“ಮಹಾ ಗಣಪತಿಗೆ ಹರಕೆ ತೀರಿಸಿದ ಮೂಡಿಗೆರೆ ಶಾಸಕಿ ನಯನ ಮೋಟಮ್ಮ.”
1 min read
ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬಂದರೆ ದಕ್ಷಿಣ ಕನ್ನಡ ಜಿಲ್ಲೆಯ,ಬೆಳ್ತಂಗಡಿ ತಾಲ್ಲೂಕಿನ,ಸೌತಡ್ಕದಲ್ಲಿರುವ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಬಂದು ಹರಕೆ ತೀರಿಸುತ್ತೇನೆ ಎಂದಿದ್ದ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ದಿನಾಂಕ 11/01/2024ರ ಗುರುವಾರದಂದು ಹರಕೆ ಸಲ್ಲಿಸಿದ್ದಾರೆ.
ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಅವರು ಚುನಾವಣೆಗೂ ಮುನ್ನ ಎಲೆಕ್ಷನ್ನಲ್ಲಿ ಗೆದ್ದರೆ ಗಣಪತಿ ದೇವರಿಗೆ ಗಂಟೆ ನೀಡುವುದಾಗಿ ಹರಕೆ ಹೊತ್ತಿದ್ದರು. ಅದರಂತೆ ಗಣಪತಿ ದೇವರ ಸನ್ನಿಧಾನಕ್ಕೆ ಬಂದು ತಮ್ಮ ಹರಕೆ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕಿ ಇಲ್ಲಿನ ಪರಿಸರ ಹಿತವಾಗಿದೆ,ಇತಿಹಾಸ ಪ್ರಸಿದ್ಧ ಸೌತಡ್ಕ ಶ್ರೀ ಮಹಾಗಣಪತಿ ಅಭಯದಿಂದ ಗೆಲ್ಲುವಂತಾಗಿದೆ.ನನ್ನ ಕ್ಷೇತ್ರದಲ್ಲಿ ಜಯಗಳಿಸಿದರೆ ಪೂಜೆ ಹಾಗೂ ಗಂಟೆ ನೀಡುವುದಾಗಿ ಹರಕೆ ಹೇಳಿಕೊಂಡಿದ್ದೆವು.ಅದರಂತೆ ನಮ್ಮೆಲ್ಲಾ ಮುಖಂಡರುಗಳ ಜೊತೆ ಇಲ್ಲಿ ಬಂದು ಹರಕೆಯನ್ನು ತೀರಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಮೂಡಿಗೆರೆ ಕಾಂಗ್ರೆಸ್ ಮುಖಂಡರುಗಳಾದ ಮಗ್ಗಲಮಕ್ಕಿ ರಘು,ಶಂಕರ್ ಹಾಜರಿದ್ದರು.
✍🏻ಬರಹ ಕೃಪೆ.✍🏻
ಸಿದ್ದಿಕ್ ಚಕ್ಕಮಕ್ಕಿ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.