ಕಲಾವಿದರು ಕಲಾವಿದರನ್ನು ಮೊದಲು ಗೌರವಿಸಿ – ಶ್ರೀಮತಿ ಹರಿಣಾಕ್ಷಿ.
1 min read
ಕಲಾವಿದರು ಮೊದಲು ಕಲಾವಿದರನ್ನು ಗೌರವಿಸಬೇಕು. ಆಗ ಮಾತ್ರ ಕಲಾವಿದರ ಕಲಾ ಬದುಕಿಗೆ ಗೌರವ ಸಿಕ್ಕಂತಾಗುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ ತಿಳಿಸಿದರು. ಅವರು ಮೂಡಿಗೆರೆ ತಾಲ್ಲೂಕಿನ ಕುನ್ನಹಳ್ಳಿಯ ಅಂಬೇಡ್ಕರ್ ನಗರದಲ್ಲಿ ಕಾಫಿನಾಡ ಸಿರಿ ಫೇಸ್ ಬುಕ್ ಪೇಜಿನ ಸುವರ್ಣ ಸಂಚಿಕೆಯ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಫೇಸ್ ಬುಕ್ ಪೇಜ್ ಗಳ ಅಡ್ಮಿನ್ ಗಳನ್ನು ಮತ್ತು ಕಲಾವಿದರನ್ನು ಗೌರವಿಸಲಾಯಿತು.ಮತ್ತು ಸ್ಥಳೀಯ ಮತ್ತು ಜಿಲ್ಲೆಯ ವಿವಿಧ ಕಲಾವಿದರು ಸುವರ್ಣ ಸಂಚಿಕೆಯ ಸಂಭ್ರಮದಲ್ಲಿ ತಮ್ಮ ಗಾನ ಮಾಧುರ್ಯದಿಂದ ವೀಕ್ಷಕರನ್ನು ರಂಜಿಸಿದರು.
ಸಮಾರಂಭದಲ್ಲಿ ಕಾಫಿನಾಡ ಸಿರಿ ಪೇಜಿನ ಅಡ್ಮಿನ್ ಗಳಾದ ಮಂಜುನಾಥ್ ಸುವರ್ಣ. ರಮೇಶ್. ಚಂದ್ರೇಶ್. ಅವಿನ್ ಸ್ವರಸಂಗಮದ ಅಡ್ಮಿನ್ ಗಳಾದ ಮಗ್ಗಲಮಕ್ಕಿ ಗಣೇಶ್. ಬಕ್ಕಿ ಮಂಜುನಾಥ್.ವಸಂತ್ ಹಾರ್ಗೋಡು. GNE ಪೇಜಿನ ಸುಂದರ ಮುಗುಳಿ. ಶಂಕರ್ ಮಾಸ್ಟರ್. ASN ಕ್ರಿಯೇಷನ್ ನ ಸ್ಮೈಲಿ ಸದಾ. ಕಲಾವಿದರಾದ ಮಹೇಂದ್ರ ಚಿಕ್ಕಮಗಳೂರು.ಕೃಷ್ಣಪ್ಪ ಕಿರುಗುಂದ. ರವೀಶ್ ಶೃಂಗೇರಿ.ಕೃಷ್ಣ ಮಾಸ್ಟರ್ . ಅಶ್ವಿನಿ. ಬೇಬಿ ಅಕ್ಷರ. ಆಶಾ ಜಯಕುಮಾರ್.ಕೃಷ್ಣಪ್ಪ ಜಾವಳಿ. ಮಂಜು ಬಿಜಾಪುರ.ಉಮೇಶ್.ಭುವನೇಂದ್ರ.ಸಿಂಚನ. ಸುರೇಶ್. ಮತ್ತು ಸ್ಥಳೀಯ ಹಾಡುಗಾರರು.
ಬರಹ ಮತ್ತು ಚಿತ್ರ ಕೃಪೆ.
ವಸಂತ್ ಹಾರ್ಗೋಡು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್ ಅವಿನ್ ಟಿ ವಿ.




