AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ದಾರದಹಳ್ಳಿ ಗ್ರಾಮದ,ಮಗ್ಗಲಮಕ್ಕಿಯಲ್ಲಿ ದಿನಾಂಕ 12/01/2024ರ ಶುಕ್ರವಾರದಂದು ಮಂತ್ರಾಕ್ಷತೆ ವಿತರಣೆ ಮಾಡಿ,ದಿನಾಂಕ 22/01/2024ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನೆಯ ಮಹತ್ವವನ್ನು ವಿವರಿಸಲಾಯಿತು.ಈ ಸಂದರ್ಭದಲ್ಲಿ ಅವಿನ್ ಟಿವಿಯ ಸ್ಥಾನಿಕ ಸಂಪಾದಕರಾದ ಮಗ್ಗಲಮಕ್ಕಿಗಣೇಶ್ ಅವರ ಮನೆಗೆ ಬಂದ ರಾಮ ಭಕ್ತರು ಅ ದಿನ ಮಾಡಬೇಕಾದ ಮಹತ್ವವನ್ನು ತಿಳಿಸಿದರು.

ರಾಮ ಭಕ್ತರು ತಂದಿದ್ದ ಮಂತ್ರಾಕ್ಷತೆಯನ್ನು ಮಗ್ಗಲಮಕ್ಕಿಗಣೇಶ್ ಅವರ ಪತ್ನಿ ಮಮತ ಗಣೇಶ್ ಶ್ರದ್ಧಾ ಭಕ್ತಿಯಿಂದ ಸ್ವಿಕರಿಸಿದರು.

ಮಂತ್ರಾಕ್ಷತೆ ವಿತರಿಸುವ ಸಂದರ್ಭದಲ್ಲಿ ರಾಮ ಭಕ್ತರು ಶಾಕಹಾರ ಸೇವಿಸಿ,ಕಾಲಿಗೆ ಪಾದರಕ್ಷೆ ಹಾಕದಿದ್ದುದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಶಶಿಕುಮಾರ್ ಹಳೇಕೊಟೆ,ನಾಗರಾಜು ಮಗ್ಗಲಮಕ್ಕಿ,ಪ್ರವೀಣ ಮಗ್ಗಲಮಕ್ಕಿ,ರವಿ ಕಿತ್ತಲೆಗಂಡಿ,ರಂಜಿತ ಕಿತ್ತಲೆಗಂಡಿ,ಅಭಿ ಕಿತ್ತಲೆಗಂಡಿ,ನೀತಿನ್ ಕಿತ್ತಲೆಗಂಡಿ,ಹರೀಶ್ ಕಿತ್ತಲೆಗಂಡಿ ಉಪಸ್ಥಿತರಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *