸೇವಕರಾದ ಇವರುಗಳು ಅದೆಷ್ಟೋ ಬಡವರಿಗೆ ಹಾಗೂ ಆಶಕ್ತರಿಗೆ,ನಿರ್ಗತಿಕರಿಗೆ ಸಹಾಯ,ಕೊಳೆತ ಸ್ಥಿತಿಯಲ್ಲಿದ್ದ ಅದೆಷ್ಟೋ ಅನಾಥ ಶವಗಳಲ್ಲದೇ ಕೊಲೆ ಮಾಡಿ ಎಲ್ಲೋ ಕಂದಕಗಳಿಗೆ ಬಿಸಾಕಿ ಹೋದಂತಹ ಶವಗಳನ್ನು ಹಸೆನಾರ್ ಬಿಳಗುಳ ಹಾಗೂ ಅಬ್ದುಲ್ ರೆಹಮಾನ್ ಅವರುಗಳು ಸೇರಿ ಹುಡುಕಿ ಕಂಡುಹಿಡಿದು ಮೇಲೆತ್ತಿ ಪೋಲಿಸರಿಗೆ ಒಪ್ಪಿಸುವಂತಹ ಕೆಲಸಗಳನ್ನು ಮಾಡಿರುವ ವ್ಯಕ್ತಿಗಳಾಗಿದ್ದು,ಇವರುಗಳಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಮಂಜುನಾಥ್,ಗೌರವಾಧ್ಯಕ್ಷರಾದ ಶ್ರೀಮತಿ ಗೌರಮ್ಮ,ಡಾ.ಆರೂಢ ಸ್ವಾಮೀಜಿ,ಶಿವಮೂರ್ತಿ ಚರಮೂರ್ತಿ,ಬಸವರಾಜ ಮಹಾಸ್ವಾಮಿಗಳು,ಬಾಪೂಜಿ ಶ್ರೀಗಳು,ಶ್ರೀ ಶಿವಬಸವ ಸ್ವಾಮಿಗಳು,ಶ್ರೀ ತಪೋನಿಧಿ ಮುತ್ತೇಶ್ವರ ಸ್ವಾಮಿ,ಕಲಾ ಸಾಮ್ರಾಟ್ ಎಂದೇ ಖ್ಯಾತರಾದ ನಟ ಹಾಗೂ ನಿರ್ದೇಶಕ ಶ್ರೀ ಎಸ್.ನಾರಾಯಣ್ ವೇದಿಕೆಯಲ್ಲಿ ಆಸೀನರಾಗಿದ್ದರು.
ಈ ಸಂದರ್ಭದಲ್ಲಿ ಎಸ್.ನಾರಾಯಣ್ ಅವರಿಗೆ ಸಿರಿವಂತ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಹಾಗೆಯೇ ನಡೆದಾಡುವ ದೇವರ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಂಜುನಾಥ್ ಅವರು ಆಟೋ ಓಡಿಸಿಕೊಂಡಿದ್ದರೂ ಕೂಡ ಪ್ರತಿ ದಿನ ಹಲವಾರು ನಿರ್ಗತಿಕ ಬೀದಿ ಬದಿಯ ನಿವಾಸಿಗಳಿಗೆ ನಿರಂತರವಾಗಿ ತಮ್ಮ ತಾಯಿಯ ಸಹಕಾರದೊಂದಿಗೆ ಅನ್ನ ದಾಸೋಹ ಮಾಡುತ್ತಿರುವುದು ಜೊತೆಗೆ ಡಾ.ವಿಷ್ಣುವರ್ಧನ್ ಅಭಿಮಾನಿಯಾದ ಇವರು ವಿಷ್ಣುವರ್ಧನ್ ಅವರ ಪ್ರತಿಮೆಗಳನ್ನು ಸ್ವಚ್ಚಗೊಳಿಸಿ,ಹಾರ ಹಾಕುವ ಅಭ್ಯಾಸವಿರುವುದನ್ನು ಪ್ರಶಂಸಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿನ ಪ್ರಶಸ್ತಿ ಪುರಸ್ಕೃತರಾದ ಮೂಡಿಗೆರೆ ತಾಲ್ಲೂಕಿನ ಲೋಕವಳ್ಳಿ ಶಾಲೆಯ ಶಿಕ್ಷಕರಾದ ಶ್ರೀ ಬಿ.ಆರ್.ನವೀನ್,ಬೆಂಗಳೂರಿನ ಕನ್ನಡ ಭಾಷಾ ಸುಧಾರಕರು ಮತ್ತು ಸಾಹಿತಿಗಳಾದ ಶ್ರೀ ಶಿವಣ್ಣ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಗಣ್ಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನೂರಾರು ಜನ ಸೇರಿದ್ದರು.ಸಮಾಜ ಸೇವೆ ಹಾಗೂ ಇತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಎಂಟಕ್ಕೂ ಹೆಚ್ಚು ಸ್ನೇಹಿತರನ್ನು ಶ್ರೀಯುತ ಮಂಜುನಾಥ್ ರವರ ನಡೆದಾಡುವ ದೇವರ ಟ್ರಸ್ಟ್(ರಿ),ಬೆಂಗಳೂರು ವತಿಯಿಂದ ಈಗಾಗಲೇ ಗುರುತಿಸಿ ಸನ್ಮಾನಿಸಲಾಗಿದೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.