“ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಿ.ಬಿ.ಚಂದ್ರೇಗೌಡರಿಗೆ ಶ್ರದ್ಧಾಂಜಲಿ ಅರ್ಪಣೆ.”
1 min read
ದಿನಾಂಕ 09/11/2023ರ ಗುರುವಾರದಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಮೇಗಲಪೇಟೆಯ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಾಜಿ ಸಚಿವರಾದ ಡಿ.ಬಿ.ಚಂದ್ರೇಗೌಡರ ಶ್ರದ್ಧಾಂಜಲಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ದಿವಂಗತ ಡಿ.ಬಿ.ಚಂದ್ರೇಗೌಡರ ಕುರಿತು ಸಾಹಿತಿ ಹಳೆಕೋಟೆ ರಮೇಶ್ ಅವರು ಮಾತನಾಡಿ,ಶ್ರೀಯುತ ಡಿ.ಬಿ. ಚಂದ್ರೇಗೌಡರು ಹಿರಿಯ ರಾಜಕಾರಣಿ ಉನ್ನತ ಚಿಂತನೆಗಳ ಸಮಾಜವಾದದ ಹಿನ್ನೆಲೆಯಿಂದ ಬಂದ, ಸಂವಿಧಾನದ ಬಗ್ಗೆ ಆಳವಾದ ಜ್ಞಾನ ಹೊಂದಿ ಸಾಮಾಜಿಕ ಬದುಕು ಕಂಡವರಾಗಿದ್ದವರು, ರಾಜಕಾರಣದಲ್ಲಿ ಯಾವುದೇ ಕಪ್ಪು ಚುಕ್ಕೆಗೆ ಗುರಿಯಾಗದೆ, ನಾಡಿನ ಹಿರಿಯ ಸಜ್ಜನ ರಾಜಕಾರಣಿ ಎನಿಸಿ ಧ್ರುವತಾರೆಯಾಗಿದ್ದಾರೆ ಎಂದು ಹೇಳಿದರು.
ರಾಜಕಾರಣದಲ್ಲಿ ಮಾದರಿಯಾಗಿ ಕಾಣುವ, ವಿದ್ವತ್ತು ಲೋಕಾನುಭವ ವಾಚನಾಭಿರುಚಿಗಳಿಂದ ಕೂಡಿದ ಸಾಧಕರಾಗಿ ಶ್ರೀಯುತರು ಪರಿಷತ್ತಿನ ಅಜೀವ ಸದಸ್ಯರಾಗಿ, ದತ್ತಿದಾನಿಗಳಾಗಿ ಪರಿಷತ್ತಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸದಾ ಸ್ಪಂದಿಸುತಿದ್ದರು. ಇವರು ಪೂರ್ಣಚಂದ್ರನಂತೆ ಸದಾ ನೆನಪಿನ ಪುಟದಲ್ಲಿರಲಿ,ಇವರ ಅಗಲಿಕೆ ಅತೀವ ನೋವು ತಂದಿದೆ ಎಂದು ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಶಾಂತಕುಮಾರ್ ನುಡಿದರು.
ಪ್ರಾಮಾಣಿಕ ನಾಲ್ಕು ಜನ ಲೋಕಸಭಾ ಸದಸ್ಯರನ್ನು ಮೂಡಿಗೆರೆ ನೀಡಿದೆ,ಅವರಲ್ಲಿ ಚಂದ್ರೇಗೌಡರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ತಮ್ಮ ಸಂಸತ್ ಸ್ಥಾನ ತ್ಯಾಗ ಮಾಡಿ ಪ್ರಾಮಾಣಿಕ ವ್ಯಕ್ತಿ ಎನಿಸಿದರು ರಾಜಕೀಯ ಕ್ಷೇತ್ರದಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿದರೂ ಮುಖ್ಯಮಂತ್ರಿ ಆಗದಿದ್ದುದು ಆಶ್ಚರ್ಯ! ಆದರೂ ಅವರ ಆದರ್ಶ ಗುಣಗಳಲ್ಲಿ ಒಂದಾದರೂ ಅಳವಡಿಸಿಕೊಂಡು ಈ ಮೂಲಕ ಗೌರವಿಸೋಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕರಾದ ಮಗ್ಗಲಮಕ್ಕಿ ಗಣೇಶ್ ನುಡಿದರು.
ಈ ಸಂದರ್ಭದಲ್ಲಿ ಪರಿಷತ್ತಿನ ಕಾರ್ಯದರ್ಶಿ ಆರ್ ಪ್ರಕಾಶ್,ನಾರಾಯಣ್,ತಾಲ್ಲೂಕು ಪ್ರಧಾನ ಸಂಚಾಲಕರಾದ ಡಿ.ಕೆ.ಲಕ್ಷ್ಮಣಗೌಡ, ಪರಿಷತ್ತಿನ ಕಸಬಾ ಹೋಬಳಿ ಅಧ್ಯಕ್ಷರಾದ ಎಂ.ಎಸ್.ನಾಗರಾಜ್,ಕಾರ್ಯದರ್ಶಿ ನವೀನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಕ್ಕಿ ಮಂಜು,ಖಜಾಂಚಿ ಹಸೈನಾರ್,ವಿನೋದ್ ಬಿದರಹಳ್ಳಿ,ಎಂ.ಕೆ.ವೀಣಾ,ಎಂ.ಕೆ. ವೇಣಿ,ಲತಾ,ವಿದ್ಯಾ ಮುಂತಾದವರು ಉಪಸ್ಥಿತರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.