“ಸೇವಾ ಭಾರತಿ ತಂಡದಿಂದ ಸ್ವಚ್ಚತಾ ಕಾರ್ಯ.”
1 min read
ಸೇವಾಭಾರತಿ ಸಮಾಜ ಸೇವಾ ಸಂಘ ಭಾರತೀಬೈಲು ಇವರಿಂದ ಪ್ರತಿ ವರ್ಷದಂತೆ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ,ಬಣಕಲ್ ಹೋಬಳಿಯ,ಬಾನಹಳ್ಳಿಯ ಉಣ್ಣಕ್ಕಿ ಜಾತ್ರಾ ಮೈದಾನದ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯಿತು.
ಸದಾ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಈ ಸಂಘವು ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು , ರಕ್ತದಾನ, ಚಾರ್ಮಾಡಿಯನ್ನು ಒಳಗೊಂಡಂತೆ ಸುತ್ತ ಮುತ್ತಲಿನ ಪ್ರದೇಶಗಳ ಸ್ವಚ್ಛತೆ ಮುಂತಾದ ಕಾರ್ಯಗಳಲ್ಲಿ ತಮ್ಮ ತಂಡದ ಸದಸ್ಯರನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸ್ವಚ್ಚತಾ ಕಾರ್ಯ ಮುಗಿದ ನಂತರ ಗ್ರಾಮಸ್ಥರು ಹಾಗೂ ಉಣ್ಣಕ್ಕಿ ಸಮಿತಿ ಅಧ್ಯಕ್ಷರಾದ ಬಿ.ಎಸ್.ಪ್ರತಾಪ್ ಮಾತನಾಡಿ ನಮ್ಮ ಊರಿನ ಜಾತ್ರಾ ಮಹೋತ್ಸವ ಮುಗಿದ ನಂತರ ಮರುದಿನವೇ ಈ ಸೇವಾ ಭಾರತಿ ಸಮಾಜ ಸೇವಾ ಸಂಘದ ಸದಸ್ಯರೆಲ್ಲರೂ ಪ್ರತೀ ವರ್ಷ ಸ್ವಚ್ಚತಾ ಕಾರ್ಯ ನಡೆಸಿಕೊಟ್ಟು ಗ್ರಾಮದ ಸ್ವಚ್ಚತೆಯನ್ನು ಮಾಡಿಕೊಂಡು ಬರುತ್ತಿರುವುದು ಅಭಿನಂದನಾರ್ಹ. ಸಮಾಜಮುಖಿ ಉತ್ತಮ ಕಾರ್ಯಗಳು ಇನ್ನಷ್ಟು ಈ ಸಂಘಸಂಸ್ಥೆಯಿಂದ ನಡೆಯುವಂತಾಗಲಿ ಅದಕ್ಕೆ ನಮ್ಮ ಊರಿನ ಸಹಕಾರ ಅವರಿಗೆ ಸದಾ ಇರುತ್ತೆ ಎಂದರು.
ಸ್ವಚ್ಚತಾ ಕಾರ್ಯ ಸಂದರ್ಭದಲ್ಲಿ ಸೇವಾ ಭಾರತಿ ಸಮಾಜ ಸೇವ ಸಂಘ ಭಾರತಿ ಬೈಲು ಅಧ್ಯಕ್ಷರಾದ ಶಶಿಧರ್ ಕನ್ನಗೆರೆ. ಉಪಾಧ್ಯಕ್ಷ ಜೀವಿತ್.ಕೆ.ಎಸ್ ಕನ್ನಗೆರೆ,ಕಾರ್ಯದರ್ಶಿ ಶಶಿಕಾಂತ್.ಹೆಚ್.ಎಂ.ಭಾರತಿಬೈಲು, ಖಜಾಂಚಿ ರಂಜಿತ್ .ಕೆ.ಎಸ್. ಕನ್ನಗೆರೆ,ಉಣ್ಣಕ್ಕಿ ಸಮಿತಿ ಅಧ್ಯಕ್ಷರು ಪ್ರತಾಪ್.ಬಿ.ಎಸ್.ಬಾನಹಳ್ಳಿ,ಸುಂದರೇಶ್.ಬಿ.ಪಿ. ಬಾನಹಳ್ಳಿ ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
✍🏻ಬರಹ ಕೃಪೆ.✍🏻
ವಸಂತ್ ಹಾರಗೋಡು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.