“ಗುತ್ತಿಗೆದಾರರಿಗೆ ಆಟ….ಸಿಬ್ಬಂದಿಗಳಿಗೆ ಪ್ರಾಣ ಸಂಕಟ : ಇದು ಪಶು ಆಸ್ಪತ್ರೆಯ ಕಥೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಪಟ್ಟಣದಲ್ಲಿರುವ ಪಶು ಆಸ್ಪತ್ರೆ ಕಟ್ಟಡ ಪೂರ್ಣಗೊಳ್ಳದೆ ಉದ್ಘಾಟನೆ ಮಾಡಲಾಗಿತ್ತು.ಈಗ ಒಂದು ವರ್ಷದ ಹಿಂದೆ ಪೂರ್ಣಗೊಂಡ ಕಟ್ಟದ ಮತ್ತೆ ಕುಸಿಯತೊಡಗಿದೆ.ಸಿಬ್ಬಂದಿ ಕೈಯಲ್ಲಿ ಪ್ರಾಣ ಹಿಡಿದು ಕೆಲಸ ಮಾಡುವಂತಾಗಿದೆ.
ಮೂವತ್ತು ಲಕ್ಷ ವ್ಯಯ ಮಾಡಿ ಗುತ್ತಿಗೆದಾರ ಉದ್ಧಾರ ಆಗಿದ್ದಾನೆ.ಸರ್ಕಾರಿ ಕೆಲಸವನ್ನು ಯಾವ ಜನ ಪ್ರತಿನಿಧಿಗಳು ನೊಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು ಇವರ ಜನ ಸೇವೆಯನ್ನು ಎತ್ತಿ ತೋರಿಸುತ್ತದೆ.
ಮೂಡಿಗೆರೆ ಪಟ್ಟಣದ ಹೃದಯ ಭಾಗದಲ್ಲಿರುವ ಈ ಕಟ್ಟಡದ ಪರಿಸ್ಥಿತಿ ಹೀಗಿರುವಾಗ ಉಳಿದ ಕಾಮಗಾರಿಗಳ ಸ್ಥಿತಿ ಹೇಳತಿರದಾಗಿದೆ.
ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಗುತ್ತಿಗೆದಾರನ ಮೇಲೆ ಕ್ರಮ ಕೈ ಕೊಳ್ಳಬೇಕು ಎನ್ನುವುದೇ ಸಾರ್ವಜನಿಕರ ಒತ್ತಾಯ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.