“ಪ್ರಥಮ ಹೊರನಾಡ ರಾಷ್ಟ್ರೀಯ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸಂವಾದಕಿಯಾಗಿ ಕಾಫಿನಾಡ ಪ್ರತಿಭೆ ವೈಷ್ಣವಿ.ಎನ್.ರಾವ್ ಆಯ್ಕೆ.”
1 min read
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್,ಕರ್ನಾಟಕ ಘಟಕ ಹಾಗೂ ದೆಹಲಿ ಘಟಕದ ವತಿಯಿಂದ ಇದೇ ನವೆಂಬರ್ 15ರಂದು ನವದೆಹಲಿಯಲ್ಲಿ ನಡೆಯಲಿರುವ ಪ್ರಥಮ ಹೊರನಾಡ ರಾಷ್ಟ್ರೀಯ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಸಾಹಿತಿಗಳೊಂದಿಗೆ ಸಂವಾದಕಿಯಾಗಿ ಚಿಕ್ಕಮಗಳೂರು ನಗರದ ಯುವ ಪ್ರತಿಭೆ ಕಲ್ಕಟ್ಟೆ ಪುಸ್ತಕದಮನೆಯ ವೈಷ್ಣವಿ.ಎನ್.ರಾವ್ ಭಾಗವಹಿಸಲಿದ್ದಾರೆ.
ಆದಿ ಚುಂಚನಗಿರಿ ಶ್ರೀಮಠ ಹಾಗೂ ಪರಿಷತ್ ನಡೆಸಿದ ಅಖಿಲ ಭಾರತ ಮಕ್ಕಳ ಸಾಹಿತ್ಯ ಸಮ್ಮೇಳದಲ್ಲಿ ಕವಿಗೋಷ್ಠಿಯ ಅಧ್ಯಕ್ಷೆಯಾಗಿ,ರಾಜ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೆಯಾಗಿ ಭಾಗವಹಿಸಿದ್ದ ವೈಷ್ಣವಿ,ಈಗಾಗಲೇ ನಾಲ್ಕು ನಾಟಕ ಕೃತಿಗಳಲ್ಲದೇ ಐನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ.ಗಾಯಕಿ,ಚಿತ್ರನಟಿ,ನೃತ್ಯ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಇವರು ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದು ಜಿಲ್ಲೆಗೇ ಹೆಮ್ಮೆ ತಂದಿದೆ ಎಂದು ಖ್ಯಾತ ಮಕ್ಕಳ ತಜ್ಞ ಡಾ. ಜೆ.ಪಿ.ಕೃಷ್ಣಗೌಡ ಹೇಳಿದ್ದಾರೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.