“ನಿವೇಶನಕ್ಕಾಗಿ ಧರಣಿ.”
1 min read
ದಿನಾಂಕ 16/10/2023 ರ ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ಗಬ್ಗಲ್ ಟಾಟಾ ಎಸ್ಟೇಟ್ ನಿಂದ ನೂರಾರು ನಿವೇಶನ ರಹಿತರು ಮೆರವಣಿಗೆ ತೆರಳಿ ಕೂವೆ ಗ್ರಾಮ ಪಂಚಾಯತಿ ಮುಂದೆ ಧರಣಿ ನಡೆಸಿದರು.
ನಾವು ಈಗಾಗಲೇ ಕೂವೆ ಗ್ರಾಮ ಪಂಚಾಯತಿಗೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ 15 ವರ್ಷ ಕಳೆದರೂ ನಿವೇಶನ ನೀಡದೆ ಇರುವುದರಿಂದ ಕೂವೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇದೀಗ ಸರ್ಕಾರಿ ಭೂಮಿ ಅಕ್ರಮ ಭೂ ಮಂಜೂರಾತಿ ಮಾಡಿರುವ ಭೂಮಿ ಮತ್ತು ಅಧಿಕಾರಿಗಳ ಬೇನಾಮಿ ಆಸ್ತಿ ಈ ಗ್ರಾಮ ಪಂಚಾಯತಿಯಲ್ಲಿ ನೂರಾರು ಎಕರೆ ಲಭ್ಯವಿದ್ದು ಇದನ್ನು ಬಿಡಿಸಿ ನಿವೇಶನ ರಹಿತರಿಗೆ ಊರಿನ ಅಭಿವೃದ್ಧಿಗಾಗಿ, ಸ್ಮಶಾನ,ಆಟದ ಮೈದಾನ,ಅಂಬೇಡ್ಕರ್ ಭವನ ಇತರೆ ಊರಿನ ಅಭಿವೃದ್ಧಿಗಾಗಿ ಮೀಸಲಿಡಬೇಕೆಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ ನೇತೃತ್ವದಲ್ಲಿ ನಿವೇಶನ ರಹಿತರ ಹೋರಾಟ ಸಮಿತಿ ಧರಣಿ ನಡೆಸಲಿದೆ. ನಿವೇಶನ ರಹಿತರ ಹೋರಾಟ ಸಮಿತಿ ಮತ್ತು ಸೂರಿಗಾಗಿ ಸಮರ ಸಮಿತಿಯ ನೇತೃತ್ವದಲ್ಲಿ ಧರಣಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಭಾರತ ಕಮ್ಯೂನಿಸ್ಟ್ ಪಕ್ಷದ ತಾಲ್ಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು ಮಾತನಾಡಿ ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂವೆ ಗ್ರಾಮದ 256,164,275,271,68, ಕಲ್ಮನೆ ಗ್ರಾಮದ 51,46,49, ಕೆ.ತಳಗೂರು 49 ಹಾದಿಓಣಿ 56,22,21 ಇಲ್ಲಿ ಸರ್ಕಾರಿ ಜಮೀನಿದ್ದರೂ ನಿವೇಶನ ರಹಿತರಿಗೆ ನಿವೇಶನ ಕೊಡಲು ಪಂಚಾಯಿತಿಗೆ ಸಾಧ್ಯವಾಗಿಲ್ಲ ಆದರೆ ಈ ಎಲ್ಲ ಸರ್ವೆ ನಂಬರ್ ನಲ್ಲಿ ಅಕ್ರಮ ಭೂ ಮಂಜೂರಾತಿ ಮಾಡಲು ಮಾತ್ರ ಅಧಿಕಾರಿಗಳಿಗೆ ಸಾಧ್ಯವಾಗಿದೆ ಇದೇ ಗ್ರಾಮ ಪಂಚಾಯಿತಿ ಯಲ್ಲಿ ಅಕ್ರಮ ಮಂಜೂರಾತಿಯಲ್ಲಿ ಭಾಗಿಯಾಗಿರುವ ಅಧಿಕಾರಿಯ ಬೇನಾಮಿ ಆಸ್ತಿ ಇದ್ದು ಅದನ್ನು ಸ್ಥಳೀಯ ಗ್ರಾಮ ಪಂಚಾಯಿತಿಯವರು ತೆರವುಗೊಳಿಸಿ ನಿವೇಶನ ರಹಿತರು ಹಾಗೂ ಊರಿನ ಅಭಿವೃದ್ಧಿಗಾಗಿ ಮೀಸಲಿಡಬೇಕು ಅದಕ್ಕಾಗಿ ನಮ್ಮ ಬೇಡಿಕೆ ಈಡೇರಿಕೆಗಾಗಿ ಸ್ಥಳೀಯ ಪಂಚಾಯಿತಿಯು ಎದುರು ನಿರ್ಣಯ ಕೈಗೊಳ್ಳಬೇಕೆಂದು ಧರಣಿ ಆರಂಭಿಸಿದ್ದೇವೆ ಪಂಚಾಯಿತಿ ನಮ್ಮ ಬೇಡಿಕೆಗೆ ಸ್ಪಂದಿಸುವ ಮೂಲಕ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಸುಂದರ್ ಬಾಳೂರು,ಮಂಜು,ರವಿ, ಲೋಕೇಶ್,ಮಲ್ಲೇಶ್,ಸಿಗಮಣಿ,ರೇಣುಕಾ,ಲಕ್ಷ್ಮೀ, ಅನಿಲ್,ಬಂಗಾರಪ್ಪ,ಅಕ್ಷತ್,ಚಂದ್ರು,ಅನಿಲ್ ಕುಮಾರ್,ನಾರಾಯಣ,ಮಂಜುಳಾ,ಪ್ರೇಮ,ಸೀನಾ,ಪುಷ್ಪ ಮತ್ತಿತರರು ಉಪಸ್ಥಿತರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.